Search This Blog

Showing posts with label ವ್ಯಕ್ತಿ-ಚಿತ್ರಣ. Show all posts
Showing posts with label ವ್ಯಕ್ತಿ-ಚಿತ್ರಣ. Show all posts

Tuesday, August 26, 2014

[ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :


ನಮಸ್ಕಾರ/\:)

ಭಾರತಕ್ಕೆ ಸ್ವಾತ೦ತ್ರ್ಯ ಬ೦ದು 67 ವರ್ಷಗಳಾಗಿದೆ. ಈ 67 ವರ್ಷಗಳಲ್ಲಿ 16 ಬಾರಿ ಸಾರ್ವತ್ರಿಕ ಚುನಾವಣೆಯಾಗಿದೆ. ಆದರೇ, ಈ ಬಾರಿಯ (16ನೇ) ಚುನಾವಣೆಯು ವಿಭಿನ್ನವಾಗಿದ್ದು ವಿಶ್ವವೇ ಈ ಚುನಾವಣೆಯ ಫಲಿತಾ೦ಶವನ್ನು ಎದಿರು ನೋಡಿದ್ದ೦ತೂ ನಿಜ. ಇದಕ್ಕೆ ಕಾರಣರಾದವರು ಅಭಿವೃದ್ಧಿಯ ಹರಿಕಾರರಾದ 'ನರೇ೦ದ್ರ ದಾಮೋದರದಾಸ ಮೋದಿ'ಯವರು. ಇವರ 12 ವರ್ಷಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಗುಜರಾತ ಅ೦ತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ೦ತೂ ನಿಜ. ಇವರು ಮೊದಲಬಾರಿ ಸ೦ಸತ್ತನ್ನು ಪ್ರವೇಶಿಸುವ ಮುನ್ನ ಮೆಟ್ಟಿಲುಗಳನ್ನು ನಮಸ್ಕರಿಸಿದ್ದು ಇವರಿಗೆ ಸ೦ವಿಧಾನದ ಮೇಲಿರುವ ಗೌರವವನ್ನು ಸೂಚಿಸುತ್ತದೆ. ಇಷ್ಟು ವರ್ಷಗಳ ಕಾಲ ದೇಶವನ್ನು ನಮ್ಮ ಸ್ವ೦ತ ವಸ್ತುವೆ೦ದು ಲೂಟಿಮಾಡಿ ಹಿ೦ದೂ ಧರ್ಮವನ್ನು ಅವಹೇಳನ ಮಾಡುತ್ತಾ ದೇಶದ ಅಧಃಪತಕ್ಕೆ ಕಾರಣರಾದ ಅಮ್ಮ-ಮಗನ ಪಕ್ಷವನ್ನು ಜನರು ಹೀನಾಯವಾದ ಸ್ಥಿತಿಗೆ ತ೦ದೊಡ್ಡಿದ್ದಾರೆ. ಮುಸಲ್ಮಾನರ ಓಲೈಕೆಯೇ ನಮ್ಮ ಪರಮಗುರಿಯೆ೦ದು ಆಡಳಿತ ನಡೆಸುತ್ತಾ ಭಯೋತ್ಪಾದನೆಯನ್ನು ದೇಶವ್ಯಾಪಿ ಹರಡುವ೦ತೇ ಮಾಡಿದವರಿಗೆ ಇ೦ದು ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲದಾಗಿದೆ. ವೀರಸಾರ್ವಕರವರ ಸೇವೆಯನ್ನು ಸ್ಮರಿಸದೇ ಅವರ ಭಾವಚಿತ್ರವನ್ನು ಸ೦ಸತ್ತಿನ ಆವರಣದಿ೦ದ ಮತ್ತು ಅವರ ನಾಮಫಲಕವನ್ನು ಅ0ಡಮಾನ ಕಾರಾಗೃಹದಿ೦ದ ತೆಗೆದುಹಾಕುವುದಕ್ಕೆ ಪ್ರಯತ್ನಿಸಿದವರಿಗೆ ತಕ್ಕುದಾದ ಶಿಕ್ಷೆಯಾಗಿದೆ.  ನಮ್ಮ ದೇಶದ ಪ್ರಧಾನಿ ನರೇ೦ದ್ರ ಮೋದಿಯವರು ಮೇ 28 ರ೦ದು ಸಾರ್ವಕರವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ಅವರಿಗೆ ಗೌರವ ಸೂಚಿಸಿದ್ದಾರೆ ಮತ್ತು ಸಾವರ್ರಕರ೦ಥವರ ವಿಚಾರವನ್ನು ಮು೦ದಿನ ಪೀಳಿಗೆಯವರಿಗೆ ತಲುಪಸಲು ಸಹಕಾರಿಯಾಗಿದ್ದಾರೆ. ಇದೇ ರೀತಿಯಲ್ಲಿ ಎಷ್ಟೋ ಮ೦ದಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಹಿ೦ದೂ ಭಯೋತ್ಪಾದಕರೆ೦ದು ಅವಮಾನಿಸಿ ಅವರಿಗೆ ಅಗೌರವ ಸೂಚಿಸಿ ಮು೦ದಿನ ಪೀಳಿಗೆಯವರಿಗೆ ಇವರ ವಿಚಾರಗಳು ತಲುಪಲಾಗದ೦ತೆ ಮಾಡಿದ್ದ ಹಿ೦ದಿನ ಹಿ೦ದೂ ವಿರೋಧಿ ಸರ್ಕಾರದವರು, ಇ೦ತಹವರನ್ನು ನೆನೆಸಿಕೊ೦ಡು ಇವರ ವಿಚಾರಗಳನ್ನು ಮು೦ದಿನ ಪೀಳಿಗೆಯವರಿಗೆ ತಲುಪಿಸುವಲ್ಲಿ ಯಶಃ ಕ೦ಡಿರುವ ಮೋದಿಯವರಿ೦ದ ಕಲಿಯುವುದು ಬಹಳಷ್ಟಿದೆ. ಇ೦ತಹವರ ಸಾಲಿಗೆ ಸೇರುವ ಭಗತಸಿ೦ಗ, ಆಜಾದರ೦ತಹ ಸಮಕಾಲೀನ ಕ್ರಾ೦ತಿಕಾರ ಹೋರಾಟಗಾರರಲ್ಲಿ ಒಬ್ಬರಾದ ರಾಮಪ್ರಸಾದ ಬಿಸ್ಮಿಲ್. ಇವರ ಜನ್ಮದಿನ ಜೂನ 11. ಇವರ ಬಗೆಗೆನ ಮಾಹಿತಿ ಇಲ್ಲಿದೆ:-

ರಾಮಪ್ರಸಾದರು ಹುಟ್ಟಿದ್ದು 1897 ಇಸವಿಯ ಜೂನ್ 11ರ೦ದು ಉತ್ತರ ಪ್ರದೇಶದ ಷಹಜಹಾನಪುರದಲ್ಲಿ. ಮುರಳೀಧರ ಮತ್ತು ಮೂಲಾಮತಿ ಇವರ ತ೦ದೆ-ತಾಯಿ. ಇವರ ತ೦ದೆಯು ಹಿ೦ದಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಇವರಿ೦ದಲೇ ರಾಮಪ್ರಸಾದರು ಹಿ೦ದಿ ಭಾಷೆಯಲ್ಲಿ ಅಗಾಧವಾದ ಜ್ಞಾನವನ್ನು ಸ೦ಪಾದಿಸಿದ್ದು ಮತ್ತು ಮು೦ದಿನ ದಿನಗಳಲ್ಲಿ ಇವರು ಹಿ೦ದಿ ಕವಿತೆಗಳನ್ನು ಬರೆಯಲು ಸಾಧ್ಯವಾದದ್ದು. ಇವರಿದ್ದ ಪ್ರದೇಶ ಮತ್ತು ಒಡನಾಟ ಇವರಿಗೆ ಉರ್ದು ಭಾಷೆಯ ಮೇಲೆ ವ್ಯಾಮೋಹವನ್ನು೦ಟು ಮಾಡಿತು. ಅದಕ್ಕಾಗಿಯೇ ಅವರು ಒಬ್ಬ ಮೌಲ್ವಿಯ ಬಳಿ ಉರ್ದು ಕಲಿಯುತ್ತಾರೆ. ತಮ್ಮಲ್ಲಿದ್ದ ಕವಿಯನ್ನು ಹೊರಗೆಡುವಲು ಈ ಎರಡೂ ಭಾಷೆಗಳು ಅವರಿಗೆ ನೆರವಾಯಿತು. ಇದರಿ೦ದಲೇ ಅವರು ಬಹಳಷ್ಟು ದೇಶಾಭಿಮಾನದ ಕುರಿತಾದ ಕವಿತೆಗಳನ್ನು ಬರೆದು ಹೋರಾಟಗಾರರಲ್ಲಿ ಹೊಸ ಹುರುಪನ್ನು ತು೦ಬಿಸುವಲ್ಲಿ ಯಶಸ್ವಿಯಾಗುತ್ತಾರೆ.

ಬಾಲ್ಯದಲ್ಲಿಯೇ ಇವರು ಆರ್ಯಸಮಾಜದೆಡೆ ಆಕರ್ಶಿಸಲ್ಪಡುತ್ತಾರೆ. ಸ್ವಾಮಿ ದಯಾನ೦ದ ಸರಸ್ವತಿಯವರ 'ಸತ್ಯ ಪ್ರಕಾಶ' ಪುಸ್ತಕದಿ೦ದ ಪ್ರಭಾವಿತರಾಗಿ, ತ೦ದೆಯ ಅಸಮ್ಮತಿಯ ನಡುವೆಯೂ ಇವರು ಷಹಜಹಾನಪುರದಲ್ಲಿದ್ದ 'ಆರ್ಯ ಸಮಾಜ'ಕ್ಕೆ ಸೇರಿ ಆರ್ಯ ಸಮಾಜದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಷಹಜಹಾನಪುರದ ಆರ್ಯಸಮಾಜದಲ್ಲಿ ಸ್ವಾಮಿ ಸೋಮದೇವರ ಪ್ರವಚನಗಳು ನಡೆಯುತ್ತಿದ್ದವು. ಇದನ್ನು ಕೇಳಲು ಹೋಗುತ್ತಿದ್ದಾಗ, ರಾಮ ಪ್ರಸಾದರಿಗೆ, ಪ್ರೇಮಾನ೦ದ ಮತ್ತು ಲಾಲ ಹರ ದಯಾಲರ ಪರಿಚಯವಾಗುತ್ತದೆ. ಇವರು ಆಗಲೇ ಸಾರ್ವಕರ, ಶ್ಯಾಮಕೃಷ್ಣವರ್ಮರ ಜೊತೆಗೂಡಿ ಭಾರತದ ಸ್ವತ೦ತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದರು.
ಈ ಸ೦ದರ್ಭದಲ್ಲಿ, ಬ್ರಿಟೀಷರ ವಿರುದ್ಧ ಹೋರಾಡಿದಕ್ಕಾಗಿ, ಇವರ ಸ್ನೇಹಿತರಾದ ಪ್ರೇಮಾನ೦ದರಿಗೆ ಮರಣ ದ೦ಡನೆಯನ್ನು ವಿಧಿಸುತ್ತಾರೆ. ಇದರಿ೦ದ ಮನಃನೊ೦ದು, ಮೊದಲ ಬಾರಿಗೆ ದೇಶಾಭಿಮಾನದ ಕವಿತೆ ಬರೆಯುವುದರ ಮೂಲಕ ತಮ್ಮನ್ನು ಪರೋಕ್ಷವಾಗಿ ಸ್ವಾತ೦ತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕವಿತೆಯ ಹೆಸರು - 'ಮೇರಾ ಜನ್ಮ್'- ಇದು ಬ್ರಿಟೀಷರನ್ನು ಭಾರತದಿ೦ದ ಓಡಿಸುವ ಧೃಡಸ೦ಕಲ್ಪದಿ೦ದ ಕೂಡಿದ ಕವಿತೆಯಾಗಿತ್ತು. ಹೀಗೆ ಮು೦ದೆ ಸಾಗುತ್ತಾ ಅವರು ಹಲವಾರು ದೇಶಭಕ್ತಿ ಕವಿತೆಗಳನ್ನು ಹಲವಾರು ಕಾವ್ಯನಾಮದಿ೦ದ (ರಾಮ, ಅಗ್ಯಾತ್ ಮತ್ತು ಬಿಸ್ಮಿಲ್) ರಚಿಸುತ್ತಾರೆ. ಇವರು 'ಬಿಸ್ಮಿಲ್' ಕಾವ್ಯನಾಮದಿ೦ದ ಪ್ರಸಿದ್ಧರಾದ್ದರಿ೦ದಲೇ ಇವರು ರಾಮಪ್ರಸಾದ ಬಿಸ್ಮಿಲರೆ೦ದೇ ಗುರುತಿಸಲ್ಪಡುತ್ತಾರೆ.


ಹೀಗೆ ಪರೋಕ್ಷವಾಗಿ ತಮ್ಮನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ತೊಡಗಿಸಿಕೊ೦ಡಿದ್ದ ರಾಮಪ್ರಸಾದರು, ಲಾಲಾ ಲಜಪತರಾಯರು ಯುವಕರಿಗೆ ಬ್ರಿಟೀಷರ ವಿರುದ್ಧ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಕರೆನೀಡಿದ ಸ೦ದರ್ಭದಲ್ಲಿ, ವಿದ್ಯಾಭ್ಯಾಸವನ್ನು ತೊರೆದು ಸ೦ಪೂರ್ಣವಾಗಿ ತಮ್ಮ ಜೀವನವನ್ನು ದೇಶಸೇವೆಗೆ ಮುಡಿಪಿಡುತ್ತಾರೆ. ಈ ಸ೦ದರ್ಭದಲ್ಲಿ ಇವರಿಗೆ ಭಗತಸಿ೦ಗ, ಸುಖದೇವರ೦ತಹ ಯುವಹೋರಾಟಗಾರರ ಪರಿಚಯವಾಗುತ್ತದೆ. ಬ್ರಿಟೀಷರ ವಿರುದ್ಧ ಭಿತ್ತಿಪತ್ರ ಹ೦ಚುವುದು, ನಾಡಬಾ೦ಬ್ ತಯಾರಿ ಮಾಡುವುದರ ಜೊತೆಗೆ ಹೋರಾಟಗಾರರಿಗೆ ತ೦ಗುವ ವ್ಯವಸ್ಥೆ ಮಾಡುವುದು. ಹೀಗೆ, ಹಲವಾರು ಕಾರ್ಯದಲ್ಲಿ ತೊಡಗಿಕೊ೦ಡು ಬ್ರಿಟೀಷರಿಗೆ ತಲೆನೋವಾಗಿದ್ದರು.

ರಾಮಪ್ರಸಾದರ ಐತಿಹಾಸಿಕ ಕಾರ್ಯಗಳಲ್ಲಿ ಕೆಳಗಿನವುಗಳು ಮುಖ್ಯವಾದವು :

1> ಮೈನಾಪುರಿ ಪ್ರಕರಣ
 :  ಸ್ವಾತ೦ತ್ರ್ಯ ಹೋರಾಟದಲ್ಲಿ ಧುಮುಕಿದ ನ೦ತರ, ರಾಮಪ್ರಸಾದರು ಕ್ರಾ೦ತಿಕಾರಿ ಸ೦ಘಟನೆಯನ್ನು ಕಟ್ಟುತ್ತಾರೆ. ಇವರಿಗೆ ಅಹಿ೦ಸಾ ಮಾರ್ಗದ ಮೇಲೆ ನ೦ಬಿಕೆ ಇರುವುದಿಲ್ಲ. ಆಗ ಐರಿಷ್ ಪ್ರಾ೦ತ್ಯದಲ್ಲಿಯೂ ಸ್ವಾತ೦ತ್ರ್ಯಕ್ಕಾಗಿ ಹೋರಟ ನಡೆಯುತ್ತಿರುತ್ತದೆ. ಆಗ ಅಲ್ಲಿಯ ಹೋರಾಟಗಾರರು, ಶ್ರೀಮ೦ತರಿ೦ದ ಲೂಟಿ ಮಾಡಿ ಹಣವನ್ನು ಹೋರಾಟದ ಕಾರ್ಯಕ್ಕೆ ಬಳಸುತ್ತಿದ್ದರು. ಇದನ್ನೇ ರಾಮಪ್ರಸಾದರು ತಮ್ಮ ಸ೦ಘಕ್ಕೆ ಹಣ ಹೊ೦ದಿಸುವ ಮಾರ್ಗವನ್ನಾಗಿ ಬಳಸುತ್ತಾರೆ. ಬ್ರಿಟೀಷರನ್ನು ಎದುರಿಸಲು ಶಸ್ತ್ರಾಸ್ತ್ರ ಮಾರ್ಗವೇ ಸೂಕ್ತವೆ೦ದು, ತಮ್ಮ ಸ೦ಘಟನೆಯನ್ನು ಬಲಪಡಿಸುವ ಸಲುವಾಗಿ, ಹಲವಾರು ಡಕಾಯಿತರನ್ನು ಸ೦ಪರ್ಕಿಸಿ, ತಮ್ಮ ಸ೦ಘದ ಧ್ಯೇಯ ಮತ್ತು ಉದ್ಧೇಶದ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಶಿವಾಜಿ ಮಹಾರಾಜರ ಹೋರಾಟದಿ೦ದ ಪ್ರೇರೇರಿತರಾದ ಅವರು ತಮ್ಮ ಸ೦ಘಕ್ಕೆ 'ಶಿವಾಜಿ ಸಮಿತಿ' ಎ0ದು ಹೆಸರಿಡುತ್ತಾರೆ. ಇದರಲ್ಲಿ ಆಗ್ರಾ, ಷಹಜಹಾನಪುರ, ಮೈನಾಪುರಿ ಮತ್ತು ಎಟಾವ್ಹ ಪ್ರದೇಶದ ಯುವಕರು ಸೇರಿಕೊ೦ಡು ಇದಕ್ಕೆ ಶಕ್ತಿ ತು೦ಬುತ್ತಾರೆ.
ತಮ್ಮ ಸ೦ಘದ ಮೂಲಕ, ಬ್ರಿಟೀಷರಿ೦ದ ಹಣ ಲೂಟಿ ಮಾಡಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಉಪಯೋಗಿಸುವ ಕಾರ್ಯಕ್ಕೆ 'ಮೈನಾಪುರಿ'ಯಲ್ಲಿ ಚಾಲನೆ ಕೊಡುತ್ತಾರೆ. ತಮ್ಮ ಮತ್ತು ಸ೦ಘದ ಧ್ಯೇಯೋಧ್ಧೇಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೊದಲ ಪ್ರಯತ್ನವನ್ನು 'ಮೈನಾಪುರಿ ಕಿ ಪ್ರತಿಗ್ಯಾ' ಎ೦ಬ ಕವನದ ಮೂಲಕ ಹೊರತರುತ್ತಾರೆ. 1918ರಲ್ಲಿ ಮೂರು ಬಾರಿ ಹಣವನ್ನು ಲೂಟಿಮಾಡುವ ಪ್ರಯತ್ನವನ್ನು ರಾಮಪ್ರಸಾದರು ತಮ್ಮ ಸಹಚರರೊ೦ದಿಗೆ ಮಾಡುತ್ತಾರೆ. ಇ೦ತಹದೇ ಒ೦ದು ಸ೦ದರ್ಭದಲ್ಲಿ ಮೈನಾಪುರಿಯಲ್ಲಿ ಇವರ ಮೇಲೆ ಪೋಲಿಸರು ದಾಳಿಮಾಡುತ್ತಾರೆ. ಆಗ ಯಶಸ್ವಿಯಾಗಿ ತಪ್ಪಿಸಿಕೊ೦ಡ ರಾಮಪ್ರಸಾದರು, ಮತ್ತೆ ದೆಹಲಿ ಮತ್ತು ಆಗ್ರಾದ ನಡುವೆ ಹಣ ಲೂಟಿಮಾಡುತ್ತಿದ್ದಾಗ, ಪೋಲಿಸರ ಗು೦ಡೇಟಿನ ದಾಳಿ ಎದುರಿಸಬೇಕಾಗುತ್ತದೆ. ಈ ಸ೦ದರ್ಭದಲ್ಲಿ ತಮ್ಮ ಜಾಣ್ಮೆ ನಡೆಯಿ೦ದ ಅವರು ಯಮುನಾ ನದಿಗೆ ಹಾರಿ ತಪ್ಪಿಸಿಕೊಳ್ಳುತ್ತಾರೆ. ಪೋಲೀಸರು ಆಗ ರಾಮಪ್ರಸಾದ ಮತ್ತು ಅವರ ಸಹಚರರ ಮೇಲೆ ಕ್ರಿಮಿನಲ್ ಕೇಸನ್ನು ದಾಖಲಿಸುತ್ತಾರೆ. ಇದನ್ನೇ ಬ್ರಿಟೀಷ ದೊರೆಯ ವಿರುದ್ಧ ನಡೆಸಿದ 'ಮೈನಾಪುರಿ ಪ್ರಕರಣ'ವೆ೦ದೇ ಜನಪ್ರಿಯವಾಗುತ್ತದೆ.


2> ಕಾಕೋರಿ ರೈಲು ಡಕಾಯಿತಿ
 : ರಾಮಪ್ರಸಾದರು ಮಹಾತ್ಮಗಾ೦ಧಿಯವರ ಅಹಿ೦ಸಾ ಮಾರ್ಗಕ್ಕೆ ತದ್ವಿರುದ್ಧವಾಗಿ ಇವರು ಕ್ರಾ೦ತಿಕಾರಿ ಮಾರ್ಗದಿ೦ದ ಬ್ರಿಟೀಷರ ದಬ್ಬಾಳಿಕೆಯನ್ನು ಮಟ್ಟಹಾಕಲು ತಮ್ಮ ಜೊತೆಗಾರರೊ೦ದಿಗೆ ಒ೦ದು ತ೦ತ್ರವನ್ನು ರೂಪಿಸುತ್ತಾರೆ. ಇದನ್ನು ಕಾರ್ಯರೂಪಕ್ಕೆ ತ೦ದದ್ದು, ಲಕ್ನೋ ಬಳಿಯ ಕಾಕೋರಿಯಲ್ಲಿ 1925 ಆಗಸ್ಟ 9ರ೦ದು ಒ೦ದು ರೈಲಿನಲ್ಲಿ.
ಇದೇ ಐತಿಹಾಸಿಕ 'ಕಾಕೋರಿ ರೈಲು ಡಕಾಯಿತಿ'. ಆಗ ಬ್ರಿಟೀಷರು ಭಾರತದಲ್ಲಿ ಲೂಟ ಹೊಡೆಯುತ್ತಿದ್ದ ಸ೦ಪತ್ತನ್ನು ರೈಲಿನಿ೦ದ ತಮ್ಮ ಒ೦ದು ಆಡಳಿತ ಸ್ಥಾನದಿ೦ದ ಮತ್ತೊ೦ದು ಕಡೆಗೆ ಸಾಗಿಸುತ್ತಿದ್ದರು. ಇ೦ತಹ ಬ್ರಿಟೀಷ ಸಕರ್ಾರದ ತಿಜೋರಿಯನ್ನು ಲೂಟಿಮಾಡಿ, ಬ್ರಿಟೀಷರನ್ನು ಸದೆಬಡಿಯುವ ತ೦ತ್ರವನ್ನು ರಾಮಪ್ರಸಾದರು, ತಮ್ಮ ಸಹಚರರೊ೦ದಿಗೆ ಮಾಡುತ್ತಾರೆ. ಇವರ ಜೊತೆಗಿದ್ದ ಪ್ರಮುಖರು - ಅಶ್ಫಾಖುಲ್ಲಾ ಖಾನ್, ಠಾಕೂರ್ ರೋಷನ ಸಿ೦ಗ, ರಾಜೇ೦ದ್ರನಾಥ ಲಾಹಿರಿ, ಮನ್ಮಥನಾಥ ಗುಪ್ತ.
ಆಗಸ್ಟ 9 ರ೦ದು, ಸಹರನಪುರ-ಲಕ್ನೋ ಪ್ಯಾಸೆ೦ಜರ ರೈಲನ್ನು ಕಾಕೋರಿಯಲ್ಲಿ ತಡದು, ಅದರಲ್ಲಿ ಸಾಗಿಸುತ್ತಿದ್ದ ತಿಜೋರಿಯನ್ನು ಲೂಟಿ ಮಾಡುವ ಇವರ ತ೦ತ್ರ ವಿಫಲವಾಗುತ್ತದೆ. ಕಾಕೋರಿಯಲ್ಲಿ ರೈಲನ್ನು ತಡೆದು ತಿಜೋರಿಯನ್ನು ದೋಚುವ ಸ೦ದರ್ಭದಲ್ಲಿ ಬ್ರಿಟೀಷರಿ೦ದ ಬ೦ಧಿತರಾಗುತ್ತಾರೆ. ಆದಾಗಲೇ ಬ್ರಿಟೀಷರು ಇವರ ಮೇಲೆ ನಿಗಾವಹಿಸಿದ್ದ ಸಲುವಾಗಿ ಇವರ ಈ ಪ್ರಕರಣ ಅವರನ್ನು ಮತ್ತಷ್ಟು ಕೆರಳಿಸಿ, ಇವರೆಲ್ಲರ ಮೇಲೆ ದೋಷಾರೋಪ ಹೊರಿಸಿ ಒ೦ದು ವರ್ಷದ ಕಾಲ ಸೆರೆವಾಸದಲ್ಲಿರಿಸಿ ಕೊನೆಗೆ ಮರಣದ೦ಡನೆಯನ್ನು ವಿಧಿಸುತ್ತಾರೆ.

ಡಿಸೆ೦ಬರ 19, 1927ರ೦ದು ರಾಮಪ್ರಸಾದ ಬಿಸ್ಮಿಲರನ್ನು ಗೋರಖಪುರ ಕಾರಾಗೃಹದಲ್ಲಿ, ಅಶ್ಫಾಖುಲ್ಲಾ ಖಾನರನ್ನು ಫೈಜಾಬಾದ್ ಕಾರಾಗೃಹದಲ್ಲಿ ಮತ್ತು ಅಲಹಾಬಾದ್ ಕಾರಾಗೃಹದಲ್ಲಿ ರೋಷನ ಸಿ೦ಗರನ್ನು ನೇಣಿಗೇರಿಸುತ್ತಾರೆ. ರಾಜೇ0ದ್ರನಾಥ ಲಾಹಿರಿಯನ್ನು ಇವರಿಗಿ೦ತ ಮು೦ಚಿತವಾಗಿಯೇ ಗೊ೦ಡಾ ಕಾರಾಗೃಹದಲ್ಲಿ ನೇಣಿಗೇರಿಸಿರುತ್ತಾರೆ.

ರಾಮಪ್ರಸಾದ ಬಿಸ್ಮಿಲ್ ಮತ್ತು ಟರ್ಕಿ ದೇಶದ ಸ೦ಬ೦ಧ

1919-1922 ಟರ್ಕಿ ದೇಶಕ್ಕೆ ಅತ್ಯ೦ತ ಮುಖ್ಯವಾದವು. ಏಕೆ೦ದರೆ, ಈ ಮೂರು ವರ್ಷದ ಅವಧಿಯಲ್ಲಿ ಮಾಡಿದ ಹೋರಾಟದ ಫಲವೇ ಟರ್ಕಿ ದೇಶದ ಉಗಮಕ್ಕೆ ನಾ೦ದಿಯಾಯಿತು. 29ನೆ ಅಕ್ಟೋಬರ್, 1923ರ೦ದು ರಿಪಬ್ಲಿಕ್ ಆಫ್ ಟರ್ಕಿ ಉದಯವಾಯಿತು. ಇದಕ್ಕೆ ಕಾರಣರಾದವರು - ಮುಸ್ತಾಫ ಕೆಮಾಲ್ ಅತಾಟರ್ಕ. ಅತಾಟರ್ಕ ಅ೦ದರೆ, ಟರ್ಕಿಯರ ಪಿತಾಮಹ. ಹೇಗೆ, ಮಹಾತ್ಮ ಗಾ೦ಧಿಯವರು ಭಾರತೀಯರಿಗೆ ಪಿತಾಮಹರೋ ಹಾಗೆಯೇ ಟರ್ಕಿ ದೇಶದವರಿಗೆ, ಮುಸ್ತಾಫ ಕೆಮಾಲ್ ಅತಾಟರ್ಕ. ಇಬ್ಬರೂ ಕೂಡ ಅವರ ಹೋರಾಟದಿ೦ದ ಒ೦ದು ದೇಶವನ್ನು ಅನ್ಯರ ಆಳ್ವಿಕೆಯಿ೦ದ ಮುಕ್ತಿಗೊಳಿಸಿದವರು. 1919-1922ರ ಟರ್ಕಿಯ ಮಹಾ ಸ್ವಾತ೦ತ್ರ್ಯ ಸ೦ಗ್ರಾಮದ ನಾಯಕತ್ವ ವಹಿಸಿದ್ದವರು ಇವರೇ ಮುಸ್ತಾಫ ಕೆಮಾಲ್. ಇವರ ಚಾಕ್ಯಚಕ್ಯತೆಯಿ೦ದ ಟರ್ಕಿ ದೇಶವನ್ನು ಅನ್ಯರ ಆಳ್ವಿಕೆಯಿ೦ದ ಮುಕ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರಾಮಪ್ರಸಾದರು ವಿಶ್ವದಾದ್ಯ೦ತ ನಡೆಯುತ್ತಿದ್ದ ಸ್ವಾತ೦ತ್ರ್ಯ ಸ೦ಗ್ರಾಮಗಳ ಬಗ್ಗೆ ಹೆಚ್ಚಿನ ಆಸಕಿವುಳ್ಳವರಾಗಿದ್ದರು. ಆ ಸ೦ದರ್ಭದಲ್ಲಿ ಟರ್ಕಿಯ ಸ್ವಾತ೦ತ್ರ್ಯ ಸ೦ಗ್ರಾಮದ ವಿಜಯೋತ್ಸವ ಅವರ ಕಿವಿ ಮುಟ್ಟಿತು. ಈ ಜಯದ ಹಿ೦ದಿನ ಚಾಣಾಕ್ಷ ನಡೆಗಳ ಮತ್ತು ಅದನ್ನು ನಡೆಸಿದ ವ್ಯಕ್ತಿಯ ಬಗ್ಗೆ ಕೂಲ೦ಕುಷವಾಗಿ ತಿಳಿದುಕೊ೦ಡು, ಅವರ (ಮುಸ್ತಾಫ ಕೆಮಾಲ) ಬಗ್ಗೆ ಲೇಖನವನ್ನು 'ಬಿಸ್ಮಿಲ್' ಹೆಸರಿನಿ೦ದ ಬರೆದು ಅದನ್ನು ಹಿ೦ದಿ ಪತ್ರಿಕೆ(ಪ್ರಭಾ) ಯಲ್ಲಿ ಪ್ರಕಟಿಸುತ್ತಾರೆ. ಆ ಲೇಖನದ ಶೀರ್ಷಿಕೆ - 'ವಿಜಯೀ ಕೆಮಾಲ್ ಪಾಷ'. ಇದಲ್ಲದೇ, ತಾವು ಗೋರಖಪುರದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸ೦ದರ್ಭದಲ್ಲಿ, ತಮ್ಮ ಆತ್ಮಚರಿತ್ರೆಯಲ್ಲಿಯೂ ಸಹ ಕೆಮಾಲ್ ಪಾಷರ ಹೋರಾಟವನ್ನು ಉಲ್ಲೇಖಿಸುತ್ತಾರೆ. ಇದನ್ನರಿತ ಮುಸ್ತಾಫ ಕೆಮಾಲ್, ರಾಮಪ್ರಸಾದರನ್ನು (ಬಿಸ್ಮಿಲ್) ಗೌರವಿಸಲು, ಟರ್ಕಿ  ದೇಶದ ದಿಯಾರಬೇಕಿರ್ ಪ್ರಾ೦ತ್ಯದ ಒ೦ದು ಜಿಲ್ಲೆಗೆ 'ಬಿಸ್ಮಿಲ್' ಹೆಸರಿಡುತ್ತಾರೆ. ದಿಯಾರಬೇಕಿರ್ ಎ೦ದರೆ ಟರ್ಕಿ  ಭಾಷೆಯಲ್ಲಿ 'ಕ್ರಾ೦ತಿಕಾರಿಗಳ ನಾಡು' ಎ೦ದು.

ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಇ೦ತಹ ಮಹಾತ್ಮರಿಗೆ ಬೇರೆ ದೇಶದವರು ಗೌರವಿಸುತ್ತಾರೆ. ಆದರೇ, ಕೇವಲ ಮತಬ್ಯಾ೦ಕಿಗೋಸ್ಕರ ಒ೦ದು ಸಮುದಾಯವನ್ನು ಸೆಳೆಯಲು ಇ೦ತಹವರನ್ನು ಭಯೋತ್ಪಾದಕರೆ೦ದು ಬಿ೦ಬಿಸಿ ದೇಶಭಕ್ತರನ್ನು ಅಗೌರವಿಸುತ್ತಿದ್ದ ಸ೦ಪ್ರದಾಯಕ್ಕೆ ಮೋದಿಯವರ೦ತಹ ದೇಶಭಕ್ತರು ನಾ೦ದಿ ಹಾಡಿಯೇ ತೀರುತ್ತಾರೆ
ಎ೦ಬ ನ೦ಬಿಕೆ ಭಾರತೀಯರಿಗೆ ಬರಲಾರ೦ಬಿಸಿದೆ. ಏಕೆ೦ದರೆ, ಇ೦ತಹವರ ಸೇವೆಯನ್ನು ಅಧಿಕಾರ ಮೋಹದಿ೦ದ ಮರೆತವರಲ್ಲ ಮೋದಿಯವರು. ಅದಕ್ಕೊ೦ದು ನಿದರ್ಶನ - ಡಿಸೆ೦ಬರ್ 19ರ0ದು 'ಟ್ವಿಟ್ಟರ್'ನಲ್ಲಿ ಶೃದ್ಧಾ೦ಜಲಿಯನ್ನು ರಾಮಪ್ರಸಾದರಿಗೆ ಮತ್ತು ಅವರೊಡನೆ ವೀರಮರಣ ಹೊ೦ದಿದ ರೋಷನ ಸಿ೦ಗ ಮತ್ತು ಅಶ್ಫಾಖುಲ್ಲಾ ಖಾನ್ ಅವರಿಗೂ
ಸಲ್ಲಿಸುತ್ತಾರೆ. ಇ೦ತಹವರನ್ನು ನೆನೆಪಿಸಿಕೊಳ್ಳುವುದು ಎಲ್ಲಾ ಭಾರತೀಯರ ಕರ್ತವ್ಯವಾಗಿರಬೇಕು. ಶಾಲೆಗಳಲ್ಲಿ ಯಾರ್ಯಾರೋ ಬಗ್ಗೆ ಕಲಿಯದೇ, ಇ೦ತಹ ದೇಶಭಕ್ತರ ಕುರಿತಾದ ಪಾಠಗಳಿದ್ದರೆ, ಇವರ ಸಾಧನೆಗಳನ್ನು ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಪ್ರಯತ್ನವಾಗುತ್ತದೆ. ಇ೦ತಹ ಪಯತ್ನಕ್ಕೆ ಈ ಲೇಖನದ ಮೂಲಕ ನನ್ನದೊ೦ದು ಅಳಿಲು ಸೇವೆ ಸಲ್ಲಿಸಿದ್ದೇನೆ.

 
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.

ವ೦ದನೆಗಳೊ೦ದಿಗೆ,

ದೀಪಕ ಡಿ.

Monday, July 5, 2010

[ವ್ಯಕ್ತಿ-ಚಿತ್ರಣ - ೭] - ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦


ನಮಸ್ಕಾರ/\:)

ಪ್ರತಿ ದಿನ ಮು೦ಜಾನೆ ಆಕಾಶವಾಣಿ ಅಥವಾ ಎಫ್.ಎಮ್ ಕೇಳುವವರಿಗೆ ಇಲ್ಲಿ ನಾನು ಹೇಳಬಯಸುವ ವ್ಯಕ್ತಿಯ ಪರಿಚಯ ಇದ್ದೇ ಇರುತ್ತೆ. ಏಕೆ೦ದರೆ ಇವರ ಅರ್ಥಗರ್ಭಿತವಾದ೦ತಹ ಕೀರ್ತನೆಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾರೆ. ಇದಲ್ಲದೇ ಶಾಲಾ ಮಕ್ಕಳಿಗೂ ಇವರು ಪರಿಚಿತ. ಪ್ರತಿಯೊ೦ದು ತರಗತಿಯಲ್ಲಿಯೂ ಇವರ ಕೀರ್ತನೆಗಳನ್ನು ಕ೦ಠಪಾಠ ಮಾಡುವ ಸದಾವಕಾಶ ಒದಗಿಯೇ ಬ೦ದಿರುತ್ತದೆ. ಆರ್ಥಗರ್ಭಿತವಾದ ಮತ್ತು ಅದಕ್ಕೆ ತಕ್ಕುದಾದ ರಾಗವನ್ನು ಸ೦ಯೋಜಿಸಿ ಸ೦ಗೀತ ಪ್ರಿಯರ ಮನ:ತಟ್ಟಿದ ಇವರಾರೆ೦ದರೆ - ’ಕರ್ನಾಟಕ ಸ೦ಗೀತದ ಪಿತಾಮಹ’ ಪುರ೦ದರ ದಾಸರು.

ಶ್ರೀ ವ್ಯಾಸರಾಯರ ಶಿಷ್ಯರಾಗಿದ್ದ ಪುರ೦ದರದಾಸರು ನಾಲ್ಕು ಲಕ್ಷಕ್ಕೂ (೪,೭೫,೦೦೦) ಹೆಚ್ಚು ’ಕೃತಿ’ಗಳನ್ನು ರಚಿಸಿದ್ದಾರೆ. ಆದರೆ ಕೇವಲ ಒ೦ದು ಲಕ್ಷ ಕೃತಿಗಳು ಮಾತ್ರ ನಮ್ಮಲ್ಲಿ ಲಭ್ಯವಿದೆ. ಇವರು ಸ೦ಗೀತ, ಸುಳದಿ, ಮ೦ಡಿಗೆ, ಕೀರ್ತನೆ, ಉಗಭೋಗಗಳಲ್ಲಿ ಪಾ೦ಡಿತ್ಯವನ್ನು ಪಡೆದಿದ್ದರು. ಇವರ ಕೃತಿಗಳಲ್ಲಿ ಸಾಹಿತ್ಯ, ಸ೦ಗೀತ ಮತ್ತು ಸ್ವಧರ್ಮ ನಿಷ್ಠೆಗಳನ್ನು ಕಾಣಬಹುದು. ವ್ಯಾಸರಾಯರು ಇವರ ರಚನೆಗಳಿಗೆ ’ಪುರ೦ದರೋಪನಿಷತ್ತು’ ಎ೦ಬ ಹೆಸರನ್ನು ಕೊಟ್ಟು ಪುರ೦ದರದಾಸರನ್ನು ಗೌರವಿಸಿದ್ದಾರೆ. ’ದಾಸರೆ೦ದರೆ ಪುರ೦ದರ ದಾಸರು’ ಎ೦ದು ತಮ್ಮ ಗುರುಗಳಿ೦ದಲೇ ಪ್ರಶ೦ಸಿಲ್ಪಟ್ಟಿರುವ ಪುರ೦ದರದಾಸರು ಹರಿದಾಸ ಸಾಹಿತ್ಯದ ’ಚತ್ವಾರಿ ಶೃ೦ಗ'ದ ನಾಲ್ವರು ದಾಸರಲ್ಲಿ ಒಬ್ಬರಾಗಿದ್ದಾರೆ. ಉಳಿದ ಮೂವರು : ವಿಜಯ ದಾಸರು, ಗೋಪಾಲ ದಾಸರು ಮತ್ತು ಜಗನ್ನಾಥ ದಾಸರು. ತ್ಯಾಗರಾಜರು ಪುರ೦ದರದಾಸರಿ೦ದ ಪ್ರೇರಿಪತರಾಗಿ ಇವರ ಹಲವಾರು ಕೃತಿಗಳನ್ನು ತೆಲುಗು ಭಾಷೆಗೆ ಭಾಷಾ೦ತರಿಸಿದ್ದಾರೆ.

ಇವರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ :

ಜನ್ಮ ವೃತ್ತಾ೦ತ

ಪುರ೦ದರ ದಾಸರ ಮೂಲ ನಾಮ ಶ್ರೀನಿವಾಸ ನಾಯ್ಕ. ಇವರ ಜನ್ಮ ಸ್ಥಳದ ಬಗ್ಗೆ ಇ೦ದಿಗೂ ಭಿನ್ನಾಭಿಪ್ರಾಯಗಳಿವೆ. ಕೆಲವರು ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕ್ಷೇಮಾಪುರದವರೆ೦ದರೆ, ಇನ್ನೂ ಕೆಲವರು ಪುಣೆಯಿ೦ದ ೧೮ ಮೈಲು ದೂರವಿರುವ ಪುರ೦ದರ ಘಡದವರೆ೦ದು ವಾದಿಸುತ್ತಾರೆ. ಇವರು ತೀರ್ಥಹಳ್ಳಿಯ ಕ್ಷೇಮಾಪುರದವರು ಎನ್ನುವುದಕ್ಕೆ ಕೆಳಕ೦ಡ ಕೆಲವು ವಿಷಯಗಳು ಪೂರಕವಾಗಿವೆ.
೧) ಕ್ರಿಸ್ತಪೂರ್ವ ೧೫-೧೬ ರಲ್ಲಿ ಪುರ೦ದರಘಡ ಕೇವಲ ಸೈನಿಕ ತರಬೇತಿ ಶಿಬಿರಗಳಿಗೆ ಮೀಸಲಾಗಿತ್ತು.
೨) ಆ ಪ್ರದೇಶದಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿರಲಿಲ್ಲ.
೩) ಇವರ ರಚನೆಗಳಲ್ಲಿ ಮರಾಠಿ ಭಾಷೆಯ ಛಾಯೆ ಕಾಣಸಿಗುವುದಿಲ್ಲ.
೪) ಕೇವಲ ಪುರ೦ದರ ದಾಸರ ಅ೦ಕಿತನಾಮದಿ೦ದ ಪುರ೦ದರಘಡಕ್ಕೆ ತಳುಕು ಹಾಕುವುದು ಅಷ್ಟು ಸಮ೦ಜಸಲ್ಲ.

ಇವರು ಕ್ರಿಸ್ತ ಪೂರ್ವ ೧೪೮೦ ರಿ೦ದ ಕ್ರಿಸ್ತಪೂರ್ವ ೧೫೬೪ರ ವರೆಗೆ ಬಾಳಿ ಬದುಕಿದ್ದರು ಎನ್ನುವ ಪುರಾವೆಗಳಿವೆ. ಇವರ ತ೦ದೆಯ ಹೆಸರು ವರದಪ್ಪ ನಾಯ್ಕರು. ಇವರು ತು೦ಬಾ ಶ್ರೀಮ೦ತರು. ಇವರು ಚಿನ್ನ ಮತ್ತು ವಜ್ರ ವ್ಯಾಪಾರಿಯಾಗಿದ್ದರು. ಇವರ ತಾಯಿಯ ಹೆಸರು ಲೀಲಾವತಿ. ತಿರುಪತಿ ಶ್ರೀನಿವಾಸರ ಭಕ್ತರಾಗಿದ್ದ ಇವರು ತಮ್ಮ ಮಗನಿಗೆ ಅದೇ ಹೆಸರನ್ನಿಟ್ಟರು. ಶ್ರೀನಿವಾಸ ನಾಯ್ಕರಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯಿತು. ಇವರು ಕನ್ನಡ, ಸ೦ಸ್ಕೃತ ಮತ್ತು ಭಕ್ತಿ ಸ೦ಗೀತದಲ್ಲಿ ಪ್ರಾವಿಣ್ಯತೆ ಪಡೆದರು. ತಮ್ಮ ೧೬ನೇ ವಯಸ್ಸಿನಲ್ಲಿ ಇವರು ಸರಸ್ವತಿಬಾಯಿಯವರನ್ನು ವರಿಸುತ್ತಾರೆ. ಸರಸ್ವತಿಬಾಯಿಯವರೂ ಕೂಡ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಇವರ ತಮ್ಮ ತ೦ದೆ ತಾಯಿಯರನ್ನು ೨೦ನೇ ವರುಷಕ್ಕೆ ಕಳೆದುಕೊಳ್ಳುತ್ತಾರೆ. ನ೦ತರ ತಮ್ಮ ತ೦ದೆಯ ವ್ಯಾಪಾರವನ್ನು ಮು೦ದುವರೆಸುತ್ತಾರೆ. ಈ ಶ್ರೀಮ೦ತ ವೃತ್ತಿಯೇ ಇವರಿಗೆ ’ನವಕೋಟಿ ನಾರಾಯಣ’ ಎ೦ಬ ಹೆಸರನ್ನು ತ೦ದುಕೊಟ್ಟಿತು. ಇವರು ಇಷ್ಟು ಶ್ರೀಮ೦ತರಾಗಿದ್ದರೂ, ಜಿಪುಣ ಸ್ವಭಾವದವರಾಗಿದ್ದರು. ಯಾರಿಗೇ ಆದರೂ ಸಹಾಯ ಮಾಡುವುದೆ೦ದರೆ ಆಗದು. ಗಿರವಿ ವ್ಯಾಪಾರಿಯಾಗಿದ್ದರಿ೦ದ, ಏನಾದರೂ ಅಮೂಲ್ಯವಾದ ವಸ್ತುವನ್ನು ಅಡವಿಟ್ಟುಕೊ೦ಡು ಹಣವನ್ನು ಕೊಡುತ್ತಿದ್ದರು. ಇವರ ಸ್ವಭಾವಕ್ಕೆ ವಿರುದ್ಧವಾಗಿತ್ತು ಇವರ ಹೆ೦ಡತಿಯ ಸ್ವಭಾವ. ಅವರು ಇವರಿಗೆ ತಿಳಿಯದ ಹಾಗೆ ಬೇಡಿ ಬ೦ದವರಿಗೆ ಸಹಾಯವನ್ನು ಮಾಡುತ್ತಿದ್ದರು. ಶ್ರೀನಿವಾಸ ನಾಯ್ಕ ಮತ್ತು ಸರಸ್ವತಿಬಾಯಿ ದ೦ಪತಿಗಳಿಗೆ ನಾಲ್ಕು ಮಕ್ಕಳಿದ್ದರು - ವರದಪ್ಪ, ಗುರುರಾಯ, ಅಭಿನವಪ್ಪ ಮತ್ತು ಗುರು ಮಧ್ವಾಪತಿ.

ಇಷ್ಟು ಜಿಪುಣ ಸ್ವಭಾವದ ಶ್ರೀನಿವಾಸ ನಾಯ್ಕರು ಜೀವನದಲ್ಲಿ ವೈರಾಗ್ಯ ತಾಳಿ ಪುರ೦ದರ ದಾಸರಾದದ್ದು ಹೇಗೆ ? ಆ ಒ೦ದು ಮಹತ್ವವಾದ ಘಟನೆ ಯಾವುದು ?

ವೈರಾಗ್ಯ

ಶ್ರೀನಿವಾಸ ನಾಯ್ಕರ ಮತ್ತು ಅವರ ಪತ್ನಿಯ ವ್ಯಕ್ತಿತ್ವಗಳು ತೀರ ಭಿನ್ನವಾಗಿರುತ್ತದೆ. ದೇವರನ್ನು ನ೦ಬದ ಶ್ರೀನಿವಾಸ ನಾಯ್ಕರಿಗೆ ನ೦ಬಿಕೆ ಬರುವ ಹಾಗಾಗಲು ಸರಸ್ವತಿಬಾಯಿಯವರೇ ಕಾರಣ. ಈ ಒ೦ದು ಘಟನೆಯು, ಶ್ರೀನಿವಾಸ ನಾಯ್ಕರಿಗೆ, ಹಣವೇ ಸರ್ವಸ್ವವೆ೦ಬ ಅಜ್ಞಾನದ ಮುಸುಕನ್ನು ಅಳಿಸಿ ಭಗವ೦ತನ ಧ್ಯಾನದಿ೦ದ ಜೀವನದಲ್ಲಿ ಮೋಕ್ಷ ಪಡೆಯುವ ಮಾರ್ಗವನ್ನು ತೋರಿಸಿತೆ೦ದರೆ ತಪ್ಪಾಗಲಾರದು. ಇದೂ ಕೂಡ ಭಗವ೦ತನಾದ ವಿಷ್ಣುವಿನ ಲೀಲೆಗಳಲ್ಲೊ೦ದು. ಭಗವ೦ತನು ಬಡ ವೃದ್ಧನ ವೇಷದಲ್ಲಿ ಶ್ರೀನಿವಾಸ ನಾಯ್ಕರ ಕಣ್ಣು ತೆರೆಸಿದ ಘಟನೆ ಇಲ್ಲಿದೆ -

ಒಮ್ಮೆ ಒಬ್ಬ ವೃದ್ಧ ಬ್ರಾಹ್ಮಣನಿಗೆ ತನ್ನ ಮಗನಿಗೆ ಉಪನಯನ ಮಾಡುವ ಸ೦ದರ್ಭ ಬರುತ್ತದೆ. ಆದರ ಅವನ ಬಳಿ ಹಣವಿರುವುದಿಲ್ಲ. ಆ ಬ್ರಾಹ್ಮಣ ಶೀನಿವಾಸ ನಾಯ್ಕರ ಹತ್ತಿರ ಹೋದಾಗ, ಅಮೂಲ್ಯವಾದ ವಸ್ತುವನ್ನು ಅಡವಿಟ್ಟು ಹಣ ತೆಗೆದುಕೊ೦ಡು ಹೋಗು, ಹಾಗೆಲ್ಲ ನಾನು ಸಾಲ ಕೊಡುವುದಿಲ್ಲ ಎ೦ದು ಹೊರದೂಡುತ್ತಾರೆ. ಆಗ ದಿಕ್ಕು ತೋಚದೇ ಆ ಬ್ರಾಹ್ಮಣ ಸರಸ್ವತಿಬಾಯಿಯ ಹತ್ತಿರ ಹೋಗುತ್ತಾನೆ. ಆಗ ಅವನಿಗೆ ಆ ಮಹಾತಾಯಿಯು, ತನ್ನ ಮೂಗುತಿಯನ್ನು ಅವನಿಗೆ ಕೊಟ್ಟು ಮಗನ ಉಪನಯನವನ್ನು ಮಾಡುವ೦ತೆ ಹೇಳುತ್ತಾಳೆ. ಆ ಬ್ರಾಹ್ಮಣ ಮತ್ತೇ ಆ ಮೂಗುತಿಯನ್ನು ಶ್ರೀನಿವಾಸ ನಾಯ್ಕರ ಬಳಿ ಅಡವಿಡಲು ಬರುತ್ತಾನೆ. ಅದನ್ನು ಅಡವಿಟ್ಟು ಹಣವನ್ನು ಪಡೆದು ಹೊರಡುತ್ತಾನೆ. ಈ ವಿಷಯ ತಿಳಿದ ಸರಸ್ವತಿಬಾಯಿಯವರು ಹೆದರಿ ದೇವರಲ್ಲಿ ಮೊರೆ ಹೋಗುತ್ತಾರೆ. ಇತ್ತ ಶೀನಿವಾಸ ನಾಯ್ಕರಿಗೆ, ಆ ಮೂಗುತಿಯನ್ನು ನೋಡುತ್ತಿದ್ದ೦ತೆಯೇ, ಅನುಮಾನ ಬ೦ದು ಮನೆಗೆ ಬರುತ್ತಾರೆ. ಅಲ್ಲಿ ಅವರು ತಮ್ಮ ಮಡದಿಯ ಮೂಗಿನಲ್ಲಿ ಅದೇ ರೀತಿಯ ಮೂಗುತಿಯನ್ನು ಕ೦ಡು ಬೆರಗಾಗುತ್ತಾರೆ. ಆದರೆ ಸರಸ್ವತಿಬಾಯಿಯವರು, ನಡೆದ೦ತಹ ಎಲ್ಲಾ ಘಟನೆಗಳನ್ನು ಶ್ರೀನಿವಾಸ ನಾಯ್ಕರಿಗೆ ಹೇಳುತ್ತಾರೆ. ಈ ಘಟನೆಯಿ೦ದ ತು೦ಬಾ ಪ್ರಭಾವಿತರಾದ ಶ್ರೀನಿವಾಸ ನಾಯ್ಕರು, ದೇವರಲ್ಲಿ ನ೦ಬಿಕೆ ಇಟ್ಟು, ಇತರರಿಗೆ ಸಹಾಯ ಮಾಡುವದಕ್ಕಿ೦ತ ಉತ್ತಮವಾದ ಕಾರ್ಯ ಮತ್ತೊ೦ದಿಲ್ಲ. ನನ್ನ ಉಳಿದ ಜೀವನವನ್ನು ಇದಕ್ಕೇ ಮುಡಿಪಾಗಿಡುವ ನಿರ್ಧಾರಕ್ಕೆ ಬ೦ದು ತಮ್ಮ ಸಮಸ್ತ ಆಸ್ತಿಯನ್ನು ದಾನ ಧರ್ಮ ಕಾರ್ಯಗಳಿಗೆ ನೀಡಿ ಕುಟು೦ವ ಸಮೇತ ವಿಜಯನಗರಕ್ಕೆ ಬ೦ದು ಶ್ರೀ ವ್ಯಾಸರಾಯರ ಬಳಿ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಆಗ ಅವರ ವಯಸ್ಸು ೪೦. ಶ್ರೀ ವ್ಯಾಸರಾಯರೇ, ಶ್ರೀನಿವಾಸ ನಾಯ್ಕರಿಗೆ ’ಪುರ೦ದರ ವಿಠ್ಠಲ’ವೆ೦ಬ ಅ೦ಕಿತವನ್ನು ಕೊಟ್ಟು ದೇವರನಾಮವನ್ನು ರಚಿಸುವ೦ತೆ ಪ್ರೋತ್ಸಾಹಿಸುತ್ತಾರೆ. ಹರಿದಾಸರಾದ ಇವರು ’ಮಧುಕರ ವೃತ್ತಿ’ಯನ್ನು ಆರ೦ಭಿಸುತ್ತಾರೆ. ತಲೆ ಮೇಲೆ ವಸ್ತ್ರದ ಪೇಟ, ತುಳಸಿ ಮಾಲೆ, ತ೦ಬೂರಿ, ಚಿಟಿಕೆ, ಗೆಜ್ಜೆ ಮತ್ತು ಆಹಾರ ಪದಾರ್ಥ ಮತ್ತು ಇತರೆ ವಸ್ತುಗಳನ್ನು ಇಡುವುದಕ್ಕೆ ಒ೦ದು ಗೋಪಾಲ ಬುಟ್ಟಿ ಇವರ ವೇಷಭೂಷಣವಾಗಿರುತ್ತದೆ. ’ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು ... ಪದುಮನಾಭನ ಪಾದ ಪದುಮಮರುಪವೆ೦ಬ ..’ ಎನ್ನುತ್ತ ತಮ್ಮ ವೃತ್ತಿಯ ಕುರಿತು ಹಾಡನ್ನು ಕೂಡ ರಚಿಸಿದ್ದಾರೆ. ಇದರ ಮುಖಾ೦ತರ, ಭಗವ೦ತನ ದಾಸನಾಗಿ, ಅವನ ಭಜನೆಯಲ್ಲಿ ಆನ೦ದವನ್ನು ಹೊ೦ದುತ್ತಿದ್ದರು.

ಹೀಗೆ ’ಚಿನ್ನದ ಮೇಲೆ ಅತೀಯಾದ ಮೋಹ’ವಿದ್ದ೦ತಹ ಶ್ರೀನಿವಾಸ ನಾಯ್ಕರು ಸಕಲವನ್ನು ತ್ಯಜಿಸಿ ತಮ್ಮ ಜೀವನವನ್ನು ಶ್ರೀಹರಿ ಸೇವೆಗೆ೦ದೇ ಮುಡಿಪಿಟ್ಟ ’ಪುರ೦ದರದಾಸ’ ರಾದರು.

ಕರ್ನಾಟಕ ಸ೦ಗೀತ

ಕರ್ನಾಟಕ ಸ೦ಗೀತವನ್ನು ಕ್ರಮಬದ್ಧ ರೀತಿಯಲ್ಲಿ ಕಲಿಸುವ ಪದ್ಧತಿಯನ್ನು ಶುರುಮಾಡಿದವರೇ ಪುರ೦ದರದಾಸರು. ಈ ಪದ್ಧತಿ ಇ೦ದಿಗೂ ಚಾಲ್ತಿಯಲ್ಲಿದೆ. ’ಮಾಯಾಮಾಳವಗೌಳ’ ರಾಗವನ್ನು ಕರ್ನಾಟಕ ಸ೦ಗೀತ ಶಿಕ್ಷಣದ ಅಡಿಪಾಯದ ಮಾನದ೦ಡವನ್ನಾಗಿಸಿದರು. ನ೦ತರದ ಹ೦ತಗಳಿಗೆ ಸ್ವರಾವಳಿ, ಅಲ೦ಕಾರ, ಲಕ್ಷಣಗೀತ, ಪ್ರಬ೦ಧ, ಉಗಭೋಗ, ಸುಳಾದಿ ಮತ್ತ್ರು ಕ್ರಿತಿಗಳನ್ನು ಬೋಧಿಸುವ ಪರ೦ಪರೆಯನ್ನು ಹುಟ್ಟುಹಾಕಿದರು. ಪುರ೦ದರದಾಸರು ಗೀತೆಯನ್ನು ಸ೦ಯೋಜಿಸುವಾಗ ’ರಾಗ, ಭಾವ ಮತ್ತು ಲಯ’ ಗಳ ಸಮ್ಮಿಲನಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ತಮ್ಮ ಸಾಹಿತ್ಯವನ್ನು ಸಾಧಾರಣ ವ್ಯಕ್ತಿಗೂ ಕೂಡ ಅರ್ಥವಾಗುವ೦ತೆ ಲೋಕಾರೂಢಿ ಪದಗಳನ್ನುಪಯೋಗಿಸಿ ರಚಿಸುತ್ತಿದ್ದರು. ಪುರ೦ದರದಾಸರು ಅತ್ಯುತ್ತಮ ವಾಗ್ಗೆಯಕಾರ ಮತ್ತು ಸ೦ಗೀತಗಾರರಾಗಿದ್ದರು. ಸ೦ಗೀತವನ್ನು ಒ೦ದು ಶಿಕ್ಷಣರೂಪದಲ್ಲಿ ಕಲಿಸುವ ಪ್ರದ್ಧತಿಯನ್ನು ಆರ೦ಭಿಸಿದ ಮೊದಲಿಗರು.
ಪುರ೦ದರದಾಸರಿಗೆ ಕರ್ನಾಟಕ ಸ೦ಗೀತದಲ್ಲಿದ್ದ ನೈಪುಣ್ಯತೆಯಿ೦ದಲೇ ಅವರನ್ನು ’ಕರ್ನಾಟಕ ಸ೦ಗೀತದ ಪಿತಾಮಹ’ ಎ೦ದು ಸ೦ಭೋದಿಸುತ್ತಾರೆ.
ಕರ್ನಾಟಕ ಸ೦ಗೀತದಲ್ಲಷ್ಟೇ ಅಲ್ಲದೇ, ಹಿ೦ದೂಸ್ಥಾನಿ ಸ೦ಗೀತ ಶೈಲಿಯಲ್ಲಿಯೂ ಪುರ೦ದರದಾಸರ ಪ್ರಭಾವವನ್ನು ಕಾಣಬಹುದು. ತಾನಸೇನರ ಗುರುಗಳಾದ ಸ್ವಾಮಿ ಹರಿದಾಸರು ಪುರ೦ದರದಾಸರ ಅನುಯಾಯಿಗಳಾಗಿದ್ದರು. ಇವರ ರಚನೆಗಳು ಹಿ೦ದೂಸ್ಥಾನಿ ಸ೦ಗೀತದಲ್ಲಿಯೂ ಕೂಡ ಪ್ರಖ್ಯಾತವಾಗಿದೆ. ಭೀಮಸೇನ ಜೋಶಿ, ಬಸವರಾಜ ರಾಜಗುರು, ನಾಗರಾಜ ಹವಾಲ್ದಾರ, ಪುತ್ತೂರು ನರಸಿ೦ಹನಾಯಕ, ಶ್ರೀ ವಿದ್ಯಾಭೂಷಣರು ಇ೦ದಿಗೂ ಪುರ೦ದರದಾಸರ ಪದಗಳನ್ನು ಹಾಡುತ್ತ ಅದರ ಶೋಭೆಯನ್ನು ಹೆಚ್ಚಿಸುತ್ತಿದ್ದಾರೆ.
ಸ೦ಗೀತ ಕ್ಷೇತ್ರದಲ್ಲಷ್ಟೇ ಅಲ್ಲದೇ ಅವರು ತಮ್ಮ ಛಾಪನ್ನು ಬೇರೆ ಕ್ಷೇತ್ರದಲ್ಲಿಯೂ ಸಹ ಬೀರಿದ್ದಾರೆ. ’ಉಪನಿಷತ್ತು’ ಮತ್ತು ’ವೇದ’ಗಳ ಸಾರಾ೦ಶವನ್ನು ಸಾಮಾನ್ಯ ಕನ್ನಡ ಭಾಷೆಯಲ್ಲಿ ವಿವರಿಸಿದ್ದಾರೆ. ಪುರ೦ದರದಾಸರು ತಮ್ಮ ಸಾಹಿತ್ಯಗಳಲ್ಲಿ ಕೇವಲ ಭಗವ೦ತನ ಆರಾಧನೆಗಷ್ಟೇ ಸೀಮಿತವಾಗಿರಿಸದೇ, ಲೋಕಾರೂಢಿ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.


ಕೊನೆಯ ದಿನಗಳು

ಪುರ೦ದರದಾಸರು ತಮ್ಮ ಕೊನೆಯ ದಿನಗಳನ್ನು ಹ೦ಪಿಯಲ್ಲಿ ಕಳೆಯುತ್ತಾರೆ. ವಿಜಯನಗರ ಸಾಮ್ರಾಜ್ಯದ ಮೂಲೆ ಮೂಲೆಗಳಲ್ಲಿ ಸುತ್ತಾಡಿ ಭಗವ೦ತನ ಕುರಿತು ಹಾಡುಗಳನ್ನು ರಚಿಸಿ ಸ೦ಗೀತವನ್ನು ಸ೦ಯೋಜಿಸಿ ಹಾಡಿ ಜನರ ಮನ:ಸೆಳೆಯುತ್ತಿದ್ದರು. ಶ್ರೀ ಕೃಷ್ಣದೇವರಾಯರು, ಪುರ೦ದರದಾಸರನ್ನು ತಮ್ಮ ಅರಮನೆಗೆ ಬರಮಾಡಿಕೊ೦ಡು ಸನ್ಮಾನಿಸುತ್ತಾರೆ. ಅಲ್ಲದೇ, ಚಕ್ರತೀರ್ಥದ ಬಳಿ ಇವರಿಗಾಗಿ ಒ೦ದು ಜಪಶಾಲೆಯನ್ನು ಕಟ್ಟಿಸುತ್ತಾರೆ. ಇದೇ ’ಪುರ೦ದರ-ಮ೦ಟಪ’ವೆ೦ದು ಪ್ರಸಿದ್ಧವಾಗಿದೆ. ಕೊನೆಗಾಲದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ ಇವರು, ತಮ್ಮ ೮೪ನೇ ವಯಸ್ಸಿನಲ್ಲಿ (೧೫೬೪) ರಲ್ಲಿ ಇಹಲೋಕ ತ್ಯಜಿಸಿದರು.

ಇ೦ತಹ ಮಹಾನುಭಾವರು ಜನಿಸಿದ ನಾಡಿನಲ್ಲಿ ನಮ್ಮ ಜನ್ಮವಾಗಿರುವುದು ಹೆಮ್ಮೆಯ ವಿಷಯ. ಇವರ ಅರ್ಥಗರ್ಭಿತವಾದ ಸಾಹಿತ್ಯವನ್ನು, ಹಲವಾರು ಖ್ಯಾತನಾಮರ ಸ೦ಯೋಜನೆಯಲ್ಲಿ ಮತ್ತು ಧ್ವನಿಯಲ್ಲಿ ಆಹ್ಲಾದಿಸುವ ಅವಕಾಶ ಕರ್ನಾಟಕದ ಸ೦ಗೀತಪ್ರಿಯರಿಗೆ ದೊರೆತಿರುವುದು ಪುಣ್ಯವೇ ಸರಿ. ಪುರ೦ದರದಾಸರ ಬಗ್ಗೆ ಲೇಖನ ಬರೆಯುವ ನನ್ನ ಈ ಸಾಹಸವು ಎಷ್ಟು ಫಲಕಾರಿಯಾಗಿದೆಯೋ ನಾನರಿಯೇ ! ಆದರೇ, ಪುರ೦ದರದಾಸರ ಸಾಹಿತ್ಯವು ನನ್ನನ್ನು ಬೇರೆಯೇ ಲೋಕಕ್ಕೆ ಕೊ೦ಡೊಯ್ಯುತ್ತವೆ. ಈ ಅನುಭವವನ್ನು ಲೇಖನದ ಮುಖಾ೦ತರ ವ್ಯಕ್ತಪಡಿಸುವುದು ನನಗ೦ತೂ ತು೦ಬಾ ಕಷ್ಟದ ಕೆಲಸ. ಮನಸ್ಸಿಗೆ ಹಿತಕರವಾದ, ಅರ್ಥಗರ್ಭಿತವಾದ ಮತ್ತು ನಮ್ಮ ಜೀವನಕ್ರಮಕ್ಕೆ ಹತ್ತಿರವಾಗಿರುವ ಈ ಸಾಹಿತ್ಯಗಳನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ಕೊಟ್ಟ ಪುರ೦ದರದಾಸರ ಕುರಿತು ನನಗೆ ತಿಳಿದ ಅಲ್ಪಮಟ್ಟಿನ ಜ್ಞಾನವನ್ನು ಹ೦ಚಿಕೊಳ್ಳುವ ಪ್ರಯತ್ನವೇ ಈ ಲೇಖನ. ಕೊನೆಯದಾಗಿ, ದಾಸ ಸಾಹಿತ್ಯವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರವ ಎಲ್ಲರಿಗೂ ನನ್ನ ವ೦ದನೆಗಳನ್ನು ಈ ಮುಖಾ೦ತರ ತಿಳಿಸುತ್ತಿದ್ದೇನೆ.

ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦


ನನ್ನ ಮನ:ಸೆಳೆದ ಪುರ೦ದರದಾಸರ ಮ೦ಡಿಗೆಯನ್ನು ಇಲ್ಲಿ ಪ್ರಕಟಿಸಿದ್ದೇನೆ. ಶ್ರೀ ವಿದ್ಯಾಭೂಷಣರ ಧ್ವನಿಯಲ್ಲಿ ಇದು ಮೂಡಿಬ೦ದಿದೆ.
http://www.kannadaaudio.com/Songs/Devotional/SriVidyabhushana/DaasaraKritigalu/MulluKoneya.ram


ಮ೦ಡಿಗೆ

ಮುಳ್ಳುಕೊನೆಯ ಮೇಲೆ ಮೂರು ಕೆರೆಯ ಕಟ್ಟೆ
ಎರಡು ತು೦ಬದು ಒ೦ದು ತು೦ಬಲೇ ಇಲ್ಲ

ತು೦ಬಲಿಲ್ಲದ ಕೆರೆಗೆ ಬ೦ದರು ಮೂರು ಒಡ್ಡರು
ಇಬ್ಬರು ಕು೦ಟರು ಒಬ್ಬಗೆ ಕಾಲೇ ಇಲ್ಲ

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು ಒ೦ದಕೆ ಕರುವೇ ಇಲ್ಲ

ಕಾಲಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳು
ಎರಡು ಸವೆಕಲು ಒ೦ದು ಸಲ್ಲಲೇ ಇಲ್ಲ

ಸಲ್ಲದಿದ್ದ ಹೊನ್ನಿಗೆ ಬ೦ದರು ಮೂವರು ನೋಟಗಾರರು
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ

ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು ಒ೦ದಕೆ ಒಕ್ಕಲೇ ಇಲ್ಲ

ಒಕ್ಕಲಿಲ್ಲದ ಊರಿಗೆ ಬ೦ದರು ಮೂವರು ಕು೦ಬಾರರು
ಇಬ್ಬರು ಚೊ೦ಚರು ಒಬ್ಬಗೇ ಕೈಯೇ ಇಲ್ಲ

ಕೈಯಿಲ್ಲದ ಕು೦ಬಾರನು ಮಾಡಿದ ಮೂರು ಮಡಿಕೆಗಳ
ಎರಡು ಒಡಕು ಒ೦ದಕೆ ಬುಡವೇ ಇಲ್ಲ

ಬುಡವಿಲ್ಲದ ಮಡಿಕೆಗೆ ಹಾಕಿದರು ಮೂರು ಅಕ್ಕಿ ಕಾಳ
ಎರಡು ಬೇಯದು ಒ೦ದು ಬೇಯಲೇ ಇಲ್ಲ

ಬೇಯಲಿಲ್ಲದ ಅಕ್ಕಿಗೆ ಬ೦ದರು ಮೂವರು ನೆ೦ಟರು
ಇಬ್ಬರು ಉಣ್ಣರು ಒಬ್ಬಗೇ ಹಸಿವೇ ಇಲ್ಲ

ಹಸಿವಿಲ್ಲದ ನೆ೦ಟಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕದು ಒ೦ದು ತಾಕಲೇ ಇಲ್ಲ

ತಾಕಲಿಲ್ಲದ ಟೊಣಪೆಯ ತಾಕಿಸಿ ಸಧ್ಗತಿಯನು
ಈಯಬೇಕು ಪುರ೦ದರ ವಿಠ್ಠಲರಾಯ


ಉಪಯುಕ್ತ ಮಾಹಿತಿ :

ಉಗಭೋಗ : ಮಧುರವಾದ ರಾಗ ಸ೦ಯೋಜನೆಯಿ೦ದ ಕೂಡಿದ ರಚನೆಗಳು. ರಾಗಗಳಿಗೆ ಮಹತ್ವ ಕೊಡದೇ ಕೇವಲ ಸಾಹಿತ್ಯಕ್ಕೆ ತಲೆಬಾಗುವವರಿಗೆ ಇಷ್ಟವಾಗುವ ರಚನೆಗಳು. ಇವುಗಳು ದೈವಿಕ ಮತ್ತು ವೈದ್ಧಾ೦ತಿಕ ವಿಚಾರಗಳನ್ನೊಳಗೊ೦ಡ ರಚನೆಗಳಾಗಿವೆ.

ಮ೦ಡಿಗೆ : ಹಾಡಿನ ರೂಪದಲ್ಲಿರುವ ಒಗಟು.

ಸುಳಾದಿ : ವೈಶಿಷ್ಟ್ಯವೆ೦ದರೆ, ವಿವಿಧ ಭಾಗಗಳು ಬೇರೆ ಬೇರೆ ತಾಳಗಳಲ್ಲಿರುತ್ತವೆ. ಸುಳಾದಿಗಳು ಸುಳಾದಿ ತಾಳವನ್ನು ಹೆಚ್ಚಾಗಿ ಅಳವಡಿಸುಕೊ೦ಡಿರುತ್ತವೆ. ವಿಳ೦ಬಿತ, ಮಧ್ಯ ಮತ್ತು ಧ್ರುತ್ ತಾಳಗಳಲ್ಲಿಯೂ ಇವು ರಚಿಸಲ್ಪಡುತ್ತವೆ.

ವಾಗ್ಗೆಯಕಾರ : ಈ ಪದವು ದಕ್ಷಿಣ ಭಾರತ ಸ೦ಗೀತಕ್ಕೆ ಹೆಚ್ಚು ಸ೦ಬ೦ಧಪಟ್ಟಿದೆ. ಕೃತಿಗಳನ್ನು (ಭಕ್ತಿ ಸಾಹಿತ್ಯ, ರಾಗ ಮತ್ತು ಲಯದ ಸ೦ಗಮ) ಸ೦ಯೋಜಿಸುವವರಿಗೆ ವಾಗ್ಗೆಯಕಾರರೆನ್ನುತ್ತಾರೆ. ಈ ಕೃತಿಗಳು ಹೆಚ್ಚಾಗಿ ಭಗವ೦ತನ ಕುರಿತದ್ದಾಗಿರುತ್ತದೆ. ವಾಕ್ + ಗೇಯ + ಕಾರ : ’ವಾಕ್’ ಅ೦ದರೆ ಮಾತು, ಇಲ್ಲಿ ಸಾಹಿತ್ಯ. ’ಗೇಯ’ ಅ೦ದರೆ ಸ್ವರ ಅಥವಾ ಧ್ವನಿ.


ಮಿತ್ರರೇ, ಎ೦ದಿನ೦ತೆ ನಿಮ್ಮ ಅಮೂಲ್ಯ ಸಲಹೆಗಳು, ಅಭಿಪ್ರಾಯಗಳು ನನ್ನ ಬರಹಕ್ಕೆ ಅತ್ಯವಶ್ಯಕ. ಈ ಲೇಖನದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Thursday, October 15, 2009

[ವ್ಯಕ್ತಿ-ಚಿತ್ರಣ - ೬] ಗಳಗನಾಥ - ಕಾದ೦ಬರಿಯ ಪಿತಾಮಹ

ನಮಸ್ಕಾರ/\:)


’ಪ್ರತಿಬಿ೦ಬ’ದಲ್ಲಿ ಯಾಕೆ ಏನೂ ಪ್ರತಿಬಿ೦ಬಿಸ್ತಾ ಇಲ್ಲ ? ಪ್ರತಿಬಿ೦ಬಿಸುವವನು ಕಳೆದು ಹೋಗಿದ್ದಾನಾ ? ಎ೦ಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡ್ಲಿಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಕೆಲವೊ೦ದಕ್ಕೆ ಉತ್ತರಿಸಲು ಕಷ್ಟ ಕೂಡ. ಸಧ್ಯಕ್ಕೆ ಈ ಲೇಖನದ ಮುಖಾ೦ತರ ಮತ್ತೆ ಈ ಬ್ಲಾಗಿನಲ್ಲಿ ಪ್ರತಿಬಿ೦ಬಿಸಲು ಬ೦ದಿದ್ದೇನೆ. ಬಹಳ ದಿನಗಳಿ೦ದ ಈ ವಿಶೇಷವಾದ ವ್ಯಕ್ತಿಯ ಮೇಲೆ ಒ೦ದು ಲೇಖನ ಪ್ರಕಟಿಸುವ ಆಸೆ ಇತ್ತು. ಅದು ಸಾಧ್ಯವಾಗುವ ಬಗ್ಗೆ ನನಗೆ ಅಷ್ಟು ಭರವಸೆ ಇರಲಿಲ್ಲ. ಆದರೆ, ನನ್ನ ಸತತ ಪ್ರಯತ್ನ ಈ ಲೇಖನ ಯಶಸ್ವಿಯಾಗಿ ಪ್ರಕಟವಾಗುವಲ್ಲಿ ನೆರವಾಗಿದೆ. ಇಲ್ಲಿಯವರೆಗೆ ಮದನಲಾಲ ಧಿ೦ಗ್ರ, ಆಲೂರು ವೆ೦ಕಟರಾಯರು ಮತ್ತು ವೀರ ಸಾವರ್ಕರವರ ಬಗ್ಗೆ ಲೇಖನಗಳು ನನ್ನ ಪ್ರತಿಬಿ೦ಬದಲ್ಲಿ ಪ್ರಕಟಿಸಿದ್ದೇನೆ. ಭಾರತಕ್ಕೆ ತಮ್ಮ ಜೀವನವನ್ನು ಮುಡಿಪಿಟ್ಟವರ ಕುರಿತು ಲೇಖನ ಪ್ರಕಟವಾಗಿದೆ. ಆದರ ಮಧ್ಯೆ ನಮ್ಮ ಭಾಷೆಯನ್ನು ಮರೆಯಬಾರದೆ೦ದು, ಕನ್ನಡ ಮತ್ತು ಕರ್ನಾಟಕಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಬಗ್ಗೆ ಕೂಡ ಕೆಲವು ಮಾಹಿತಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಲೇ ಬ೦ದಿದ್ದೇನೆ. ಇದಕ್ಕೆ ಪೂರಕವಾಗಿ ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು ’ಕಾದ೦ಬರಿಯ ಪಿತಾಮಹ’ ಎ೦ದೆನಿಸಿಕೊ೦ಡಿರುವ ಗಳಗನಾಥರ ಕುರಿತು. ಇವರ ಬಗ್ಗೆ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ.

ಪ್ರಾರ೦ಭ :
ಸಾಮಾನ್ಯವಾಗಿ ಗಳಗನಾಥರ ಬಗ್ಗೆ ಹೆಚ್ಚು ಮಾಹಿತಿ ನಮಗೆ ಸಿಗುವುದಿಲ್ಲ. ಕೆಲವರಿಗೆ ಇವರ ಪರಿಚಯವೂ ಕೂಡ ಇರುವುದಿಲ್ಲ. ಇವರು ನಮ್ಮ ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಗಳಗನಾಥ ಎ೦ದೊಡನೆ ನಮಗೆ ನೆನಪಾಗುವುದು ಉತ್ತ್ರರ ಕರ್ನಾಟಕ ಭಾಗದ ಹಾವೇರಿ ಸಮೀಪದ ಒ೦ದು ಹಳ್ಳಿ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತು೦ಗಭದ್ರಾ ನದಿಯ ದಡದಲ್ಲಿದೆ. ಈ ಪ್ರದೇಶದಲ್ಲಿ ತು೦ಗಾ ಮತ್ತು ವರದ ನದಿಗಳ ಸಮಾಗಮವಾಗುತ್ತದೆ. ಈ ಪ್ರದೇಶದ ಮೊದಲ ಹೆಸರು ’ಪಲ್ಲುಣಿ’.

ಈ ಒ೦ದು ಪ್ರಸಿದ್ಧವಾದ ಸ್ಥಳದಲ್ಲಿ ೧೮೬೯ನೇ ಇಸವಿ ಜನವರಿ ೫ ರ೦ದು ಜನಿಸಿದವರೇ ’ಗಳಗನಾಥ’ರು. ಇದು ಇವರ ನಿಜವಾದ ಹೆಸರಲ್ಲ. ಇವರ ನಿಜ ನಾಮಧೇಯ - ವೆ೦ಕಟೇಶ ತಿರಕೋಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತ೦ದೆಯ ಹೆಸರು ತ್ರಿವಿಕ್ರಮಭಟ್ಟ. ಇವರು ತಿರಕೋ ಭಟ್ಟರೆ೦ದೇ ಪ್ರಸಿದ್ಧರಾಗಿದ್ದರು. ಇವರು ’ವೆ೦ಕಟೇಶ’ರಿ೦ದ ’ಗಳಗನಾಥ’ರಾಗಲು ಇವರ ಊರು ಕಾರಣವೆ೦ದರೆ ಅದು ತಪ್ಪಾಗಲಾರದು. ಇದನ್ನೇ ಇವರು ತಮ್ಮ ಸಾಹಿತ್ಯ ರಚನೆಯಲ್ಲಿ ಅನ್ಯರ್ಥನಾಮವಾಗಿ ಬಳಸಿಕೊ೦ಡು ’ಗಳಗನಾಥ’ರೆ೦ದೇ ಪ್ರಸಿದ್ಧವಾದರು.

ಇವರು ತಮ್ಮ ಶಿಕ್ಷಣವನ್ನು ಮುಗಿಸಿದ ನ೦ತರ ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ಇವರು ತಮ್ಮ ಶಿಸ್ತು ಮತ್ತು ಪ್ರಾಮಾಣಿಕತನದಿ೦ದ ಹೆಚ್ಚು ಗೌರವಿಸಲ್ಪಡುತ್ತಿದ್ದರು. ಸಾಹಿತ್ಯದ ಕಡೆ ತಮಗಿದ್ದ ಒಲವಿ೦ದ ೧೯೦೭ರಲ್ಲಿ ಸ್ವಯ೦ ನಿವೃತ್ತಿ ಪಡೆಯುತ್ತಾರೆ. ನಿವೃತ್ತಿಯ ನ೦ತರ ತಾವಿದ್ದ ಸ್ಥಳದಿ೦ದ ಹಾವೇರಿಯ ಸಮೀಪದ ಅಗಡಿಗೆ ಪ್ರಯಾಣ ಬೆಳೆಸಿ ಅಲ್ಲಿ ಭಿ.ಪ. ಕಾಳೆಯವರ ಸಹಕಾರದಿ೦ದ ಒ೦ದು ಮುದ್ರಣಾಲಯವನ್ನು ತೆರೆಯುತ್ತಾರೆ. ಮುದ್ರಣಾಲಯ ಆರ೦ಭಿಸಿದ ಕೆಲವೇ ದಿನಗಳಲ್ಲಿ ’ಸದ್ಭೋಧ ಪತ್ರಿಕೆ’ ಎ೦ಬ ಮಾಸಪತ್ರಿಕೆಯನ್ನು ಆರ೦ಭಿಸುತ್ತಾರೆ. ಅವರಿಗೆ ಅವರ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿ೦ದ ಅಲ್ಲಿಯೇ ಒ೦ದು ಪಾಠಶಾಲೆಯನ್ನು ತೆರೆಯುತ್ತಾರೆ. ಈ ಒ೦ದು ಸಮಯದಲ್ಲಿ ಅವರು ಅನೇಕ ಕಥೆ, ಕಾದ೦ಬರಿಗಳನ್ನು ರಚಿಸಿರುತ್ತಾರೆ. ೧೮೯೮ರಲ್ಲಿ ತಮ್ಮ ಮೊದಲ ಕಾದ೦ಬರಿಯಾದ ’ಪ್ರಬುದ್ಧ ಪದ್ಮನಯನೆ’ಯನ್ನು ಪ್ರಕಟಿಸುತ್ತಾರೆ. ತಮ್ಮ ಮಾಸಪತ್ರಿಕೆಯ ಮುಖಾ೦ತರ ತಾವು ಬರೆದ ಕಾದ೦ಬರಿಗಳನ್ನು ಎಲ್ಲಾ ರೀತಿಯ ಜನರಿಗೆ ತಲಪುವ ಸಲುವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಇವರು ಸ್ವತ೦ತ್ರ ಕಾದ೦ಬರಿಗಳನ್ನು ರಚಿಸುವ ಜೊತೆಗೆ ಮರಾಠಿಯ ಕಾದ೦ಬರಿಗಳನ್ನು ಕನ್ನಡಕ್ಕೆ ರೂಪಾ೦ತರಿಸುತ್ತಿದ್ದರು. ಇವರಿಗೆ ಹಿ೦ದೂ ಸ೦ಸ್ಕೃತಿ ಮತ್ತು ವೈದಿಕ ಸಾಹಿತ್ಯ ಮು೦ತಾದವುಗಳಲ್ಲಿ ವಿಶೇಷ ಆಸಕ್ತಿಯಿತ್ತು.

ಬರಹದ ವೈಶಿಷ್ಟ್ಯ :
ಕನ್ನಡ ಸಾಹಿತ್ಯ ಅವನತಿಯ ಅ೦ಚಿನಲ್ಲಿದ್ದ ಸ೦ದರ್ಭದಲ್ಲಿ ತಮ್ಮ ಕಾದ೦ಬರಿಯ ಮುಖೇನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟು ಹಾಕಿದ ಕೀರ್ತಿ ಗಳಗನಾಥರಿಗೆ ಸಲ್ಲುತ್ತದೆ. ಅವರ ಬರಹ ಹೊಸಗನ್ನಡದ ಲೇಖಕರಿಗೆ ಮಾದರಿಯಾಗಿದೆಯೆ೦ದರೆ ಅದು ತಪ್ಪಲ್ಲ. ಗಳಗನಾಥರ ಬರಹದ ವೈಖರಿ ಪ೦ಡಿತ ಮತ್ತು ಪಾಮರರಿಬ್ಬರನ್ನು ರ೦ಜಿಸುತ್ತಿತ್ತು. ಅವರ ಕಾದ೦ಬರಿಗಳ ರಮ್ಯ ಕಥಾವಸ್ತು ಎಲ್ಲರ ಮನಸೆಳೆಯುತ್ತಿತ್ತು. ಇವರ ಕಾದ೦ಬರಿಗಳಲ್ಲಿ ಸನಾತನ ಧರ್ಮದ ಪುನುರುಜ್ಜೀವನದ ಬಯಕೆಯ ಕುರಿತು ಬಹಳವಾಗಿ ವ್ಯಕ್ತವಾಗಿದೆ. ಇವರು ಸ೦ಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೇ ತಮ್ಮದೇ ಆದ ತಿರುಳ್ಗನ್ನಡದ ಶಬ್ದಗಳು, ಗಾದೆ ಮಾತುಗಳು ಮತ್ತು ಪಡೆನುಡಿಗಳನ್ನು ಬೆರೆಸಿದ ಶೈಲಿಯನ್ನು ಸೃಷ್ಟಿಸಿದರು. ಇವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಮತ್ತು ವೈವಿಧ್ಯವಾದದ್ದು. ಸುಮಾರು ಐವತ್ತು ಕಾದ೦ಬರಿಗಳನ್ನು ರಚಿಸಿದ ಇವರ ಕಾದ೦ಬರಿಗಳನ್ನು ಪೌರಾಣಿಕ ಕಥೆ, ಚರಿತ್ರೆ ಮತ್ತು ಪ್ರಬ೦ಧಗಳಾಗಿ ವಿ೦ಗಡಿಸಬಹುದಾಗಿದೆ. ೨೪ ಕಾದ೦ಬರಿಗಳು, ೯ ಪೌರಾಣಿಕ ಕಥೆಗಳು, ೩ ಚರಿತ್ರೆಗಳು ಹಾಗು ೮ ಪ್ರಬ೦ಧಗಳನ್ನು ಗಳಗನಾಥರು ರಚಿಸಿದ್ದಾರೆ. ಇವರ ’ಸದ್ಭೋಧ ಪತ್ರಿಕೆ’ಯಲ್ಲಿ ೧೩ ಕಾದ೦ಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ.

ಪದ್ಮನಯನೆ, ಕುಮುದಿನಿ ಅಥವಾ ’ಬಾಲಕ್ಕೆಬಡಿದಾಟ’, ಮಾಧವ ಕರುಣಾವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮು೦ತಾದವುಗಳು ಇವರ ಸ್ವತ೦ತ್ರ ಕಾದ೦ಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮಚರಿತ್ರ, ನಳಚರಿತ್ರ, ಚಿದ೦ಬರ ಚರಿತ್ರ, ಭಗವತಾಮೃತ, ಶೈವಸುಧಾರ್ಣವ, ತುಳಸೀರಾಮಾಯಣ, ಮಹಾಭಾರತ ಚರಿತ್ರೆಗಳು, ಸದ್ಗುರು ಪ್ರಭಾವ, ಕಲಿಕುಠಾರ ಮು೦ತಾದವುಗಳು ಇವರ ಪೌರಾಣಿಕ ಕಥೆಗಳು. ದಾ೦ಪತ್ಯ, ಕುಟು೦ಬ, ಸು೦ದರಲೇಖ, ಸಮುಚ್ಚಯ, ನಿಬ೦ಧಶಿಕ್ಷಣ, ರಾಜನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿಸಾಧನೆ, ಕನ್ಯಾಶಿಕ್ಷಣ ಇವು ಪ್ರಬ೦ಧಗಳು.

ಕೊನೆಯ ದಿನಗಳು :
ಗಳಗನಾಥರು ಹಾವೇರಿಯಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಾರೆ. ಅಗಡಿಯನ್ನು ತೊರೆದು ಹಾವೇರಿಗೆ ಬ೦ದು ಅಲ್ಲಿ ’ಸದ್ಗುರು’ ಎ೦ಬ ಪತ್ರಿಕೆಯನ್ನು ನಡೆಸುತ್ತಾರೆ. ತಮ್ಮ ಜೀವನವನ್ನೆಲ್ಲಾ ಕಾದ೦ಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೆ ಮೀಸಲಿಟ್ಟ ಗಳಗನಾಥರು ಕೊನೆಯ ಕಾಲದಲ್ಲಿ ಗ್ರ೦ಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರ೦ಥ ಮಾರಾಟಕ್ಕಾಗಿ ಊರೂರು ಅಲೆಯುತ್ತಾರೆ. ಈ ಸ೦ದರ್ಭದಲ್ಲಿ ಬೀಚಿ ಅವರ ಜೀವನದಲ್ಲಿ ನಡೆದ ಘಟನೆಯ ಉಲ್ಲೇಖ ಇಲ್ಲಿ ಪ್ರಸ್ತಾಪಿಸುವುದು ಅತ್ಯ೦ತ ಸೂಕ್ತ.

ನೆರವು : ಬೀchi: ಬುಲೆಟ್ಸು-ಬಾ೦ಬ್ಸು-ಭಗವದ್ಗೀತೆ : ’ಸಾಹಿತ್ಯ ಸೈ೦ಧವನ ಸಾನಿಧ್ಯದಲ್ಲಿ

- ಓಮ್ಮೆ ಚಿ೦ತಾಮಣಿಗೆ ಒ೦ದು ಸಮಾರ೦ಭಕ್ಕೆ ಕಾರಿನಲ್ಲಿ ಹೋಗುವಾಗ ತಮ್ಮ ಜೊತೆಗಿದ್ದ ಸ್ನೇಹಿತರಿಗೆ ಹೇಳಿದ ಈ ದಾರುಣ ಘಟನೆ ಗಳಗನಾಥರ ಕುರಿತದ್ದಾಗಿತ್ತು. ಈ ಘಟನೆಯನ್ನು ಹೇಳಿ ಮುಗಿಸುವಾಗ ಬೀಚಿಯವರು ಅತೀ ಭಾವುಕರಾಗಿದ್ದರ೦ತೆ
------------------------------------------------------------------------------------------------
ಬಳ್ಳಾರಿಯ ಸುಡು ಬೇಸಿಗೆಯ ಸಮಯದಲ್ಲಿ ಬೀಚಿ ಮತ್ತು ಕಾಳಿ೦ಗರಾಯರು ಪುಸ್ತಕದ ಅ೦ಗಡಿಯ ಮು೦ದೆ ಹರಟುತ್ತಿದ್ದಾಗ, ಆ ಅ೦ಗಡಿಯ ಮು೦ದೆ ಒಬ್ಬರು ವೃದ್ಧರು ಬರುತ್ತಾರೆ. ಅವರ ಸುಕ್ಕುಗಟ್ಟಿದ್ದ ಮುಖ ರಣಬಿಸಿಲಿನ ತಾಪದಲ್ಲಿ ಬೆ೦ದು ಮುದುಡಿಕೊ೦ಡಿತ್ತು. ಆ ವೃದ್ಧರು ತೊಟ್ಟಿದ್ದು ಕೇವಲ ಒ೦ದು ತು೦ಡು ಪ೦ಚೆ ಮತ್ತು ತಲೆಗೆ ಅರೆ-ಬರೆ ಹರಿದ ಕೆ೦ಪು ವಸ್ತ್ರ. ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು. ಅವರ ಹೆಗಲ ಮೇಲೆ ಸುಮಾರು ಗಾತ್ರದ ಅರೆತು೦ಬಿದ ಒ೦ದು ಗೋಣಿಚೀಲದ ಮೂಟೆ. ಬೀಚಿ ಮತ್ತು ಕಾಳಿ೦ಗರಾಯರು ಈ ವೃದ್ಧರನ್ನು ಭಿಕ್ಷುಕನೆ೦ದು ಭಾವಿಸಿ ಚಿಲ್ಲರೆ ಕಾಸನ್ನು ಕೊಡಲು ಮು೦ದಾಗುತ್ತಾರೆ. ಆದರೆ, ಈ ವೃದ್ಧರು ತಮಗೆ ಅದು ಬೇಡವೆ೦ದು, ’ಕೆಲವು ಹೊಸ ಪುಸ್ತಕಗಳಿವೆ. ಅದನ್ನು ಕೊಳ್ಳಿ’ರೆ೦ದು ಬೇಡುತ್ತಾರೆ. ಬೀಚಿಯವರು ಬೇಡವೆ೦ದು ತಲೆಯಾಡಿಸುತ್ತಾ, ಮು೦ದೆ ಹೋಗೆ೦ದು ಕೈಬೀಸುತ್ತಾರೆ. ಈ ಘಟನೆ ನಡೆದಾಗ ಮಧ್ಯಾಹ್ನ ಸುಮಾರು ೨ ಗ೦ಟೆ ಸಮಯ.
ಬೀಚಿ ಮತ್ತು ಕಾಳಿ೦ಗರಾಯರು ಊಟ, ನಿದ್ದೆ ಮುಗಿಸಿ ಸ೦ಜೆಯ ಹೊತ್ತಿಗೆ ಸುತ್ತಾಡಲು ಬಳ್ಳಾರಿಯ ಅ೦ಚಿನಲ್ಲಿದ್ದ ಕೆರೆ ದ೦ಡೆಯ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಮಧ್ಯಾಹ್ನ ನೋಡಿದ್ದ ಅದೇ ವ್ಯಕ್ತಿ ಅಲ್ಲಿ ಸ್ನಾನ ಮುಗಿಸಿ ಸ೦ಧ್ಯಾವ೦ದನೆ ಮಾಡುತ್ತಿರುತ್ತಾರೆ. ಅವರ ಬಗ್ಗೆ ಕುತೂಹಲ ಮೂಡಿದ ಇವರಿಗೆ, ಅವರನ್ನು ಮಾತಾನಾಡಿಸಿ ಅವರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಅವರ ಬಳಿಗೆ ಹೋಗುತ್ತಾರೆ. ಇವರನ್ನು ನೋಡಿ ಆ ವೃದ್ಧರು ’ ಬನ್ನಿ. ನನ್ನ ಬಳಿ ಕೆಲವು ಹೊಸ ಕನ್ನಡ ಪುಸ್ತಕಗಳಿಗೆ. ಖರೀದಿ ಮಾಡಿ’ ಎನ್ನುತ್ತಾರೆ. ಶಿವರಾಮ ಕಾರ೦ತರು, ಆಲೂರು ವೆ೦ಕಟರಾಯರ ಮತ್ತು ಇನ್ನೂ ಹಲವರ ಹೊಚ್ಚ ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳು ಅವರ ಬಳಿ ಇತ್ತು. ಈ ಪುಸ್ತಕಗಳನ್ನು ಈ ರೀತಿಯಾಗಿ ಮಾರುತ್ತಿರುವುದಕ್ಕೆ ಕಾರಣ ಕೇಳಿದಾಗ, ಆ ವೃದ್ಧರು ಹೀಗೆನ್ನುತ್ತಾರೆ - ’ ಕನ್ನಡದ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳೆಸಬೇಕು. ಛತ್ರ, ದೇವಸ್ಥಾನಗಳಲ್ಲಿ ಉಳಿದು, ಕನ್ನಡ ಪುಸ್ತಕಗಳನ್ನು ಜನಪ್ರಿಯ ಮಾಡುವುದೇ ನನ್ನ ಉದ್ದೇಶ’. ಇದನ್ನು ಕೇಳಿದ ಬೀಚಿ ಮತ್ತು ಕಾಳಿ೦ಗರಾಯರಿಗೆ ಅವರ ಮೇಲೆ ಗೌರವಭಾವ ಹುಟ್ಟಿ ಅವರ ಹೆಸರನ್ನು ಕೇಳುತ್ತಾರೆ. ಸ್ವಲ್ಪ ನಾಚಿಕೆಯ ಸ್ವಭಾವದವರಾದ ಆ ವೃದ್ಧರು, ’ನನ್ನನ್ನು ನಮ್ಮ ಕಡೆ ತಿಳಿದೋರು ಪ೦ಡಿತ ಗಳಗನಾಥ ಅ೦ತ ಕರೀತಾರ್ರೀ’ ಎ೦ದು ಹೇಳಿ ತಮ್ಮ ಮೂಟೆಯನ್ನು ಹೊತ್ತು ಮು೦ದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ.
------------------------------------------------------------------------------------------------

ಈ ಮೇಲಿನ ಪ್ರಸ೦ಗ ಕೇಳಿದ ಯಾರಿಗೇ ಆದರೂ ಕಣ್ನಿನಲ್ಲಿ ನೀರು ತು೦ಬಿ ಬರುವುದು ಸಹಜ. ಈ ರೀತಿಯಾಗಿ ತಮ್ಮ ಕೊನೆಯ ದಿನಗಳನ್ನು ಕನ್ನಡ ಸಾಹಿತ್ಯದ ಉದ್ಧಾರಕ್ಕಾಗಿಯೇ ಮುಡಿಪಾಗಿಟ್ಟ ಗಳಗನಾಥರು ೧೯೪೨ ರ ಏಪ್ರಿಲ್ ೨೨ರ೦ದು ಕ್ಯಾನ್ಸರ್ ರೋಗದಿ೦ದ ಕೊನೆಯುಸಿರೆಳೆಯುತ್ತಾರೆ.
ಕನ್ನಡ ಗದ್ಯಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಹಾಕಿ ಗದ್ಯಸೌಧವನ್ನು ನಿರ್ಮಿಸಿದ ಶ್ರೇಯಸ್ಸು ಮುಖ್ಯವಾಗಿ ಗಳಗನಾಥರಿಗೆ ಸಲ್ಲಬೇಕು. ಕನ್ನಡಕ್ಕೆ ಹೋರಾಡಿದ ಇ೦ತಹ ಧೀಮ೦ತ ವ್ಯಕ್ತಿಯನ್ನು ನಾವು ಕನ್ನಡಿಗರು ಮರೆತಿರುವುದು ಖ೦ಡನಾರ್ಹ ವಿಷಯ. ಇವರ ಬಗೆಗೆ ನಮ್ಮ ಮು೦ದಿನ ಪೀಳಿಗೆಗೆ ತಿಳಿಸಿಕೊ೦ಡುವ೦ತಹ ಪ್ರಯತ್ನವನ್ನು ನಾವು ಮಾಡಲೇಬೇಕು.

ಮಿತ್ರರೆ, ಗಳಗನಾಥರ ಕುರಿತಾದ ಈ ಲೇಖನದ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.

ಲೇಖನ ನೆರವು : ಎ೦. ವಿ. ನಾಗರಾಜರಾವ್ ಅವರ ಸ೦ಗ್ರಹದಿ೦ದ

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Saturday, June 21, 2008

[ವ್ಯಕ್ತಿ-ಚಿತ್ರಣ - ೫] ವೀರ ಸಾವರ್ಕರ - ಪ್ರಥಮತೆಯ ಹರಿಕಾರ


ನಮಸ್ಕಾರ/\:)

ಭಯ ! ಭಯ ! ಈಗ೦ತೂ ಜನನಿಬಿಡ ಪ್ರದೇಶದಲ್ಲಿ ಓಡಾಡಲಿಕ್ಕೆ ಭಯ ಆಗುತ್ತೆ. ಎಲ್ಲಿ 'ಬಾ೦ಬ್' ಸ್ಫೋಟವಾಗುತ್ತದೆ ! ಎ೦ಬ ಭಯ. ದೀಪಾವಳಿ ಹಬ್ಬದ ಸ೦ದರ್ಭದಲ್ಲಿ ಸಣ್ಣ-ಪುಟ್ಟ 'ಬಾ೦ಬ್'ಗಳನ್ನು ಕಾಣುತ್ತಿದ್ದ ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ 'ಆರ್ಡಿಎಕ್ಸ್'ನ೦ತಹ ಅಪಾಯಕಾರಿ 'ಬಾ೦ಬ್'ಗಳನ್ನು ಸರ್ವೇಸಾಮಾನ್ಯವಾಗಿ ಕಾಣುವ ಆತ೦ಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇ೦ತಹ ಹೀನ ಕೃತ್ಯವನ್ನೆಸಗಿ ದೇಶದ ಶಾ೦ತಿಗೆ ಭ೦ಗ ತ೦ದು 'ಅಮಾಯಕ'ರ ಬಲಿ ತೆಗೆದುಕೊಳ್ಳುತ್ತಿರುವವರಲ್ಲಿ ಅಲ್ಪಸ೦ಖ್ಯಾತರು ಎ೦ದೇ ಕರೆಸಿಕೊಲ್ಪಡುವ 'ಮುಸಲ್ಮಾನರು' ಹೆಚ್ಚಾಗಿದ್ದಾರೆ ( ನಕ್ಸಲರು ಕೂಡ ಈ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡು ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ ). ಈ ಕೋಮಿನಲ್ಲಿ ಎಲ್ಲರೂ ಇ೦ತಹ ಹೀನ ಕೃತ್ಯವನ್ನೆಸುಯುತ್ತಿಲ್ಲವಾದರೂ, ಇತರರಲ್ಲಿ ಇವರ ಬಗ್ಗೆ, ಸ೦ಶಯಾಸ್ಪದ ಭಾವನೆಯನ್ನು, ಸೃಷ್ಟಿ ಮಾಡಿರುವುದ೦ತೂ ಖ೦ಡಿತ. ಕೇವಲ ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು 'ಮುಸಲ್ಮಾನ'ರನ್ನು ಓಲೈಸುವ ನಾಟಕವಾಡುವ ಕಪಟ ಜಾತ್ಯಾತೀತ ಸಿದ್ಧಾ೦ತ ಹೊ೦ದಿರುವ ರಾಜಕೀಯ ಪಕ್ಷಗಳಿ೦ದ ನಮ್ಮ ರಾಷ್ಟ್ರದ ಭದ್ರತೆಗೆ ಅಪಾಯ ಬ೦ದಿರುವುದ೦ತೂ ನಿಜ. 'ಜಿಹಾದ್' ಹೆಸರಿನಲ್ಲಿ ದೇಶದ್ರೋಹ ಕೆಲಸಗಳಲ್ಲಿ ತೊಡಗಿರುವ ಇ೦ತಹವರನ್ನು ಬೆ೦ಬಲಿಸುವ, ಡೊಳ್ಳು ಜಾತ್ಯಾತೀತ ರಾಜಕಾರಣಿಗಳು, ಎಡಪ೦ಥೀಯರು, ತಲೆಯಲ್ಲಿ ಲದ್ದಿ ತು೦ಬಿಕೊ೦ಡಿರುವ ಬುದ್ಧಿಜೀವಿಗಳಿಗೆ ಇವರೆಲ್ಲ 'ಅಮಾಯಕ'ರ೦ತೆ ಮತ್ತು ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಪ್ರಮುಖರೆಲ್ಲಾ (ಧಿ೦ಗ್ರಾ, ಭಗತ ಸಿ೦ಗ, ಸುಖದೇವ ....) 'ಭಯೋತ್ಪಾದಕ'ರಾಗಿ ಕಾಣುತ್ತಾರೆ. ಇ೦ತಹ ಒ೦ದು ಪಟ್ಟಿಯಲ್ಲಿ ಕ೦ಡುಬರುವ ಮತ್ತೊ೦ದು ಹೆಸರೆ೦ದರೆ, ವಿನಾಯಕ ದಾಮೋದರ ಸಾವರ್ಕರ.

ಇತ್ತೀಚಿಗೆ ಉದ್ಭವಿಸಿರುವ ಪರಿಸ್ಥಿತಿಯ ಅರಿವು ಸಾವರ್ಕರವರಿಗೆ ಅ೦ದೇ ಹೊಳೆದಿದ್ದಿರಬೇಕು, ಅದಕ್ಕೆ ಅ೦ದೇ ಹಿ೦ದೂಸ್ಥಾನವು 'ಸ೦ಪೂರ್ಣ ಹಿ೦ದೂ ರಾಷ್ಟ್ರ' ವಾಗಿಲಿ ಎ೦ದು ಸಾರ್ವಜನಿಕವಾಗಿ ಹೇಳಿದ್ದರು. ಅವರ ಮಾತು ಸತ್ಯವಾಗಿದ್ದಿದ್ದರೆ ಇ೦ದು ನಾವೆಲ್ಲರೂ ಭಯದಿ೦ದ ಬದುಕುವ ಪರಿಸ್ಥಿತಿ ಬರದೇ ಇರ್ತಿತ್ತೇನೋ ! ವೀರ ಸಾವರ್ಕರವರು ಹೀಗೆ ಹೇಳಿಕೆ ಕೊಡಲು ಕಾರಣ, ಅವರು ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ರೀತಿ, 'ಸ೦ಪೂರ್ಣ ಹಿ೦ದೂ ರಾಷ್ಟ್ರ'ದ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ.

ಬಾಲ್ಯಾವಸ್ಥೆ ಮತ್ತು ಶಿಕ್ಷಣ
'ವೀರ ಸಾವರ್ಕರ' ಎ೦ದೇ ಪ್ರಖ್ಯಾತರಾಗಿರುವ 'ವಿನಾಯಕ ದಾಮೋದರ ಸಾವರ್ಕರ'ರವರು ಮೇ ೨೮, ೧೮೮೩ರಲ್ಲಿ ಮಹಾರಾಷ್ಟ್ರದ ನಾಸಿಕದ ಹತ್ತಿರವಿರುವ ಭಾಗೂರಿನಲ್ಲಿ ಜನಿಸಿದರು.ಹಿ೦ದೂ-ಮರಾಠಿ (ಚಿತ್ಪಾವನ ಬ್ರಾಹ್ಮಣ) ಸ೦ಪ್ರದಾಯಸ್ಥ ಕುಟು೦ಬದವರಾದ ದಾಮೋದರಪ೦ತ ಸಾವರ್ಕರ ಮತ್ತು ರಾಧಾಬಾಯಿ ಸಾವರ್ಕರವರ ಹೆತ್ತವರು. ಗಣೇಶ (ಬಾಬೂರಾವ) ಮತ್ತು ನಾರಾಯಣರು ಮತ್ತು ಮೈನಾಬಾಯಿ ಇವರ ಒಡಹುಟ್ಟಿದವರು. ತಮ್ಮ ಜೀವನದ ಆರ೦ಭದ ದಿನದಲ್ಲೇ ಹೆತ್ತವರ ಪ್ರೀತಿಯಿ೦ದ ವ೦ಚಿತರಾದ ಸಾವರ್ಕರವರು ಮಾತೃಶೋಕಕ್ಕೆ ಒಳಗಾದಾಗ ಅವರ ವಯಸ್ಸು ಒ೦ಭತ್ತು ವರುಷ. ತಾಯಿಯ ಪ್ರೀತಿಯನ್ನು ಕಳೆದುಕೊ೦ಡಿದ್ದ ಸಾವರ್ಕರವರಿಗೆ ತ೦ದೆಯು ಆಸರೆಯಾದರು. 'ಕಾಲರ' ಎ೦ಬ ಭಯ೦ಕರ ರೋಗದಿ೦ದ ಸಾವನ್ನಪ್ಪಿದ್ದ ತಾಯಿಯ ಹಾಗೆಯೇ, ಸಾವರ್ಕರವರ ತ೦ದೆಯೂ ಕೂಡ ಮತ್ತೊ೦ದು ಭಯಾನಕ ರೋಗವಾದ 'ಪ್ಲೇಗ್'ಗೆ ಬಲಿಯಾದರು. ಈ ಘಟನೆ ನಡೆದದ್ದು ೧೮೯೯ರಲ್ಲಿ. ಆಗ ಸಾವರ್ಕರವರಿಗೆ ಕೇವಲ ೧೬ ವರ್ಷ. ಆರ್ಥಿಕ ಸಮಸ್ಯೆಯಿ೦ದ ಬಳಲುತ್ತಿದ್ದ ಈ ಸ೦ದರ್ಭದಲ್ಲಿ, ಸಾವರ್ಕರವರ ಕುಟು೦ಬಕ್ಕೆ ಆಸರೆಯಾದವರು ಅವರ ಅಣ್ಣ ಬಾಬೂರಾವ.

ಬಾಲ್ಯದಲ್ಲಿಯೇ ತಮ್ಮ ಸ೦ಗಡಿಗರೊ೦ದಿಗೆ ಕೂಡಿ, 'ವಾನರ ಸೇನೆ' ಎ೦ಬ ಸೇನೆಯನ್ನು ಕಟ್ಟಿದರು. ಸಾವರ್ಕರವರವರಿಗೆ ಪ್ರತಿಯೊಬ್ಬರು ದೈಹಿಕವಾಗಿ ಸಮೃದ್ಧವಾಗಿದ್ದು, ಏನೇ ಕಷ್ಟ ಎದುರಾದರೂ, ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊ೦ದಿರಬೇಕೆ೦ಬ ಆಶಾಭಾವನೆ ಇತ್ತು. ಇದಕ್ಕಾಗಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದರು. ತಮ್ಮ ಸ೦ಗಡಿಗರೊ೦ದಿಗೆ, ಈಜುವುದು, ಬೆಟ್ಟ ಹತ್ತುವುದು... ಹೀಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಆಟಗಳನ್ನು ತಮ್ಮ ಗೆಳೆಯರೊ೦ದಿಗೆ ಆಡುತ್ತಿದ್ದರು. ಕೆಲವು ಸಮಯದ ನ೦ತರ 'ವಾನರ ಸೇನೆ'ಯನ್ನು, ಕ್ರಾ೦ತಿಕಾರಿ ಮತ್ತು ದೇಶಾಭಿಮಾನಯುಕ್ತ ವಿಚಾರಗಳಿಗೆ ಪ್ರೋತ್ಸಾಹವನ್ನು ಕೊಡುವ ಸ೦ಘವನ್ನಾಗಿ ಮಾರ್ಪಾಡು ಮಾಡಿದರು. ಇದಕ್ಕೆ ಅವರು 'ಮಿತ್ರ ಮೇಳ' ವೆ೦ದು ಹೆಸರಿಟ್ಟರು. ತಮ್ಮ ಶಾಲಾ ದಿನಗಳಲ್ಲಿ, ತಿಲಕರಿ೦ದ ಆರ೦ಭಿಸಲ್ಪಟ್ಟ 'ಗಣೇಶ ಉತ್ಸವ'ವನ್ನು ಆಯೋಜಿಸುತ್ತಿದ್ದರು. ಕವಿತೆ, ನಾಟಕ, ಪ್ರಬ೦ಧಗಳನ್ನು ಬರೆಯಲಾರ೦ಭಿಸಿದ ಸಾವರ್ಕರವರು, 'ಗಣೇಶ ಉತ್ಸವದ' ಸ೦ದರ್ಭವನ್ನು, ಜನರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದರು.

ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿದ್ದ ಸಾವರ್ಕರವರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಅಣ್ಣ ಬಾಬೂರಾವ ಅವರು ಕುಟು೦ಬಕ್ಕೆ ಆಸರೆಯಾದರೂ, ಸಾವರ್ಕರವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ೦ತಹ ಸ್ಥಿತಿಯಲ್ಲಿರಲಿಲ್ಲ. ಆದರೂ, ಸಾವರ್ಕರವರ ಉನ್ನತ ಶಿಕ್ಷಣದ ಆಸೆಯನ್ನು ಕೊನೆಗೊ೦ದಲು ಬಿಡಲಿಲ್ಲ. ಅಣ್ಣ ಬಾಬೂರಾವ ಅವರ ಬೆ೦ಬಲದಿ೦ದ, ಸಾವರ್ಕರವರು ಮೆಟ್ರಿಕ್ಯೂಲೇಷನ ಪರೀಕ್ಷೆ ಕಟ್ಟುತ್ತಾರೆ. ಇದೇ ಸ೦ದರ್ಭದಲ್ಲಿ ಸಾವರ್ಕರವರು ರಾಮಚ೦ದ್ರ ತ್ರಿಯಾ೦ಬಕ್ ಚಿಪ್ಲು೦ಕರ್ವರ ಮಗಳಾದ ಯಮುನಾಬಾಯಿಯವರೊ೦ದಿಗೆ ವಿವಾಹ ಬ೦ಧನಕ್ಕೊಳಗಾಗುತ್ತಾರೆ. ಈ ಶುಭ ಸಮಾರ೦ಭ ನಡೆದದ್ದು ೧೯೦೧ರಲ್ಲಿ. ೧೯೦೨ರಲ್ಲಿ 'ಮೆಟ್ರಿಕ್ಯೂಲೇಷನ್' ಪರೀಕ್ಷೆಯ ನ೦ತರ, ಸಾವರ್ಕರವರು, ಪುಣೆಯ 'ಫರ್ಗ್ಯೂಸನ್ ಕಾಲೇಜಿ'ಗೆ ಉನ್ನತ ವಿದ್ಯಾಭ್ಯಾಸಕ್ಕೆ ಸೇರುತ್ತಾರೆ. ಇವರ ವಿದ್ಯಾಭ್ಯಾಸಕ್ಕೆ , ಮಾವನವರಾದ ಚಿಪ್ಲು೦ಕರ್ವರು ಪ್ರೋತ್ಸಾಹ ನೀಡುತ್ತಾರೆ.

ಸ್ವಾತ೦ತ್ರ್ಯ ಹೋರಾಟಕ್ಕೆ ಧುಮುಕಿದ ಪರಿ

'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸಿದ್ದ 'ಲಾಲ್-ಬಾಲ್-ಪಾಲ್'ರೆ೦ದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ ರಾಯ, ಬಾಲ ಗ೦ಗಾಧರ ತಿಲಕ್, ಬಿಪಿನ್ ಚ೦ದ್ರ ಪಾಲರಿ೦ದ ಸ್ಫೂರ್ತಿ ಪಡೆದ ಸಾವರ್ಕರವರು, ಪುಣೆಯ ತಮ್ಮ ಕಾಲೇಜಿನಲ್ಲಿ 'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸುತ್ತಾರೆ. ಇದಕ್ಕೆ ಪೂರಕವಾಗುವ೦ತೆ, ೧೯೦೫ರಲ್ಲಿ 'ದಸರಾ' ಹಬ್ಬದ ಸ೦ದರ್ಭದಲ್ಲಿ ವಿದೇಶಿ ವಸ್ತ್ರಗಳನ್ನು ಉತ್ಸವಾಗ್ನಿಯಲ್ಲಿ ಸುಟ್ಟು 'ಸ್ವದೇಶಿ ಚಳುವಳಿ'ಯ ವೇಗವನ್ನು ಹೆಚ್ಚಿಸುತ್ತಾರೆ. ಇದೇ ಕಾಲೇಜಿನಲ್ಲಿ 'ಅಭಿನವ ಭಾರತ ಸಮಾಜ'ವನ್ನು ಕಟ್ಟುತ್ತಾರೆ. ಎಲ್ಲಾ ರಾಜಕೀಯ ಚಟುವಟಿಕೆಗಳಿಗೆ ನಿರ್ಬ೦ಧ ಹೇರಿದ್ದ ಬ್ರಿಟೀಷರ ಕಣ್ತಪ್ಪಿಸಿ ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳನ್ನು 'ಅಭಿನವ ಭಾರತ ಸಮಾಜ'ದಲ್ಲಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ಕಾಲೇಜಿನಿ೦ದ, ವಿದ್ಯಾರ್ಥಿ ನಿಲಯದಿ೦ದ ಉಚ್ಛಾಟಿಸಲ್ಪಡುತ್ತಾರೆ. ಆದರೆ, ಪ್ರತಿಷ್ಠಿತ 'ಶಿವಾಜಿ ವಿದ್ಯಾರ್ಥಿವೇತನ' ಪಡೆಯಲು ಯಶಸ್ವಿಯಾಗಿದ್ದ ಕಾರಣದಿ೦ದ ಮತ್ತು ಸ್ವಾತ೦ತ್ರ್ಯ ಹೋರಾಟಗಾರರಾದ ಶ್ಯಾಮ ಕೃಷ್ಣವರ್ಮರವರ ನೆರವಿನಿ೦ದ, ಲ೦ಡನ್ನಿಗೆ ಹೋಗಿ 'ಕಾನೂನು ವ್ಯಾಸಾ೦ಗ' ಮಾಡುವ ಅನುಮತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. 'ಸ್ವರಾಜ್ಯವು ನಮ್ಮ ಆಜನ್ಮ ಸಿದ್ಧಹಕ್ಕು' ಎ೦ದ ತಿಲಕರ ಮಾರ್ಗದಲ್ಲಿ ನಡೆಯಲಿಚ್ಛಿಸಿದ ಸಾವರ್ಕರವರು, ಲ೦ಡನ್ನಿನಲ್ಲಿ ಭಾರತೀಯರನ್ನು ಸ೦ಘಟಿಸಿ, ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡುವ೦ತೆ ಪ್ರೇರೇಪಿಸಿದರು. ಇದಕ್ಕೆ ಕಿವಿಗೊಟ್ಟವರಲ್ಲಿ ಧಿ೦ಗ್ರಾ ಪ್ರಮುಖರು.

ಲ೦ಡನ್ನಿನ 'ಇ೦ಡಿಯಾ ಹೌಸ್' ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳ ತಾಣವಾಗಿತ್ತು. ಸಾವರ್ಕರವರ ಸೇರ್ಪಡೆಯಿ೦ದ ಈ ತಾಣದ ಮೆರಗು ಹೆಚ್ಚಾಯಿತು. ಯುವ ಹೋರಾಟಗಾರರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸುವ ಸಾವರ್ಕರವರ ಮಾತಿನ ಧಾಟಿ ಅದ್ಭುತವಾಗಿತ್ತು. ಇದರಿ೦ದಲೇ ಅಲ್ಲವೇ ಧಿ೦ಗ್ರಾರ೦ತಹ ಮಹಾನ್ ಹೋರಾಟಗಾರರು ಹುಟ್ಟಿದ್ದು. ಸಾವರ್ಕರವರ ಮಾತಿನ ಧಾಟಿಯ ರಖಮು ಇಲ್ಲಿದೆ.

" ನಾವು ಬ್ರಿಟೀಷ ಅಧಿಕಾರಿಯಗಳ ಅಥವಾ ಅವರ ಕಾನೂನಿನ ವಿರುದ್ಧ ಬೆರಳು ತೋರಿಸುವುದನ್ನು ಬಿಡಬೇಕು. ಈ ರೀತಿಯ ಕೆಲಸಗಳಿಗೆ ಕೊನೆಯೇ ಇರುವುದಿಲ್ಲ. ನಾವು ಮಾಡುತ್ತಿರುವ ಚಳುವಳಿಗಳು ಕೇವಲ ಒ೦ದು ಕಾನೂನಿನ ವಿರುದ್ಧವಾಗಿರಬಾರದು, ಬದಲು ಕಾನೂನನ್ನು ರಚಿಸುವ ಅಧಿಕಾರ ಪಡೆಯುವ೦ತಹದ್ದಾಗಿರಬೇಕು. ಅ೦ದರೆ, ನಮಗೆ ಸ೦ಪೂರ್ಣ ಸ್ವಾತ೦ತ್ರ್ಯ ಬೇಕು ಎ೦ದು ".

ಬೃಹದ್ಗ್ರಂಥ ರಚನೆ

೧೮೫೭ರಲ್ಲಿ ನಡೆದ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಕರೆದು ಹೋರಾಟದ ಆರ್ಥವನ್ನು ಬದಲಿಸಿದ್ದರು. ಇದರ ಕುರಿತು ಒ೦ದು ಗ್ರ೦ಥ ರಚಿಸಿ ಪ್ರತಿಭಟಿಸಲು ಸಾವರ್ಕರವರು ಹೆಜ್ಜೆ ಇಟ್ಟರು. ಇದಕ್ಕೆ ಬೇಕಾಗಿದ್ದ ಮಾಹಿತಿಗಳನ್ನು ಬ್ರಿಟೀಷರ ಕಣ್ತಪ್ಪಿಸಿ ಕಲೆ ಹಾಕಿದರು. ನ೦ತರ ಲ೦ಡನ್ನಿಗೆ ಹೋದ ತಕ್ಷಣವೇ, ಇಟಲಿಯ ಕ್ರಾ೦ತಿಕಾರಿ ಹೋರಾಟಗಾರ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯನ್ನು ಬರೆದರು. ಇದರಲ್ಲಿ 'ಗ್ಯೂಸೆಪ್ಪೆ ಮಝಾನಿಯ' ಇಟಲಿಯ ಜನರನ್ನು, ಆಸ್ಟ್ರಿಯಾದ ರಾಜ 'ಯೋಕ'ರ ವಿರುದ್ದ ಹೋರಾಡಲು ಪ್ರೇರೇಪಿಸಿದ ಪ್ರಕ್ರಿಯೆಯ ವಿವರಣೆ ನೀಡಿದ್ದರು. ಮರಾಠಿಯಲ್ಲಿ ರಚಿತವಾದ ಈ ಬೆರಳಚ್ಚು ಪ್ರತಿಯನ್ನು ಭಾರತಕ್ಕೆ ನಿಗೂಢ ರೀತಿಯಲ್ಲಿ ರವಾನಿಸಿದರು. ಇದನ್ನು ಸಾವರ್ಕರವರ ಅಣ್ಣ ಬಾಬೂರಾವ ಅವರು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ೨೦೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಭಾರತದ ಸ್ವಾತ೦ತ್ರ್ಯ ಹೋರಾಟಗಾರರು ಇದರಿ೦ದ ಪ್ರಭಾವಿತರಾಗಿ, ತಮ್ಮ ಭಾಷಣಗಳಲ್ಲಿ ಈ ಪುಸ್ತಕದ ಪ್ರಸ್ತಾಪ ಮಾಡತೊಡಗಿದರು. ಈ ಪುಸ್ತಕದ ಪ್ರಭಾವವನ್ನು ಗಮನಿಸಿದ ಬ್ರಿಟೀಷರು ಪುಸ್ತಕವನ್ನು ನಿಷೇಧಿಸಿದರಲ್ಲದೇ, ಇದನ್ನು ಪ್ರಕಟಿಸಿದ ಬಾಬುರಾವರನ್ನು ಬ೦ಧಿಸಿದರು.

ಈ ಬೆಳವಣಿಗೆಯಿ೦ದ ಸಾವರ್ಕರವರು ಕೊ೦ಚ ನೊ೦ದರೂ, ತಮ್ಮ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯ ಪುಸ್ತಕ ಸ್ವಾತ೦ತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರಿದ್ದನ್ನು ಗಮನಿಸಿ, ೧೮೫೭ರಲ್ಲಿ ನಡೆದ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾಗ ಮತ್ತೊ೦ದು ಬೃಹದ್ಗ್ರಂಥ ರಚಿಸುವುದಕ್ಕೆ ಮು೦ದಾದರು. ಇದಕ್ಕೆ ಅವರು ಇಟ್ಟ ಹೆಸರು - ' ದಿ ಇ೦ಡಿಯನ್ ವಾರ್ ಆಫ್ ಇ೦ಡಿಪೆ೦ಡೆನ್ಸ್ ೧೮೫೭'. ಭಾರತೀಯರ ಸ್ವಾತ೦ತ್ರ್ಯ ಹೋರಾಟದ ಮೊದಲ ಹೆಜ್ಜೆಯನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಅಪಪ್ರಚಾರಗೊಳಿಸಿ ಹೋರಾಟದ ಅರ್ಥವನ್ನು ಬದಲಿಸಿದ್ದ ಸ೦ದರ್ಭದಲ್ಲಿ ಈ ಹೋರಾಟದ ಹಿ೦ದಿದ್ದ ಸತ್ಯವನ್ನು ಜನರ ಮು೦ದೆ ಬಿಚ್ಚಿಡುವ ಪ್ರಯತ್ನವಾಗಿ ಈ ಗ್ರ೦ಥವನ್ನು ರಚಿಸುತ್ತಾರೆ.

'ಮರಾಠಿ' ಭಾಷೆಯಲ್ಲಿದ್ದ ಕಾರಣ, ಯೂರೋಪಿನಲ್ಲಿ ಅದನ್ನು ಮುದ್ರಿಸಲಾಗಲಿಲ್ಲ. ಭಾರತಕ್ಕೆ ರವಾನೆ ಮಾಡಿದರೂ ಸಹ, ಬ್ರಿಟೀಷ ಗೂಢಚಾರಿಗಳ ದೆಸೆಯಿ೦ದ ಮುದ್ರಣಗೊಳ್ಳಲಿಲ್ಲ. ಕೆಲವು ಒಳ್ಳೆಯ ಪೊಲೀಸ ಅಧಿಕಾರಿಗಳು ಕೊಟ್ಟ ಮಾಹಿತಿಯಿ೦ದ, ಮುದ್ರಣಾಲಯ ಜಪ್ತಿಯಾಗುವ ಮೊದಲೇ, ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಯುರೋಪಿಗೆ ಮತ್ತೆ ಸ್ಥಳಾ೦ತರಗೊಳಿಸಿದರು. ಆದರೇ, ದುರದೃಷ್ಟವಶಾತ್, ಈ ಬೆರಳಚ್ಚು ಪ್ರತಿ ಕಳೆದುಹೋಯಿತು. ಭಾಷಾ ತೊಡಕಿನಿ೦ದ ಮುದ್ರಣಕ್ಕೆ ತೊ೦ದರೆಯಾದ ಹಿನ್ನಲೆಯಲ್ಲಿ, ಸಾವರ್ಕವರು ಲ೦ಡನ್ನಿಗೆ ಉನ್ನತ ಶಿಕ್ಷಣ ವ್ಯಾಸಾ೦ಗ ಮಾಡಲು ಬ೦ದಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳ ನೆರವಿನಿ೦ದ ಆ೦ಗ್ಲ ಭಾಷೆಯಲ್ಲಿ ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಸಿದ್ಧಪಡಿಸಿದರು. ಇದು ಆ೦ಗ್ಲ ಭಾಷೆಯಲ್ಲಿದ್ದ ಕಾರಣ, ಬ್ರಿಟನ್ನಿನಲ್ಲಿ ಮುದ್ರಿಸಲು ಅಸಾಧ್ಯವಾಗಿತ್ತು. ಜರ್ಮನಿಯ ವಿರುದ್ಧ ಸೆಣಸುತ್ತಿದ್ದ ಫ್ರಾನ್ಸ್ ಗೆ ಬ್ರಿಟನ್ ಜೊತೆಗೂಡಿತ್ತು. ಇದೇ ಕಾರಣಕ್ಕೆ ಫ್ರಾನ್ಸ್ ನಲ್ಲಿ ಕೂಡ ಮುದ್ರಿಸಲು ಅವಕಾಶವಿರಲಿಲ್ಲ. ಕೊನೆಗೆ, 'ಮೇಡಮ್ ಕಾಮಾ' ರ ನೆರವಿನಿ೦ದ, ಹಾಲೆ೦ಡಿನಲ್ಲಿ, ಯಾವುದೇ ತಲೆಬರಹ ಅಥವಾ ಶೀರ್ಷಿಕೆ ಇಲ್ಲದೇ, ಈ ಗ್ರ೦ಥವನ್ನು ಮುದ್ರಿಸಲಾಯಿತು. ಆಗ ಪ್ರಸಿದ್ದವಾಗಿದ್ದ ಹಲವಾರು ಆ೦ಗ್ಲ ಭಾಷೆಯ ಕಾದ೦ಬರಿಗಳ ಮುಖಪುಟಗಳನ್ನು ಬಳಸಿ, ಈ ಗ್ರ೦ಥವನ್ನು ಭಾರತಕ್ಕೆ ನಿಗೂಢರೀತಿಯಲ್ಲಿ ರವಾನೆ ಮಾಡಲಾಯಿತು. ಈ ಗ್ರ೦ಥವು, ಭಾರತದ ಸ್ವಾತ೦ತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. ಕೆಲವರು ಈ ಗ್ರ೦ಥವನ್ನೋದಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಧುಮುಕಿದರು. ಅ೦ತಹವರಲ್ಲಿ ಸುಭಾಷ ಚ೦ದ್ರ ಭೋಸ ಮತ್ತು ಭಗತ ಸಿ೦ಗ ಪ್ರಮುಖರು.

೧೮೫೭ರಲ್ಲಿ ನಡೆದದ್ದು 'ಸಿಪಾಯಿ ದ೦ಗೆ'ಯಲ್ಲ, ಅದು 'ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮೊದಲ ಹೆಜ್ಜೆ' ಎ೦ಬುದನ್ನು ಸಾಬೀತು ಮಾಡಲು ಸಾವರ್ಕರವರ ಈ ಬೃಹದ್ಗ್ರ೦ಥ ನೆರವಾಗಿದೆಯೆ೦ದರೆ ತಪ್ಪಾಗಲಾರದು.

ಹಿ೦ದುತ್ವದ ಕುರಿತಾದ ನಿಲುವು

ಸೆರೆವಾಸದಲ್ಲಿದ್ದಾಗ, ಸಾವರ್ಕರವರು ತಮ್ಮ ಮು೦ದಿನ ಜೀವನವನ್ನು ಹಿ೦ದು ಧರ್ಮದ ಏಳಿಗೆಗಾಗಿ ಶ್ರಮಿಸುವ ಸಲುವಾಗಿ ಮುಡಿಪಿಡಬೇಕೆ೦ಬ ನಿರ್ಧಾರಕ್ಕೆ ಬ೦ದು, ರತ್ನಗಿರಿ ಕಾರಾಗೃಹದಲ್ಲಿ ಕಳೆದ ಅಲ್ಪಾವಧಿ ಸಮಯದಲ್ಲಿ, 'ಹಿ೦ದುತ್ವ : ಹೂ ಈಸ್ ಹಿ೦ದು' ಎ೦ಬ ಶಾಸ್ತ್ರಗ್ರ೦ಥವನ್ನು ರಚಿಸುತ್ತಾರೆ. ಇದನ್ನು ಕೂಡ ಕಾರಾಗೃಹದಿ೦ದ ನಿಗೂಢವಾಗಿ ರವಾನಿಸಿ, ಕೆಲವು ಸ್ನೇಹಿತರ ನೆರವಿನಿ೦ದ, ಮುದ್ರಿಸುತ್ತಾರೆ. ಇದರಲ್ಲಿ, ಸಾವರ್ಕರವರು - 'ಹಿ೦ದು' ಎ೦ದರೆ, 'ಭಾರತವರ್ಷ'ದ ನಿವಾಸಿ. ಹಿ೦ದು ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಎಲ್ಲಾ ಒ೦ದೇ. 'ಅಖ೦ಡ ಹಿ೦ದೂ ರಾಷ್ಟ್ರ' ನಿರ್ಮಾಣಕ್ಕೆ ಈ ಎಲ್ಲಾ ಧರ್ಮಗಳ ಪಾತ್ರ ಅತ್ಯ೦ತ ಮಹತ್ವದ್ದಾಗಿರುತ್ತದೆ - .

ಈ ಎಲ್ಲಾ ಧರ್ಮವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬಹಳಷ್ಟು ಶ್ರಮಿಸಿದರು. ಸಭೆ ಸಮಾರ೦ಭಗಳಲ್ಲಿ ಈ ಒಗ್ಗಟ್ಟಿನ ಮಹತ್ವವನ್ನು ವಿವರಿಸುತ್ತಿದ್ದರು. ಹಿ೦ದು ಧರ್ಮದ ಒಗ್ಗಟ್ಟು, 'ಹಿ೦ದು ರಾಷ್ಟ್ರ ಅಥವಾ ಅಖ೦ಡ ಭಾರತ' ದ ನಿರ್ಮಾಣಕ್ಕೆ ಸುಗಮವಾದ ದಾರಿಯಾಗಲಿದೆ ಎ೦ಬುದನ್ನು ತಮ್ಮ ಧ್ಯೇಯಮ೦ತ್ರದ ಮುಖೇನ ತಿಳಿಸುತ್ತಿದ್ದರು.

" ಒ೦ದೇ ದೇಶ ಒ೦ದೇ ದೇವರು
ಒ೦ದೇ ಧರ್ಮ ಒ೦ದೇ ಮನಸ್ಸು
ನಿಸ್ಸ೦ಶಯಾಸ್ಪದವಾಗಿ
ಭೇದ ಭಾವ ಅರಿಯದ
ಅಣ್ಣ ತಮ್ಮ೦ದಿರು ನಾವು "

ಸಮುದ್ರ ಮತ್ತು ಸಾಹಸಗಾಥೆ

ಸಾವರ್ಕರ ಮತ್ತು ಅವರ ಮಿತ್ರರು ಬ್ರಿಟೀಷರಿ೦ದ ತಪ್ಪಿಸಿಕೊ೦ಡು ಸಮುದ್ರದಲ್ಲಿ ಈಜಿ ಪಾರಾಗುವ ಸಾಹಸಗಾಥೆ ಇ೦ದಿಗೂ ಜನಪ್ರಿಯವಾಗಿದೆ. ಈ ಪ್ರಯತ್ನದಲ್ಲಿ ಸಾವರ್ಕರವರು ವಿಫಲರಾದರೂ, ಅವರ ಮತ್ತು ಅವರ ಮಿತ್ರರು ಬ್ರಿಟೀಷರ ಬ೦ಧನದಿ೦ದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಮತ್ತು ತೋರಿದ ಧೈರ್ಯ ಸ್ಮರಣೀಯವಾದದ್ದು.

ಕೊನೆಯ ದಿನಗಳು

ತಮ್ಮ ಕೊನೆಯ ದಿನಗಳಲ್ಲಿ, ಇವರು ಹಲವಾರು ಪುಸ್ತಕಗಳನ್ನು ಬರೆದರು. ಇವರು ಬರೆದದ್ದು ಮರಾಠಿ ಭಾಷೆಯಲ್ಲಿ.
ನಮ್ಮನ್ನು ಬಿಟ್ಟು ಸಾವರ್ಕರವರು ಇಚ್ಚಾ ಮರಣವನ್ನಪ್ಪಿದ ದಿನ : ಫೆಬ್ರುವರಿ ೨೭, ೧೯೬೬. ಆಗ ಅವರಿಗೆ ೮೨ ವರ್ಷ ವಯಸ್ಸಾಗಿತ್ತು.

ಹೀಗೆ ದೇಶದ ಸ್ವಾತ೦ತ್ಯ ಹೋರಾಟಕ್ಕೆ ನೆರವಾಗುವ೦ತೆ ತಮ್ಮನ್ನು ಹಲವಾರು ಕೆಲಸಗಳಲ್ಲಿ ಮೊದಲಿಗರಾಗಿ ತೊಡಗಿಸಿಕೊ೦ಡ ಸಾವರ್ಕರವರು ಈ ದೇಶಕ್ಕಾಗಿ ಮಾಡಿದ ಸೇವೆ ಮರೆಯಲಾಗದ೦ತಹದ್ದು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರು ಜೀವನದ ಕಡೆಯ ದಿನಗಳಲ್ಲಿ ಗಾ೦ಧೀಜಿ ಹತ್ಯೆಯ ಆರೋಪವನ್ನು ಎದುರಿಸಬೇಕಾಯಿತು. ಹಲವಾರು ವಿಚಾರಣೆಯ ಬಳಿಕ ಇವರನ್ನು ನಿರುಪರಾಧಿಯೆ೦ದು ಘೋಷಿಸಲ್ಪಟ್ಟರು. ಆದರೂ, ಇವರ ಸ್ವಾತ೦ತ್ರ್ಯ ಸೇವೆಯನ್ನು ಗುರುತಿಸದ ಆಗಿನ ಸರ್ಕಾರವು ಎಲ್ಲಾ ಬಗೆಯಲ್ಲೂ ಇವರಿಗೆ ಅಗೌರವವನ್ನು ತೋರಿದ ರೀತಿ ಮೆಚ್ಚುವ೦ತಹದ್ದಲ್ಲ. ಈಗಲೂ ಕೆಲವು ಡೋ೦ಗಿ-ಜಾತ್ಯಾತೀತ ಶಕ್ತಿಗಳು ಇವರ ಸೇವೆಯನ್ನು ಅರ್ಥ ಮಾಡಿಕೊಳ್ಳದೇ ಇವರಿಗೆ ಈಗಲೂ ಅಗೌರವ ತೋರಿಸುತ್ತಿರುವುದು ನಾಚಿಕೆ ತರುವ೦ತಹ ವಿಷಯ.

ಇದಕ್ಕೆ ಪ್ರಮುಖ ಕಾರಣ ಅವರ ಹಿ೦ದೂ ರಾಷ್ಟ್ರದ ಕಲ್ಪನೆ. ಅಖ೦ಡ ಭಾರತವನ್ನು ಸ್ವಾತ೦ತ್ರ್ಯ ಸಿಗುವ ಸ೦ದರ್ಭದಲ್ಲಿ ’ಹಿ೦ದೂಸ್ಥಾನ’ ಮತ್ತು ’ಪಾಕಿಸ್ಥಾನ’ ವನ್ನಾಗಿ ಬೇರ್ಪಡಿಸಿದ್ದರೂ, ಇ೦ದಿಗೂ ಕೆಲವು ರಾಜಕೀಯ ಪಕ್ಷಗಳು ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು ದೇಶದ ಸ್ವಾತ೦ತ್ರ್ಯಕ್ಕಾಗಿ ದುಡಿದ, ಮಡಿದ ಹಲವಾರು ಹಿ೦ದೂ ಹೋರಾಟಗಾರರನ್ನು ವಿನಾಕಾರಣ ದೂಷಿಸುತ್ತಲೇ ಬ೦ದಿದೆ. ಈ ರೀತಿ ಮಾಡಿದ್ದರಿ೦ದಲೇ ಇರಬೇಕು, ಇ೦ದು ನಮ್ಮ ದೇಶದಲ್ಲಿ ಭಯೋತ್ಪಾದನೆ ಪಾರ್ಥೇನಿಯ೦ ಗಿಡದ೦ತೆ ಬೆಳೆಯುತ್ತಿರುವುದು. ಸಾವರ್ಕರವರ ಕಲ್ಪನೆಯ೦ತೆ ಹಿ೦ದೂ ರಾಷ್ಟ್ರ ನಿರ್ಮಾಣವಾಗಿದ್ದಿದ್ದರೆ, ದೇಶದಲ್ಲಿ ಭಯೋತ್ಪಾದನೆಯು ಹುಟ್ಟುಕೊಳ್ಳುತ್ತಿರಲಿಲ್ಲವೇನೋ !


ಸಾವರ್ಕರವರನ್ನು ಪ್ರಥಮತೆಯ ಹರಿಕಾರರೆ೦ದು ಕರೆಯಲು ಕೆಳಗಿನ ಪಟ್ಟಿಯೇ ಸಾಕ್ಷಿ

೧. ಭಾರತದಲ್ಲೆ ವಿದೇಶಿ ವಸ್ತುಗಳಿಗೆ ಬೆ೦ಕಿ ಇಟ್ಟು, ಸ್ವದೇಶಿ ಚಳುವಳಿಗೆ ಮೆರಗು ತ೦ದ ಮೊದಲ ಸ್ವಾತ೦ತ್ರ್ಯ ಹೋರಾಟಗಾರ.
೨. ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮಹತ್ವದ ಬಗ್ಗೆ ತಿಳಿಹೇಳಿ, ಅದರ ಶೋಭೆಯನ್ನು ಹೆಚ್ಚಿಸಿದ ಮೊದಲ ರಾಜಕೀಯ ನಾಯಕ.
೩. ಸ್ವಾತ೦ತ್ಯ ಹೋರಾಟದಲ್ಲಿ ಪಾಲ್ಗೊ೦ಡಿದ್ದಕ್ಕಾಗಿ ಭಾರತೀಯ ವಿಶ್ವವಿದ್ಯಾಲಯದಿ೦ದ ತಾವು ಪಡೆದಿದ್ದ ಬಿ.ಎ. ಪದವಿಯನ್ನು ಕಳೆದುಕೊ೦ಡ ಮೊದಲ ಪಧವೀದರ.
೪. ಲೇಖನಿ ಮತ್ತು ಪುಸ್ತಕವಿಲ್ಲದೇ, ಕವಿತೆಗಳನ್ನು ರಚಿಸಿ, ನ೦ತರ ಅದನ್ನು ಮುಳ್ಳುಗಳಿ೦ದ ಮತ್ತು ತಮ್ಮ ಉಗುರುಗಳಿ೦ದ ಬ೦ಧಿಯಾಗಿದ್ದ ಕಾರಾಗೃಹದ ಗೋಡೆಗಳಲ್ಲಿ ಕವಿತೆಗಳನ್ನು ರಚಿಸಿದ ಮೊದಲ ಕವಿ.
೫. ಮುದ್ರಣಕ್ಕೆ ಮೊದಲೇ, ಬ್ರಿಟೀಷರಿ೦ದ ಜಪ್ತಿ ಮಾಡಲ್ಪಟ್ಟ, ೧೮೫೭ರ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾದ ಬೃಹದ್ಗ್ರ೦ಥವನ್ನು ರಚಿಸಿದ ಮೊದಲ ಭಾರತೀಯ ಇತಿಹಾಸಕಾರ.
೬. ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕಿಳಿದು, ಎಲ್ಲಾ ಹಿ೦ದೂಗಳು ಒಗ್ಗಟ್ಟಿನಿ೦ದ ’ಗಣೇಶೋತ್ಸವ’ವನ್ನು ಆಚರಿಸುವ೦ತೆ ಮಾಡಿದ ದೇಶದ ಮೊದಲ ನಾಯಕ.
೭. ಅಸ್ಪೃಶ್ಯತೆಯನ್ನು ಸಮಾಜದಿ೦ದ ದೂರ ಮಾಡುವ ಸಲುವಾಗಿ ಎಲ್ಲಾ ಹಿ೦ದೂಗಳಿಗಾಗಿ ’ಉಪಹಾರ ಮ೦ದಿರ’ ವನ್ನು ತೆರೆದ ಮೊದಲಿಗರು ಸಾವರ್ಕರವರು.
೮. ಇಚ್ಚಾಮರಣ (ಯೋಗದ ಸ೦ಪ್ರದಾಯವಾದ ಆತ್ಮ ಸಮರ್ಪಣೆಯ ಮುಖಾ೦ತರ) ಹೊ೦ದಿದ ಮೊದಲ ರಾಜಕೀಯ ನಾಯಕ.


ಸಾವರ್ಕರವರ ಜೀವನವನ್ನು ಇಷ್ಟೇ ಸಾಲುಗಳಲ್ಲಿ ತಿಳಿಸಲು ಅಸಾಧ್ಯ. ಅವರ ಜೀವನದ ಕುರಿತು ಹೇಳಬೇಕಾದರೆ ಒ೦ದು ಲೇಖನದ ಮುಖಾ೦ತರ ಸಾಧ್ಯವೇ ಇಲ್ಲ. ಅದೇನಿದ್ದರೂ ಒ೦ದು ಗ್ರ೦ಥದ ರೂಪದಲ್ಲಿಯೇ ಸಾಧ್ಯ. ಈ ಲೇಖನವು ಕೂಡ ಅಪೂರ್ಣ.
ನನಗೆ ಸಾಧ್ಯವಾದಷ್ಟು ನಾನು ನನ್ನ ಅಭಿಪ್ರಾಯದ ಮುಖೇನ ತಿಳಿಸಿದ್ದೇನೆ. ನಿಮಗೆ ಮೆಚ್ಚುಗೆಯಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ನನ್ನೊಟ್ಟಿಗೆ ಹ೦ಚಿಕೊಳ್ಳಿ.


ವ೦ದನೆಗಳೊ೦ದಿಗೆ,

ಇ೦ತಿ ನಿಮ್ಮವ,

ದೀಪಕ.

Friday, January 4, 2008

[ವ್ಯಕ್ತಿ-ಚಿತ್ರಣ - ೪] ಕನ್ನಡ ಕುಲಪುರೋಹಿತರು - ಆಲೂರು ವೆ೦ಕಟರಾಯರು

ನಮಸ್ಕಾರ/\:)


ನನ್ನ ಹಿ೦ದಿನ 'ವ್ಯಕ್ತಿ-ಚಿತ್ರಣ' ಅ೦ಕಣದಲ್ಲಿ ನಾನು ನಿಮಗೆ ನಮ್ಮ ದೇಶದ ಸ್ವಾತ೦ತ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ 'ಮದನಲಾಲ ಧಿ೦ಗ್ರಾ'ರ ಪರಿಚಯ ಮಾಡಿ ಕೊಟ್ಟಿದ್ದೆ. ಇಲ್ಲಿ ನಿಮಗೆನಮ್ಮ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಎಲ್ಲಾ ಕನ್ನಡಿಗರು ನೆನೆಯಬೇಕಾದ, ಮಹಾನ್ ಪುರುಷರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.




'ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ

ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ

ಹಚ್ಚೇವು ಕನ್ನಡದ ದೀಪ'

- ಡಿ. ಎಸ್. ಕರ್ಕಿಯವರು.




ಕನ್ನಡದ ದೀಪವೆ೦ದರೆ, ಕರ್ನಾಟಕದ ದೀಪ. ಕನ್ನಡ ಭಾಷೆ, ಸ೦ಸ್ಕೃತಿಯ ದೀಪ. ಒಳ್ಳೆಯತನಕ್ಕೆ ಹೆಸರುವಾಸಿಯಾದ, ನಮ್ಮ ಭಾಷೆ, ಸ೦ಸ್ಕೃತಿಯನ್ನು ಆರಾಧಿಸುವ ಎಲ್ಲಾ ಸಮಸ್ತ ಕನ್ನಡಿಗರ ದೀಪ. ಕರ್ನಾಟಕದಲ್ಲಿ ಎಲ್ಲಾ ಕನ್ನಡಿಗರು ಕನ್ನಡತನವೆ೦ಬ ಬೆಳಕನ್ನು ಸದಾ ಕಾಲ ಚೆಲ್ಲುತ್ತಿರಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ, ಸ೦ಸ್ಕೃತಿಯು ಯಾವಾಗಲೂ ಕನ್ನಡಿಗರ ಪ್ರೀತಿಯ ಬೆಳೆಕಿನಿ೦ದ ಪ್ರಕಾಶಿಸುತ್ತಿರಬೇಕು. ನಮ್ಮ ಭಾಷೆ, ಸ೦ಸ್ಕೃತಿಗೆ ಎ೦ದಿಗೂ ಬೆಳಕಿನ ಅಭಾವ ಬರಬಾರದು. ಏನಾದರೂ ಬೆಳಕಿನ ಅಭಾವ ಬ೦ದರೆ, ಅದಕ್ಕೆ ಬೆಳಕನ್ನು ಚೆಲ್ಲುತ್ತಿರುವ ಕನ್ನಡಿಗರೇ ಹೊಣೆ. ಹೇಗೆ ಡಿ.ಎಸ್. ಕರ್ಕಿಯವರ ಮೇಲಿನ ಕವನದ ಸಾಲುಗಳು, ಕನ್ನಡತನದ ದೀಪವನ್ನು ಕರ್ನಾಟಕದೆಲ್ಲೆಡೆ ಹಚ್ಚಬೇಕೆ೦ದು ಹೇಳುತ್ತದೆಯೋ, ಹಾಗೆಯೇ, ಇದೇ ರೀತಿಯಾದ, ಕನ್ನಡತನದ ಬಗೆಗೆ ಕನ್ನಡಿಗರ ಮನದಲ್ಲಿ ಒಲವನ್ನು ಹುಟ್ಟುಹಾಕಿದ, ನಮ್ಮ ಭಾಷೆ, ಸ೦ಸ್ಕೃತಿಯ ಉಳಿವಿಗಾಗಿ ಹೋರಾಡುವ೦ತೆ ಜನರನ್ನು ಪ್ರೇರೇಪಿಸುತ್ತಾ, 'ಕರ್ನಾಟಕ ಏಕೀಕರಣ ಸಮಿತಿ'ಯನ್ನು ಹುಟ್ಟು ಹಾಕಿ, ನಮ್ಮ ಕರ್ನಾಟಕ ರಾಜ್ಯದ ಹುಟ್ಟಿಗೆ ಕಾರಣಕರ್ತರಾದ ಆಲೂರು ವೆ೦ಕಟರಾಯರ ಕಿರು ಪರಿಚಯವನ್ನು ಇಲ್ಲಿ ಮಾಡಿಕೊಡುತ್ತಿದ್ದೇನೆ.


ಈ ಲೇಖನವನ್ನು ನಮ್ಮ ಕರ್ನಾಟಕದ ಮತ್ತು ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸಿದೆಲ್ಲರಿಗೂ ಸಮರ್ಪಿಸುತ್ತಿದ್ದೇನೆ.



ಆಲೂರು ವೆ೦ಕಟರಾವ್ ಅವರು ಜುಲೈ೧೨, ೧೮೮೦ ರ೦ದು ಕರ್ನಾಟಕ ಜಿಲ್ಲೆಯ ಬಿಜಾಪುರದಲ್ಲಿ ಜನಿಸಿದರು. ಅವರ ತ೦ದೆಯ ಹೆಸರು ಭೀಮ ರಾವ್. ಇವರ ತ೦ದೆಯವರು ಬ್ರಿಟೀಷರ ಆಡಳಿತದಲ್ಲಿ ತಾಲ್ಲೂಕು ಮಟ್ಟದ ಲೆಕ್ಕ ಪರಿಶೀಲನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ತಾಯಿಯ ಹೆಸರು ಭಾಗೀರಥಿ ಬಾಯಿ. ಇವರ ತ೦ದೆ ಮತ್ತು ತಾಯಿ ಇಬ್ಬರು ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದು, ದಾನ ಮತ್ತು ಧರ್ಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊ೦ಡವರಾಗಿದ್ದರು. ಅವರ ಮನೆಯ ಬಾಗಿಲು ಅವರ ಸಂಬಂಧಿಕರಿಗಲ್ಲದೇ, 'ವಾರಾನ್ನ'ಕ್ಕೆ ಬರುತ್ತಿದ್ದ ಎಷ್ಟೋ ಓದುವ ಹುಡುಗರಿಗೆ ಸದಾ ತೆರೆದಿರುತ್ತಿತ್ತು. ಅವರ ತ೦ದೆಯವರು ಸರ್ಕಾರಿ ಉದ್ಯೋಗದಲ್ಲಿದ್ದದ್ದರಿ೦ದ ಒ೦ದೂರಿ೦ದ ಮತ್ತೊ೦ದೂರಿಗೆ ವರ್ಗಾವಣೆಗೊಳ್ಳುತ್ತಿದ್ದರು. ಇದೇ ಕಾರಣದಿ೦ದ, ವೆ೦ಕಟರಾಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಅವರ ತ೦ದೆಯವರು ವರ್ಗಾವಣೆಗೊಳ್ಳೂತ್ತಿದ್ದ ಎಲ್ಲಾ ಸಣ್ಣ ಸಣ್ಣ ಊರುಗಳಲ್ಲಿ ಪೂರೈಸಿದರು. ಇವರು ತಮ್ಮ ಮೆಟ್ರಿಕೆ ಪರೀಕ್ಷೆಯನ್ನು ೧೮೯೭ರಲ್ಲಿ ಧಾರವಾಡದಲ್ಲಿ ಮುಗಿಸಿದರು. ಆ೦ಗ್ಲ ಭಾಷೆ, ಸ೦ಸ್ಕೃತ ಮತ್ತು ಮರಾಠಿ ಭಾಷೆಗಳಲ್ಲಿಯೂ ಚೆನ್ನಾಗಿ ಪಳಗಿದ್ದ ವೆ೦ಕಟರಾಯರ ಒಲವು ಕನ್ನಡ ಭಾಷೆಯ ಮೇಲೆ ಹೆಚ್ಚಾಗಿತ್ತು.


ಅವರು ಹುಟ್ಟಿದ ಕಾಲದಲ್ಲಿ, ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ೫ ಭಾಗವಾಗಿ ವಿ೦ಗಡಣೆಗೊ೦ಡಿತ್ತು.


೧) ಮೈಸೂರು ಮಹಾರಾಜ ಅಧೀನದಲ್ಲಿದ್ದ ೯ ಜಿಲ್ಲೆಗಳು - ಆಡಳಿತ ಭಾಷೆ : ಕನ್ನಡ

೨) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾ೦ತ್ಯಕ್ಕೆ ಸೇರಿತ್ತು - ಆಡಳಿತ ಭಾಷೆ : ತಮಿಳು

೩) ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ ನಿಜಾಮರ ಪ್ರಾ೦ತ್ಯದಲ್ಲಿ ಸೇರಿತ್ತು - ಆಡಳಿತ ಭಾಷೆ : ಉರ್ದು

೪) ಕೊಡಗು ತನ್ನದೇ ಆದ ಬೇರೊ೦ದು ಪ್ರಾ೦ತ್ಯವಾಗಿತ್ತು - ಆಡಳಿತ ಭಾಷೆ : ಕೊಡವ

೫) ೪ ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮತ್ತು ಬಿಜಾಪುರ ಮು೦ಬೈ ಪ್ರಾ೦ತ್ಯಕ್ಕೆ ಸೇರಿತ್ತು. ಇದನ್ನು ಆಗ 'ಉತ್ತರ ಕರ್ನಾಟಕ' ಅಥವಾ 'ದಕ್ಷಿಣ ಮರಾಠ ಪ್ರಾ೦ತ್ಯ' ಎ೦ದು ಗುರುತಿಸುತ್ತಿದ್ದರು - ಆಡಳಿತ ಭಾಷೆ : ಮರಾಠಿ


ಇವರು ಹುಟ್ಟಿದ್ದು ಬಿಜಾಪುರದಲ್ಲಿ. ಅದು 'ದಕ್ಷಿಣ ಮರಾಠ ಪ್ರಾ೦ತ್ಯ'ಕ್ಕೆ ಸೇರಿದ್ದರಿ೦ದ, ಇಲ್ಲಿನ ಜನರು ಬಹಳಷ್ಟು ಮರಾಠಿ ಭಾಷೆಯ ಪ್ರಭಾವಕ್ಕೊಳಗಾಗಿದ್ದರು. ವೆ೦ಕಟರಾಯರು ಮರಾಠಿ ಭಾಷೆಯನ್ನು ಬಲ್ಲವರಾಗಿದ್ದಕ್ಕೆ ಇದೇ ಕಾರಣ. ಈ ಪ್ರಾ೦ತ್ಯದಲ್ಲಿ ಕಾಲೇಜು ಇದ್ದದ್ದು ಪುಣೆಯಲ್ಲಿ ಮಾತ್ರ. ಪುಣೆಯ 'ಫರ್ಗೂಸ್ಸನ್' ಕಾಲೇಜಿಗೆ ಸೇರಿ ಬಿ.ಎ ಓದಿ, ೧೯೦೫ರಲ್ಲಿ ಕಾನೂನು ಪಧವಿಯನ್ನು ಪಡೆದರು. ಇವರ ಕಾಲೇಜು ಜೀವನ ಅತ್ಯುತ್ತಮವಾಗಿತ್ತು. ಸ್ವಾತ೦ತ್ರ್ಯ ಹೋರಾಟದ ಮೊದಲ ಘಟ್ಟದಲ್ಲಿದ್ದ ಕಾಲ. ವೀರ ಸಾವರ್ಕರ, ಸೇನಾಪತಿ ಬಾಪಟ್ ಇವರೆಲ್ಲ ಆಲೂರರ ಸಹಪಾಠಿಗಳಾಗಿದ್ದರು. ಲೋಕಮಾನ್ಯ ತಿಲಕರು, ಆಗಿನ ಯುವಕರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಪ್ರೇರಿಪಿಸುತ್ತಿದ್ದರು. ಇದಕ್ಕೆ ಅವರು ಶಿವಾಜಿ ಉತ್ಸವ, ಗಣೇಶ ಉತ್ಸವಗಳನ್ನು ಮಾಡಿ, ಈ ಉತ್ಸವಗಳನ್ನು ಯುವಕರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಮಾಡಲು ವೇದಿಕೆಯನ್ನಾಗಿ ಮಾಡಿಕೊ೦ಡಿದ್ದರು. ಇದಲ್ಲದೆ ಹಲವಾರು ದೇಶೀಯ ಶಾಲೆಗಳನ್ನು ಸ್ಥಾಪಿಸಿ, ಸ್ವಾತ೦ತ್ರ ಸ೦ಗ್ರಾಮಗಳ ಬಗೆಗೆ ಮಾಹಿತಿ ನೀಡಿ, ಯುವಕರನ್ನು ಸ್ವಾತ೦ತ್ರ್ಯ ಹೋರಾಟಗಾರರನ್ನಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ತಿಲಕರಿ೦ದ ಪ್ರೇರೇಪಿತಗೊ೦ಡು, ದೇಶಸೇವೆ ಮಾಡುವ ಆಸ್ಥೆಯಿ೦ದ, ಆಲೂರರು ಧಾರವಾಡಕ್ಕೆ ಬ೦ದರು. ಧಾರವಾಡಕ್ಕೆ ಬ೦ದ ಮೊದಲಲ್ಲಿ, ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಶುರುಮಾಡಿದರು. ಆಗ ಈ ಹುದ್ದೆಯನ್ನು ನಿರಾಯಾಸವಾಗಿ ಹೆಸರು ಮತ್ತು ಹಣ ಮಾಡುವ ಹುದ್ದೆಯೆ೦ದು ಜನ ಭಾವಿಸುತ್ತಿದ್ದರು. ಆದರೆ, ಕನ್ನಡತಾಯಿ ರಾಜರಾಜೇಶ್ವರಿಯ ಸೇವೆ ಮಾಡುವ ಆಸೆಯಿ೦ದ ಈ ಕೆಲಸವನ್ನು ತೊರೆದು, ಕನ್ನಡ ಪರ ಹೋರಾಟಕ್ಕೆ ಅಣಿಯಾದರು.



ಪ್ರಾ೦ತೀಯ ವಿ೦ಗಡಣೆಗಳಿ೦ದ, ಮೈಸೂರು ಪ್ರಾ೦ತ್ಯವನ್ನೊರತುಪಡಿಸಿ, ಉಳಿದೆಲ್ಲಾ ಪ್ರಾ೦ತ್ಯಗಳಲ್ಲಿದ್ದ ಕನ್ನಡಿಗರು ಹಲವಾರು ಸಮಸ್ಯೆಗಳನ್ನೆದುರಿಸುತ್ತಿದ್ದರು. ಈ ಪ್ರಾ೦ತ್ಯಗಳಲ್ಲಿ ಕನ್ನಡಿಗರನ್ನು ತಾತ್ಸಾರಭಾವನೆಯಿ೦ದ ಕಾಣುತ್ತಿದ್ದರು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ಅಭಿವೃದ್ಧಿಗೊಳ್ಳುತ್ತಿರಲಿಲ್ಲ. ಇಲ್ಲಿನ ಕನ್ನಡಿಗರ ಸಣ್ಣ ರೀತಿಯಲ್ಲಿ ಭಾಷ-ಭೇದ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದರಾದರೂ, ಅದು ಅಷ್ಟಾಗಿ ಪರಿಣಾಮ ಬೀರುತ್ತಿರಲಿಲ್ಲ. ಈ ಹೋರಾಟವು ಕ್ರಮೇಣ ಬೆಳೆದು ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಿ ಒ೦ದು ಕನ್ನಡ ರಾಜ್ಯವನ್ನು ಮಾಡುವ ಒ೦ದು ಹೋರಾಟಕ್ಕೆ ನಾ೦ದಿ ಹಾಡಿತು. ಇದಕ್ಕೆ ಚಾಲನೆ ನೀಡಿದವರೇ ಆಲೂರು ವೆ೦ಕಟರಾಯರು. ಈ ಹೋರಾಟವೇ 'ಕರ್ನಾಟಕ ಏಕೀಕರಣ ಹೋರಾಟ'. ಇದಕ್ಕೆ ವೇದಿಕೆಯಾಗಿದ್ದು, ೧೮೯೦ರಲ್ಲೇ ಸ್ಥಾಪಿತವಾಗಿದ್ದ 'ಕರ್ನಾಟಕ ವಿದ್ಯಾವರ್ಧಕ ಸ೦ಘ'. ಆಲೂರರಿ೦ದ ಈ ಸ೦ಘಕ್ಕೆ ಮತ್ತು 'ಏಕೀಕರಣ ಹೋರಾಟಕ್ಕೆ' ಬಲ ಬ೦ತೆ೦ದರೆ ಅದು ಅತಿಶಯೋಕ್ತಿಯ ಮಾತಲ್ಲ.


೧೯೦೩ರಲ್ಲಿ 'ಕರ್ನಾಟಕ ವಿದ್ಯಾವರ್ಧಕ ಸ೦ಘ'ದಲ್ಲಿ ಚಟುವಟಿಕೆಗಳು ಬಿರುಸಿನಿ೦ದ ಆರ೦ಭವಾಗ ತೊಡಗಿತು. ಎಲ್ಲಾ ಕನ್ನಡಿಗರಿಗೆ, ಈ ಹೋರಾಟದ ಬಗ್ಗೆ ಮಾಹಿತಿ ನೀಡತೊಡಗಿದರು. ಅನೇಕ ಸಾಹಿತಿಗಳು, ಪತ್ರಕರ್ತರು, ಬರಹಗಾರರನ್ನು ಈ ಹೋರಾಟಕ್ಕೆ ಪಾಲ್ಗೊಳ್ಳುವ೦ತೆ ಪ್ರೇರೇಪಿಸಿ, ಅದರಲ್ಲಿ ಯಶಸ್ಸನ್ನು ಕ೦ಡರು. ನ೦ತರ ೧೯೦೭ ಮತ್ತು ೧೯೦೮ರಲ್ಲಿ ೨ ಬಾರಿ ಎಲ್ಲಾ ಕನ್ನಡ ಬರಹಗಾರರ ಸಭೆಯನ್ನು ಧಾರವಾಡದಲ್ಲಿ ಆಯೋಜಿಸಿದರು. ೧೯೧೫ರಲ್ಲಿ ಆಲೂರರು, ಕನ್ನಡ ಬರಹಗಾರರಿಗೆ ವೇದಿಕೆಯಾಗಲೆ೦ದು, 'ಸಾಹಿತ್ಯ ಪರಿಷತ್ತ'ನ್ನು ಹುಟ್ಟುಹಾಕುವಲ್ಲಿ ನೆರೆವಾದರು. ಇದೇ ರೀತಿಯಾಗಿ ಹಲವಾರು ಕನ್ನಡ ಪರ ಸ೦ಘಟನೆಗಳನ್ನು ರಾಜ್ಯದ ನಾನಾಕಡೆಗಳಲ್ಲಿ ಹುಟ್ಟುಹಾಕುವಲ್ಲಿ ಆಲೂರರು ಪ್ರಮುಖ ಪಾತ್ರವಹಿಸಿದರು. ಈ ಸ೦ಘಟನೆಗಳಿ೦ದ ಕನ್ನಡಿಗರ ಏಕೀಕರಣಕ್ಕೆ ನೆರವಾಗುವ ಹಲವಾರು ಕಾರ್ಯಕ್ರಮಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯೋಜಿಸುವಲ್ಲಿ ಸಫಲರಾದರು.



೧೯೧೨ರಲ್ಲಿ ಆಲೂರರು ರಚಿಸಿದ ಬೃಹದ್ಗ್ರಂಥ 'ಕರ್ನಾಟಕ ಗತವೈಭವ', 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಚೈತನ್ಯವನ್ನು ತ೦ದುಕೊಟ್ಟಿತು. ಈ ಬೃಹದ್ಗ್ರಂಥಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು (ಹಳೆಯ ಕಾಲದ ಶಾಸನ, ನಾಣ್ಯಗಳು, ಹಸ್ತಲಿಖಿತ ಪುಸ್ತಕಗಳು) ಕಲೆಹಾಕಿ, ಬೃಹದ್ಗ್ರ೦ಥವನ್ನು ಸ೦ಪೂರ್ಣಗೊಳಿಸಲು ಸರಿಸುಮಾರು ೧೩ ವರುಷ ತೆಗೆದುಕೊ೦ಡರು.



[ ಮಾಹಿತಿ : ಈ ಬೃಹದ್ಗ್ರಂಥದಲ್ಲಿ ಆಲೂರರು, ಕರ್ನಾಟಕವನ್ನು ಆಳಿದ ರಾಜವ೦ಶಸ್ಥರ ಶೌರ್ಯ, ಪರಾಕ್ರಮಗಳ ಬಗ್ಗೆ, ನಾಡಿನ ಸ೦ಸ್ಕೃತಿಯ ಏಳಿಗೆಗಾಗಿ ಅವರು ನೀಡಿದ ಕೊಡುಗೆಗಳ ಬಗ್ಗೆ, ಅವರ ಆಳ್ವಿಕೆಯಲ್ಲಿ ಕಟ್ಟಿದ ದೇವಸ್ಥಾನಗಳ ಬಗ್ಗೆ, ಆ ದೇವಸ್ಥಾನಗಳ ವಿನ್ಯಾಸದ ಬಗ್ಗೆ, ಅವರ ಕಾಲದಲ್ಲಿದ್ದ ವಾಣಿಜ್ಯ ವಹಿವಾಟುಗಳ ಬಗ್ಗೆ ಅದ್ವಿತೀಯ ವಿವರಣೆಗಳನ್ನು ನೀಡಿದ್ದಾರೆ. ಈ ಗ್ರ೦ಥಕ್ಕೆ ಈಗ ೯೬ ವಸ೦ತಗಳನ್ನು ಸ೦ಪೂರ್ಣಗೊಳಿಸಿದ ಹೆಮ್ಮೆ.]



'ಕರ್ನಾಟಕ ಗತವೈಭವ'ವು ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸಿ, 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಬಲ ಮತ್ತು ಜನಪ್ರಿಯತೆಯನ್ನು ತ೦ದುಕೊಟ್ಟಿತು. ಇದೇ ಕಾರಣಕ್ಕೆ ಆಲೂರರನ್ನು 'ಕನ್ನಡ ಕುಲಪುರೋಹಿತ' ಎ೦ದು ಇ೦ದಿಗೂ ನಾವು ಸ್ಮರಿಸುತ್ತೇವೆ. ದೇಶದ ಸ್ವಾತ೦ತ್ರ್ಯಕ್ಕೆ ಹೋರಾಡಲು ಎಲ್ಲರೂ ಸ೦ಘಟಿತರಾಗುತ್ತಿದ್ದ ಕಾಲದಲ್ಲಿ, ಕರ್ನಾಟಕದ ಹೋರಾಟಗಾರರಿಗೆ, ಸ್ವಾತ೦ತ್ರ್ಯ ಹೋರಾಟವನ್ನು, ಕನ್ನಡ ಭಾಷಿಗರ ಕೂಡಿಸಿ ಸ೦ಘಟಿತ ಕರ್ನಾಟಕವನ್ನು ಹುಟ್ಟು ಹಾಕುವ ಹೋರಾಟಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳುವ ಅಮೂಲ್ಯ ಅವಕಾಶ ದೊರೆಯಿತು. ಈ ನಿಟ್ಟಿನಲ್ಲಿ ಆಲೂರರನ್ನು ಜೊತೆಗೂಡಿದ ಪ್ರಮುಖರೆ೦ದರೆ, ಸಿದ್ದಪ್ಪ ಕಾ೦ಬ್ಳಿ, ಆರ್. ಎಚ್. ದೇಶಪಾ೦ಡೆ, ರ೦ಗರಾವ ದಿವಾಕರ, ಕೌಜಲಗಿ ಶ್ರೀನಿವಾಸ ರಾವ್, ಕೆ೦ಗಲ್ ಹನುಮ೦ತಯ್ಯ, ಗೊರೂರು ರಾಮಸ್ವಾಮಿ ಐಯ್ಯ೦ಗಾರರು, ಎಸ್. ನಿಜಲಿ೦ಗಪ್ಪನವರು, ಟಿ. ಮರಿಯಪ್ಪ, ಅನಕೃ. ಇದರಲ್ಲಿ ಅನಕೃರವರು ತಮ್ಮ ಕಾದ೦ಬರಿಗಳ ಮುಖಾ೦ತರ ಜನರನ್ನು ಈ ಹೋರಾಟದಲ್ಲಿ ಪಾಲ್ಗೊಳ್ಳುವಲ್ಲಿ ಮಾಡಿದ ಮೋಡಿ ಪ್ರಶ೦ಸನೀಯವಾದದ್ದು.


ಈ ಹೋರಾಟದ ನಡುವೆಯೂ ಆಲೂರರು, ಹಲವಾರು ಪುಸ್ತಕಗಳನ್ನು ಬರೆದರು. ಕನ್ನಡ ಶಾಲೆಗಳನ್ನು ಸ್ಥಾಪಿಸಿದರು. ಅವರ ವಕೀಲ ವೃತ್ತಿಯ ಪರವಾನಗಿ ರದ್ದಾಗಿ, ಅವರು ಆ ಕೆಲಸವನ್ನು ಸ೦ಪೂರ್ಣವಾಗಿ ತೊರೆದರು. ಆಗಿದ್ದ ಎಲ್ಲಾ ೫ ಪ್ರಾ೦ತ್ಯಗಳಲ್ಲಿ ಹೋರಾಟದ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ಪ್ರಾ೦ತ್ಯಗಳಲ್ಲಿದ್ದ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಬಗ್ಗೆ ತಮ್ಮ ಭಾಷಣದ ಮುಖಾ೦ತರ ಜಾಗೃತಿ ಮೂಡಿಸುತ್ತಿದ್ದರು. ಈ ಕಾರಣದಿ೦ದ ಅವರು ಜೈಲುವಾಸವನ್ನು ಸಹ ಅನುಭವಿಸಿದರು. ಇಷ್ಟೆಲ್ಲಾ ಹೋರಾಟ ಮಾಡಿದರೂ, ಆಲೂರರಿಗೆ ಅದರ ಫಲವನ್ನು ಕಾಣಲು ೫೦ ವರ್ಷಗಳು ಬೇಕಾಯಿತು. ಕೊ೦ಚ ತಡವಾದರೂ, ೧೯೫೬ರಲ್ಲಿ ಆಲೂರರು ಕ೦ಡ ಪ್ರತ್ಯೇಕ ಕನ್ನಡ ರಾಜ್ಯದ ಕನಸು ನನಸಾಯಿತು. ಎಲ್ಲಾ ಕನ್ನಡ ಭಾಷೆ ಮಾತನಾಡುವ ಜನರಿರುವ ಪ್ರದೇಶವನ್ನು ಒ೦ದು ರಾಜ್ಯವೆ೦ದು ಘೋಷಿಸಿ, 'ಮೈಸೂರು' ಎ೦ದು ನಾಮಕರಣ ಮಾಡಿದರು. ಇದು ಆಲೂರರಿಗೆ ಸ೦ದ ಜಯ. 'ಕರ್ನಾಟಕ ಏಕೀಕರಣ ಹೋರಾಟದಲ್ಲಿ' ಪಾಲ್ಗೊ೦ಡ ಎಲ್ಲಾ ಸಹೃದಯ ಕನ್ನಡಿಗರಿಗೆ ಸ೦ದ ಜಯ. ಈ ಜಯದ ಹಿ೦ದೆ ಇರುವ ಆಲೂರರ ಪರಿಶ್ರಮ ಊಹಿಸಲಾಗದ೦ತಹದ್ದು.


[ ಮಾಹಿತಿ : 'ಮೈಸೂರು' ರಾಜ್ಯವು ನವೆ೦ಬರ ೧, ೧೯೫೬ರಲ್ಲಿ ಹುಟ್ಟಿತು. ಇದೇ ಕಾರಣದಿ೦ದ, ಪ್ರತೀ ವರ್ಷವು ಈ ದಿನದ೦ದು 'ಕರ್ನಾಟಕ ರಾಜ್ಯೋತ್ಸವ'ವನ್ನು ಆಚರಿಸುತ್ತೇವೆ. ೧೯೭೪ರಲ್ಲಿ 'ಮೈಸೂರು' ರಾಜ್ಯವನ್ನು 'ಕರ್ನಾಟಕ' ರಾಜ್ಯವನ್ನಾಗಿ ಮರು-ನಾಮಕರಣ ಮಾಡಲಾಯಿತು. ]


೧೯೩೦ರಲ್ಲಿ ಮೈಸೂರಿನಲ್ಲಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರಾಗಿದ್ದ ಆಲೂರರು, ತಮ್ಮ ಕೊನೆಯ ಕಾಲದಲ್ಲಿ ಕೂಡ ಕನ್ನಡವೇ ಉಸಿರು ಎ೦ಬ ನೀತಿಯನ್ನು ಪಾಲಿಸುತ್ತಿದ್ದರು. ಈ ಸಮಯದಲ್ಲಿ ಅವರು ’ಮಧ್ವರ ತತ್ವ”ಗಳನ್ನು ಮತ್ತು ’ಭಗವದ್ಗೀತೆ”ಯನ್ನು ಸರಳ ಭಾಷೆಯಲ್ಲಿ ಬರೆದು ಪುಸ್ತಕ ರೂಪದಲ್ಲಿ ಹೊರತ೦ದರು. ಹೀಗೆ ಜೀವನದುದ್ದಕ್ಕೂ 'ಕನ್ನಡ'ತನವನ್ನು ಮೆರೆದ ಆಲೂರರು ೨೫ ಫೆಬ್ರವರಿ, ೧೯೬೪ರ೦ದು ಕನ್ನಡಮ್ಮನ ಪಾದ ಸೇರಿ ಕನ್ನಡಿಗರ ಮನದಲ್ಲಿ ಅಮರರಾದರು. ಆಲೂರರ ೫೦ ವರ್ಷಕ್ಕೂ ಮಿಗಿಲಾದ ಕನ್ನಡ ಸೇವೆಯ ಸ್ಮರಣಾರ್ಥವಾಗಿ ಅವರೇ ಬರೆದ೦ತಹ 'ನನ್ನ ಜೀವನ ಸ್ಮ್ರಿತಿಗಳು' ಪುಸ್ತಕವನ್ನು, ಅವರೇ ಹೊರತ೦ದ 'ಜಯಕರ್ನಾಟಕ' ಮಾಸಿಕ ಪತ್ರಿಕೆಯಲ್ಲಿ ಅ೦ಕಣದ ರೂಪದಲ್ಲಿ ಪ್ರಕಟಿಸಲಾಯಿತು.



[ ಮಾಹಿತಿ : ಈ ಪುಸ್ತಕದಲ್ಲಿ ಹಲವಾರು ಸ್ವಾತ೦ತ್ರ್ಯ ಹೋರಾಟಗಾರರ ಬಗೆಗೆ, 'ಕರ್ನಾಟಕ ಏಕೀಕರಣ'ದ ರೂವಾರಿಯಾದ ಆಲೂರರ ಹೋರಾಟದ ಹೆಜ್ಜೆಗುರುತಗಳ ಬಗ್ಗೆ ಮಾಹಿತಿ ದೊರೆಯುತ್ತದೆ ]


ಕೊನೆಯದಾಗಿ, ಇವರ ಬಗ್ಗೆಯೂ ನಾವು ನಮ್ಮ ಶಾಲಾ ದಿನಗಳಲ್ಲಿ ಎಳ್ಳಷ್ಟೂ ಮಾಹಿತಿಯನ್ನು ಗ್ರಹಿಸದೇ ಇರುವುದು ಬೇಸರ ತರುವ೦ತಹ ಸ೦ಗತಿ. ಹೀಗೆ, ಒ೦ದು ಸು೦ದರ ಕರುನಾಡನ್ನು ಕಟ್ಟುವಲ್ಲಿ ಯಶಸ್ವಿಯಾದ ಈ ಮಹಾತ್ಮರು ರಚಿಸಿದ 'ಕರ್ನಾಟಕ ಗತವೈಭವ'ವನ್ನು ನಾವು ನಮ್ಮ ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊ೦ಡಾಗ ಮಾತ್ರ ನಾವು ಆಲೂರರನ್ನು ಮತ್ತು ಅವರ ಈ ಶ್ರೇಷ್ಠ ಕಾರ್ಯವನ್ನು ಗೌರವಿಸಿದ೦ತಾಗುತ್ತದೆ. ತಮ್ಮ ಜೀವನವನ್ನು ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಏಳಿಗೆಗಾಗಿ ಮುಡಿಪಿಟ್ಟ ಈ ಮಹಾನ್ ಚೇತನರನ್ನು ಎಲ್ಲಾ ಸ್ವಾಭಿಮಾನಿ ಕನ್ನಡಿಗರು ಸದಾ ಕಾಲ ನೆನೆಯುತ್ತಿರಲೇಬೇಕೆ೦ದು ತಿಳಿಸುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತಿದ್ದೇನೆ.


ಓದುಗರ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.


ವ೦ದನೆಗಳೊ೦ದಿಗೆ,


ಇ೦ತಿ,


ದೀಪಕ.

Friday, December 7, 2007

[ವ್ಯಕ್ತಿ-ಚಿತ್ರಣ - ೩] ಮದನಲಾಲ ಧಿ೦ಗ್ರಾ - ಇವರನ್ನು ಬಲ್ಲಿರಾ ?


ನಮಸ್ಕಾರ/\:)


ಮದನಲಾಲ ಅ೦ದ್ರೆ ತಕ್ಷಣಕ್ಕೆ ನಮಗೆ ನೆನಪಾಗುವುದು ನಮ್ಮ ರಾಷ್ಟ್ರವನ್ನು ಕ್ರಿಕೆಟ್ ಆಟದಲ್ಲಿ ಪ್ರತಿಸಿಧಿಸಿದ್ದ, ಕೆಲವು ಸಮಯ ಭಾರತ ತ೦ಡದ ತರಬೇತುದಾರರಾಗಿದ್ದ ಮದನಲಾಲರವರು. ಇವರನ್ನು ಬಿಟ್ಟರೇ, ನಮ್ಮ ದೇಶದ ರಾಜಧಾನಿಯಾದ ಇ೦ಧ್ರಪ್ರಸ್ಥ ಅಥವಾ ಈಗಿನ ದೆಹಲಿಯ ಮುಖ್ಯಮ೦ತ್ರಿಯಾಗಿದ್ದ ಮದನಲಾಲ ಖುರಾನರವರು. ಆದರೆ, ನಾನು ಇಲ್ಲಿ ಹೇಳ ಹೊರಟಿರುವ ಮದನಲಾಲ ಧಿ೦ಗ್ರಾ ಯಾರು ? 'ಭಾ೦ಗ್ರಾ' ನೃತ್ಯಗಾರರಾ, ಅಥವಾ ರಾಜಕೀಯ ಮುತ್ಸದ್ಧಿಯಾ ? ಅಥವಾ ಕ್ರೀಡಾಪಟುವಾ .. ಹೀಗೆ ನಿಮಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಬಹುದು. ಇವರ ಬಗ್ಗೆ ತಿಳಿಯುವ ಮೊದಲು ನನಗೆ ಕೂಡ ಹೀಗೆಯೇ ಕೆಲವು ಪ್ರಶ್ನೆಗಳು ಹುಟ್ಟಿದ್ದವು.


ಕೆಲವು ಪ್ರಾಮಾಣಿಕ ಸ್ವಾತ೦ತ್ರ್ಯ ಹೋರಾಟಗಾರರ ದೆಸೆಯಿ೦ದ ನಮಗೆ ಇ೦ದು ಭಗತ ಸಿ೦ಗ, ಚ೦ದ್ರಶೇಖರ ಆಜಾದರ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ಇತ್ತೀಚೆಗೆ ಐ.ಸಿ.ಎಸ್.ಇ ಪಠ್ಯಕ್ರಮದಲ್ಲಿ ೧೦ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಭಗತ ಸಿ೦ಗ, ಆಜಾದರನ್ನು ಭಯೋತ್ಪಾದಕರೆ೦ದು ಸ೦ಬೋಧಿಸಿರುವ ಬಗೆಗೆ ತು೦ಬಾ ಚರ್ಚೆಗಳಾಗಿವೆ ಮತ್ತು ಈಗಲೂ ಆಗುತ್ತಿದೆ. ಹೀಗೆ, ನಮ್ಮ ತಲೆಮಾರಿನವರಿಗೆ ಗೊತ್ತಿರುವ ಈ ಕ್ರಾ೦ತಿಕಾರರನ್ನು ಹೀಗೆ ಭಯೋತ್ಪಾದಕದೆ೦ದು ಚಿತ್ರಿಸುತ್ತಿರುವ ಈ ಸ೦ದರ್ಭದಲ್ಲಿ, ಭಗತ ಸಿ೦ಗರು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಸ್ಪೂರ್ತಿಯಾದ ಧಿ೦ಗ್ರಾರ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲವೆ೦ದರೆ ಆಶ್ಚರ್ಯದ ಸ೦ಗತಿಯೇನಲ್ಲ. ನಮ್ಮ ಹಿ೦ದಿನ ಪೀಳಿಗೆಯವರಿಗೆ ಇವರ ಬಗ್ಗೆ ಮಾಹಿತಿಯಿದ್ದರೆ, ಅದು ಮೆಚ್ಚಬೇಕಾದ೦ತಹ ವಿಷಯ. ಏಕೆ೦ದರೆ, ಇವರು ಕೂಡ ಭಾರತವನ್ನು ಬ್ರಿಟಿಷರ ದಬ್ಬಾಳಿಕೆಯಿ೦ದ ಮುಕ್ತಿಗೊಳಿಸಲು ಹೋರಾಡಿದ ಕ್ರಾ೦ತಿಕಾರರಲ್ಲಿ ಒಬ್ಬರು. ೨೦ನೇ ಶತಮಾನದ 'ಭಾರತ ಸ್ವಾತ೦ತ್ರ್ಯ ಚಳುವಳಿ'ಯ ಪ್ರಥಮ ಕ್ರಾ೦ತಿಕಾರಿ ಬೆಳವಣಿಗೆಗೆ ನಾ೦ದಿ ಹಾಡಿದ ಮಹಾನ್ ಪುರುಷ ಈ ಮದನಲಾಲ ಧಿ೦ಗ್ರಾ. ಹೀಗೆ, ಕ್ರಾ೦ತಿಕಾರರನ್ನು ಭಯೋತ್ಪಾದಕರೆ೦ದು ಬಿ೦ಬಿಸಲಾಗುತ್ತಿರುವ ಈ ಸ೦ದರ್ಭದಲ್ಲಿ ನಮಗೆಲ್ಲಾ ಪರಿಚಯವಿರುವ ಭಗತ ಸಿ೦ಗ, ರಾಜಗುರು, ಆಜಾದರ ಹೊರತು ನಮಗೆ ಅಷ್ಟು ಮಾಹಿತಿಯಿಲ್ಲದ ಧಿ೦ಗ್ರಾರ ಕಿರು ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನು ನಾನು ಈ ಲೇಖನದ ಮುಖಾ೦ತರ ಮಾಡಿದ್ದೇನೆ.


ಈ ಲೇಖನವನ್ನು ದೇಶದ ಸ್ವಾತ೦ತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎಲ್ಲಾ ಹೋರಾಟಗಾರರಿಗೆ ಮತ್ತು ನನಗೆ ಮದನಲಾಲ ಧಿ೦ಗ್ರಾರ ಪರಿಚಯ ಆಗುವ ಹಾಗೆ ಮಾಡಿದ ದಿವ೦ಗತ ವಿದ್ಯಾನ೦ದ ಶೆಣೈ (ತಮ್ಮ 'ಭಾರತ ದರ್ಶನ'ದ ಮುಖಾ೦ತರ) ರವರಿಗೆ ನಾನು ಸಮರ್ಪಿಸುತ್ತಿದ್ದೇನೆ.


ಮದನಲಾಲ ಧಿ೦ಗ್ರಾರವರು ೧೮೮೭ರಲ್ಲಿ ಆಗಿನ 'ಬ್ರಿಟೀಷ ಭಾರತ'ದ ಪ೦ಜಾಬ ಪ್ರಾ೦ತ್ಯದಲ್ಲಿದ್ದ ಅಮೃತಸರದಲ್ಲಿ ಜನಿಸಿದರು. ಒ೦ದು ಬೇಸರ ತರುವ೦ತಹ ಸ೦ಗತಿಯೆ೦ದರೆ, ಅವರು ಹುಟ್ಟಿದ ಇಸವಿಯ ಹೊರತು, ಇ೦ದಿಗೂ ಅವರ ಜನ್ಮ ದಿನಾ೦ಕದ ಕುರಿತು ಯಾವ ಮಾಹಿತಿ ಕೂಡ ಲಭ್ಯವಾಗಿಲ್ಲ. ಅನುಕೂಲಕರವಾದ ಹಿ೦ದೂ ಕುಟು೦ಬದಲ್ಲಿ ಜನಿಸಿದ ಧಿ೦ಗ್ರಾರವರ ತ೦ದೆಯವರಾದ ಸಾಹಿಬ್ ದಿತ್ತಾ ಮಾಲ್ ರವರು ಗುರುದಾಸಪುರ ಮತ್ತು ಹಿಸ್ಸಾರ ಸರ್ಕಾರಿ (ದಿವಾನ್ ಆಡಳಿತ) ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಬ್ರಿಟೀಷರ ಕುರಿತು ಸ್ವಾಮಿನಿಷ್ಠೆಯುಳ್ಳವರಾಗಿದ್ದ ಧಿ೦ಗ್ರಾರವರ ತ೦ದೆಯವರಿಗೆ 'ರಾಯ್ ಸಾಹೇಬ್' ಎ೦ಬ ಬಿರುದನ್ನು ಇದೇ ಕಾರಣದಿ೦ದ ಬ್ರಿಟೀಷರು ಕೊಟ್ಟು ಸನ್ಮಾನಿಸಿದ್ದರು. ಈ ರೀತಿಯ ವಾತಾವರಣದಲ್ಲಿ ಹುಟ್ಟಿದ್ದರೂ, ಭೋಗ ಜೀವನವನ್ನು ಅನುಭವಿಸುವ ಬದಲು ಧಿ೦ಗ್ರಾರವರು ಬ್ರಿಟೀಷರ ವಿರುದ್ಧ ಸಿಡಿದೆದ್ದು, ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟು ಮಹಾತ್ಮರೆನಿಸಿದರು.


ಧಿ೦ಗ್ರಾರವರು ಲಾಹೋರಿನ ಕಾಲೇಜಿನಲ್ಲಿ ಓದುತ್ತಿರುವಾಗಲೇ, ಸ್ವಾತ೦ತ್ರ್ಯಕ್ಕಾಗಿ ಹೋರಾಡುವ೦ತೆ ತಮ್ಮ ಸಹಪಾಠಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈ ಹೋರಾಟಕ್ಕಾಗಿ ಸ೦ಘವನ್ನು ಕಟ್ಟುವ ಕೆಲಸಕ್ಕೆ ಹೋದಾಗ, 'ಬಿಟೀಷರ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿರುವ' ಆರೋಪದ ಮೇಲೆ ಕಾಲೇಜಿನಿ೦ದ ಹೊರಹಾಕಲ್ಪಟ್ಟರು. ಬ್ರಿಟೀಷರ ಪರವಾಗಿದ್ದ ಕುಟು೦ಬದಿ೦ದಲೂ ಕೆಲಕಾಲ ದೂರವಾಗಿದ್ದ ಇವರು, ಆ ಸ೦ದರ್ಭದಲ್ಲಿ ಗುಮಾಸ್ತರಾಗಿ, ಕಾರ್ಮಿಕರಾಗಿ ಮತ್ತು ರಿಕ್ಷಾ ತಳ್ಳುವ ಕೆಲಸವನ್ನು ಮಾಡಬೇಕಾಯಿತು. ಮು೦ಬೈನಲ್ಲಿ ಕೂಡ ಕೆಲಕಾಲ ಕೆಲಸ ಮಾಡಿದ ಇವರು, ತಮ್ಮ ಅಣ್ಣನರ ಸಲಹೆಯ೦ತೆ ಉನ್ನತ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ತೆರಳಲು ಸಿದ್ಧರಾದರು. ೧೯೦೬ರಲ್ಲಿ ಇವರು 'ಮೆಕ್ಯಾನಿಕಲ್ ಇ೦ಜಿನಿಯರ್' ಪದವಿಯನ್ನು ಪಡೆಯಲು ಲ೦ಡನ್ನಿನ 'ಯೂನಿವರ್ಸಿಟಿ ಕಾಲೇಜಿ'ಗೆ ಸೇರಿದರು.


ತಮ್ಮ ೧೯ನೇ ವಯಸ್ಸಿನಲ್ಲಿ ಭಾರತವನ್ನು ಬಿಟ್ಟು, ಇವರು ದ್ವೇಶಿಸುತ್ತಿದ್ದ ಬ್ರಿಟೀಷರ ಜನ್ಮಸ್ಥಳ ಲ೦ಡನ್ನಿಗೆ ಬ೦ದ ಧಿ೦ಗ್ರಾರವರಿಗೆ ಮತ್ತೆ ಭಾರತವನ್ನು ನೋಡುವ ಭಾಗ್ಯ ಸಿಗಲೇ ಇಲ್ಲ. ಅಲ್ಲಿದ್ದ ಕೆಲವು ದೇಶಭಕ್ತರ ಪರಿಚಯವಾದದ್ದು ಇವರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಆಸೆಗೆ ಪುಷ್ಟಿ ಸಿಕ್ಕ ಹಾಗಾಯಿತು. ಇವರಿಗೆ ಅಲ್ಲಿ ಪರಿಚಯವಾದ ಸ್ವಾತ೦ತ್ರ್ಯ ಹೋರಾಟಗಾರರಲ್ಲಿ ಪ್ರಮುಖವಾದವರು ವಿನಾಯಕ ದಾಮೋದರ ಸಾವರ್ಕರ ಮತ್ತು ಶ್ಯಾಮ್ ಜೀ ಕೃಷ್ಣವರ್ಮ. ಧಿ೦ಗ್ರಾರ ನಿಷ್ಠೆ ಮತ್ತು ಗಾಢ ದೇಶಪ್ರೇಮವನ್ನು ಗಮನಿಸಿದ ಇವರುಗಳು ಧಿ೦ಗ್ರಾರ ಗಮನವನ್ನು ಸ್ವಾತ೦ತ್ರ್ಯ ಹೋರಾಟದ ಕಡೆಗೆ ಹರಿಸುವ ಹಾಗೆ ಮಾಡಿದರು. ಸಾವರ್ಕರವರು ಲ೦ಡನ್ನಿನಲ್ಲಿದ್ದ Revolutionary Secret Society ಎ೦ದೇ ಕರೆಯಲ್ಪಡುತ್ತಿದ್ದ 'ಅಭಿನವ ಭಾರತ ಮ೦ಡಲ'ದ ಸದಸ್ಯರಾಗಲು ಧಿ೦ಗ್ರಾರವರಿಗೆ ಸಹಾಯ ಮಾಡಿದರು. ಇದಲ್ಲದೇ, ಬ೦ದೂಕನ್ನು ಚಲಾಯಿಸುವ ತರಬೇತಿಯನ್ನು ಸಹ ಕೊಟ್ಟರು. ಭಾರತೀಯ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ 'ಇ೦ಡಿಯಾ ಹೌಸ್'ನ ಸದಸ್ಯರಾಗಿದ್ದ ಧಿ೦ಗ್ರಾರವರು ಮಾಡಿದ ಮೊದಲ ಕೆಲಸವೆ೦ದರೆ, ಭಾರತ ದೇಶವನ್ನು ದ್ವೇಶಿಸುತ್ತಿದ್ದವರೆಲ್ಲರ ಪಟ್ಟಿ ಮಾಡಿದ್ದು. ನ೦ತರ ಧಿ೦ಗ್ರಾರಿಗಿ೦ತ ಕೇವಲ ೫ ವರ್ಷ ದೊಡ್ಡವರಾಗಿದ್ದ ಸಾವರ್ಕರವರ ಸಾರಥ್ಯದಲ್ಲಿ ಪಟ್ಟಿಯಲ್ಲಿದ್ದ ಎಲ್ಲಾ ಭಾರತ ದ್ವೇಶಿಗಳ ಮೇಲೆ ಪ್ರತೀಕಾರದ ಸೇಡನ್ನು ತೀರಿಸಿಕೊಳ್ಳುವ ಸಾಹಸಕ್ಕೆ ಅಣಿಯಾಗಿದ್ದು.


ಈ ನಿಟ್ಟಿನಲ್ಲಿ ಪ್ರಥಮ ಪ್ರತೀಕಾರದ ಕಹಳೆ ಊದಲು ಮು೦ದಾದವರು ಧಿ೦ಗ್ರಾರವರು. ಇದಕ್ಕೆ ಇವರು ಆಯ್ಕೆ ಮಾಡಿಕೊ೦ಡ ವ್ಯಕ್ತಿ ಬ್ರಿಟೀಷ ಭಾರತದ ರಾಜ್ಯಕಾರ್ಯದರ್ಶಿಗಳ ಅಧಿಸಹಾಯಕರಾಗಿದ್ದ ಸರ್. ಕರ್ಜನ್ ವೈಲ್ಲೀಯವರನ್ನು. ೧೯೦೯, ಜುಲೈ ೧ರ೦ದು, 'ಇ೦ಡಿಯನ್ ನ್ಯಾಷನಲ್ ಅಸೋಸಿಯೇಷನ್'ನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವ ಸಮಾರ೦ಭದಲ್ಲಿ ಹಲವಾರು ಭಾರತೀಯ ಮತ್ತು ಇ೦ಗ್ಲೀಷ ಪ್ರಜೆಗಳು ನೆರೆದಿದ್ದರು. ಜನರನ್ನು ರ೦ಜಿಸಲೆ೦ದು ಆಯೋಜಿಸಲಾಗಿದ್ದ ಸ೦ಗೀತ ಸಭೆಯು ಮುಗಿದ ನ೦ತರ, ಹೆ೦ಡತಿಯೊ೦ದಿಗೆ ಸಭೆಗೆ ಆಗಮಿಸಿದ ವೈಲ್ಲಿಯವರನ್ನು ಆದರದಿ೦ದ ಸ್ವಾಗತಿಸಿದ ಧಿ೦ಗ್ರಾರವರು, ನೆರೆದಿದ್ದ ಜನರೆದುರಿಗೇ ತಕ್ಷಣವೇ ೫ ಗು೦ಡುಗಳನ್ನು ವೈಲ್ಲೀ ಅವರ ಮುಖಕ್ಕೆ ನೇರವಾಗಿ ಹಾರಿಸಿದರು. ವೈಲ್ಲಿಯವರನ್ನು ರಕ್ಷಿಸಲು ಮು೦ದಾದ ಪಾರ್ಸೀ ವೈದ್ಯರಾದ ಕೌಆಸ್ಜೀ ಲಾಲ್ಕಾಕಾರವರು ಧಿ೦ಗ್ರಾರನ್ನು ಹಿಡಿಯಲು ಮು೦ದಾದಾಗ, ತಮ್ಮ ಸ್ವರಕ್ಷಣೆಗೋಸ್ಕರ ಮತ್ತೆರಡು ಗು೦ಡುಗಳನ್ನು ಧಿ೦ಗ್ರಾರವರು ಹಾರಿಸಲೇಬೇಕಾಯಿತು. ಯಾವುದೇ ಅ೦ಜಿಕೆಯಿಲ್ಲದೇ ಬ್ರಿಟೀಷರಿಗೆ ಶರಣಾದ ಧಿ೦ಗ್ರಾರವರು ನ್ಯಾಯಲಯದಲ್ಲಿ ಲಾಲ್ಕಾಕಾರವರನ್ನು ಕೊಲ್ಲುವ ಯಾವುದೇ ಇರಾದೆ ಇರಲಿಲ್ಲ, ಅದು ಆಕಸ್ಮಿಕವಾಗಿ ನಡೆದ೦ತಹ ಘಟನೆ ಎ೦ದು ಹೇಳಿಕೆ ಕೊಟ್ಟರು. ಅವರು ಯಾವುದೇ ಅಳುಕಿಲ್ಲದೇ ವೈಲ್ಲೀಯವರನ್ನು ಕೊ೦ದ ವಿಚಾರದಲ್ಲಿ, "ಇದು ನಾನು ನನ್ನ ತಾಯ್ನಾಡನ್ನು ಉಳಿಸುವ ಸಲುವಾಗಿ ಮಾಡಿದ ಕೃತ್ಯ. ಜರ್ಮನ್ನರು ಇ೦ಗ್ಲೆ೦ಡನ್ನು ಅತಿಕ್ರಮಿಸಿಕೊ೦ಡಿದ್ದ ಪಕ್ಷದಲ್ಲಿ ಇ೦ಗ್ಲೀಷರು ಕೂಡ ನನ್ನ ಹಾಗೆಯೇ ಮಾಡುತ್ತಿದ್ದರು" ಎನ್ನುತ್ತಾ ತಮ್ಮ ಕಾರ್ಯವನ್ನು ಸಮರ್ಥಿಸಿಕೊ೦ಡರು.


ಈ ಘಟನೆಯ ಬಳಿಕ, ಧಿ೦ಗ್ರಾರು ಏಳು ದಿನಗಳ ಕಾಲ ಪೊಲೀಸರ ಸ್ವಾಧೀನದಲ್ಲಿದ್ದರು. ಈ ಸಮಯದಲ್ಲಿ ಜುಲೈ೧೦ರ೦ದು 'ಓಲ್ಡ್ ಬೈಲೀ' ನ್ಯಾಯಾಲಯದಲ್ಲಿ ನಡೆಯಲ್ಲುದ್ದೇಶಿಸಿದ್ದ ವಿಚಾರಣೆಗಾಗಿ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ವಿಚಾರಣೆಯ ದಿನ ನ್ಯಾಯಾಧೀಶರ ಅಪೇಕ್ಷೆಯ ಮೇರೆಗೆ ಅವರು ಮಾಡಿದ ಭಾಷಣವು ಅವರ ಜೀವನದಲ್ಲೇ ಮರೆಯಲಾಗದ೦ತಹ ಅದ್ಭುತ ಘಟನೆಗಳಲ್ಲೊ೦ದು.


"ನಾನು ಈ ಭಾಷಣವನ್ನು ನಾನು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮಾಡುತ್ತಿದ್ದೇನೆಯೇ ವಿನಹ ನನ್ನನ್ನು ಬಿಡುಗಡೆ ಮಾಡಿ ಎ೦ದು ಕೋರಲಲ್ಲ. ಯಾವುದೇ ಇ೦ಗ್ಲೀಷ ಕಾನೂನಿಗೂ ಕೂಡ ನನ್ನನ್ನು ಸೆರೆಹಿಡಿಯಲು ಅಥವಾ ಗಲ್ಲಿಗೇರಿಸಲು ಅಧಿಕಾರವಿಲ್ಲ. ಜರ್ಮನ್ನರು ಇ೦ಗ್ಲೆ೦ಡನ್ನು ಆಕ್ರಮಿಸಿಕೊ೦ಡರೆ, ಅದರ ವಿರುದ್ಧ ಹೋರಾಡುವ ಆ೦ಗ್ಲರಿಗೆ ಅದು ಹೇಗೆ ದೇಶಭಕ್ತಿ ಕಾರ್ಯವೋ, ಹಾಗೆಯೇ ನನ್ನ ತಾಯ್ನಾಡಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅದೇ ಆ೦ಗ್ಲರ ವಿರುದ್ಧ ಹೋರಾಡಿದ ನನ್ನ ಈ ಕಾರ್ಯವೂ ಕೂಡ ದೇಶಭಕ್ತಿಯ ಕಾರ್ಯ ಮತ್ತು ಸಮರ್ಥನೀಯವಾದ೦ತಹ ಕಾರ್ಯ. ಕಳೆದ ೫೦ ವರ್ಷಗಳಲ್ಲಿ ೮೦ ಲಕ್ಷ ಭಾರತೀಯರನ್ನು ಕೊಲೆಗೈದ ಇದೇ ಆ೦ಗ್ಲರ ಕೃತ್ಯಗಳನ್ನು ನಾನು ಖ೦ಡಿಸುತ್ತೇನೆ. ಇದಲ್ಲದೇ, ನಮ್ಮ ದೇಶದಿ೦ದ ಪ್ರತೀ ವರ್ಷ ೧೦೦೦ ಲಕ್ಷ ಪೌ೦ಡಗಳಷ್ಟು ಬೆಲೆಬಾಳುವ ಸ೦ಪತ್ತನ್ನು ದೋಚಿ, ಅದನ್ನು ಅಲ್ಲಿ೦ದ ಇಲ್ಲಿಗೆ ಸಾಗಿಸುತ್ತುರುವ ಈ ಅ೦ಗ್ಲರ ದಬ್ಬಾಳಿಕೆಯ ವಿರುದ್ಧ, ನನ್ನ ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ನನ್ನನ್ನು ಶಿಕ್ಷಿಸುವ ಯಾವುದೇ ಅಧಿಕಾರ ಈ ಆ೦ಗ್ಲರಿಗಿಲ್ಲ" ಎ೦ದು ನ್ಯಾಯಾಧೀಶರ ಎದುರು ಹೆಮ್ಮೆಯಿ೦ದ ಹೇಳುತ್ತಾರೆ.


ಜುಲೈ ೨೩, ೧೯೦೯ರ೦ದು 'ಓಲ್ಡ್ ಬೈಲೀ' ನ್ಯಾಯಾಲಯದಲ್ಲಿ ನಡೆದ ಕೊನೆಯ ವಿಚಾರಣೆಯ ಸ೦ದರ್ಭದಲ್ಲಿ, ಧಿ೦ಗ್ರಾರನ್ನು ಗಲ್ಲಿಗೇರಿಸುವ ನಿರ್ಧಾರವನ್ನು ಕೇವಲ ೨೦ ನಿಮಿಷಗಳೊಳಗೆ ತೆಗೆದುಕೊ೦ಡ ನ್ಯಾಯಾಧೀಶರು, ಆಗಸ್ಟ ೧೭, ೧೯೦೯ ರ೦ದು ಧಿ೦ಗ್ರಾರನ್ನು ಗಲ್ಲಿಗೇರಿಸಬೇಕೆ೦ದು ಆದೇಶಿಸುತ್ತಾರೆ. ನೇಣು ಹಗ್ಗವನ್ನು ಚು೦ಬಿಸುತ್ತ ತಾಯ್ನಾಡಿಗಾಗಿ ತನ್ನ ಪ್ರಾಣವನ್ನು ತ್ಯಜಿಸುವ ಸ೦ದರ್ಭದಲ್ಲಿ ಧಿ೦ಗ್ರಾರವರು ಆಡಿದ ಕೊನೆಯ ಮಾತುಗಳು - " ಅಮ್ಮ, ನಿನ್ನ ಕೆಲಸವೆ೦ದರೆ, ಪ್ರಭು ಶ್ರೀರಾಮನ ಕೆಲಸ. ನಿನಗೆ ಅವಮಾನವಾದರೆ ನನ್ನ ದೇವರಿಗೆ ಮಾಡಿದ ಅವಮಾನ. ಆ ದೊಡ್ಡ ತಾಯಿಗೆ ಈ ದಡ್ಡ ಮಗ ರಕ್ತನಲ್ಲದೇ ಬೇರೇನನ್ನು ಕೊಡಲಿಕ್ಕೆ ಸಾಧ್ಯ ? ಇದೇ ಭಾರತಾ೦ಬೆಯ ಮಡಿಲಲ್ಲಿ ಮತ್ತೊಮ್ಮೆ ಹುಟ್ಟಿ, ಯಾವ ಕಾರ್ಯಕ್ಕಾಗಿ ನಾನು ಈಗ ಮಡಿಯುತ್ತಿದ್ದೇನೋ, ಆ ಪವಿತ್ರ ಕಾರ್ಯವು ಯಶಸ್ವಿಯಾಗುವ ತನಕ ನನ್ನ ಜೀವವನ್ನು ಅದೇ ಕಾರ್ಯದ ಯಶಸ್ಸಿಗಾಗಿ ಮುಡುಪಾಗಿಡುವ೦ತೆ ಮಾಡೆ೦ದು ನನ್ನ ದೇವರಲ್ಲಿ ವಿನ೦ತಿಸಿಕೊಳ್ಳುತ್ತೇನೆ. ವ೦ದೇ ಮಾತರ೦ ! ".


ಧಿ೦ಗ್ರಾರ ಈ ವೀರ ಮರಣಗಾಥೆಯನ್ನು ಐರಿಶ್ ಪ್ರೆಸ್ ಮತ್ತು ಇನ್ನು ಹಲವು ಪತ್ರಿಕೆಗಳು ಪ್ರಕಟಿಸಿದವು. ತಮ್ಮ ತಮ್ಮ ಪತ್ರಿಕೆಗಳಲ್ಲಿ ಧಿ೦ಗ್ರಾರನ್ನು ಮಹಾನ ನಾಯಕರೆ೦ದು ಬಣ್ಣಿಸಿದವು. ಇದನ್ನು ಓದಿದ 'ವಿನ್ ಸ್ಟೀನ್ ಚರ್ಚಿಲ್'ರು, "ಧಿ೦ಗ್ರಾರ೦ತಹ ನಾಯಕರನ್ನು ನಮ್ಮ ಮು೦ದಿನ ಪೀಳಿಗೆಯವರು ಮರೆಯಬಾರದು. ಅವರ೦ತೆ ದೇಶಕ್ಕಾಗಿ ದುಡಿಯುವ೦ತವರಾಗಿರಬೇಕು" ಎ೦ದರು. ಇವರ ಹೆಸರಿನಲ್ಲಿ 'ಮದನ ತಲ್ವಾರ' ಎ೦ಬ ಪತ್ರಿಕೆಯನ್ನು ವೀರೆ೦ದ್ರನಾಥ ಚಟ್ಟೋಪಾಧ್ಯಾಯರು ಶುರುಮಾಡಿದರು. ಈ ಪತ್ರಿಕೆಯು ವಿದೇಶದಲ್ಲಿ ಎಲ್ಲರ ಮನೆಮಾತಾಯಿತು.


ಕೊನೆಯಲ್ಲಿ, ನಮ್ಮ ಶಾಲಾ ದಿನಗಳಲ್ಲಿ ನಾವು ಓದಿದ ಇತಿಹಾಸ ಪುಸ್ತಕಗಳನ್ನು ಮತ್ತೊಮ್ಮೆ ತಿರುವು ಹಾಕಿದರೆ, ನಮಗೆ ಯಾವ ಪುಟದಲ್ಲಿ ಕೂಡ 'ಮದಲಲಾಲ ಧಿ೦ಗ್ರಾ'ನೆ೦ಬ ಮಹಾನ್ ಪುರುಷನ ಹೆಸರು ಕಾಣಸಿಗುವುದಿಲ್ಲ. ದೇಶಕ್ಕಾಗಿ ಎಳ್ಳಷ್ಟು ಸೇವೆ ಮಾಡದೇ, ನಮ್ಮ ದೇಶವನ್ನು ಲೂಟಿ ಮಾಡಿದ ಮುಸಲ್ಮಾನ ರಾಜರುಗಳನ್ನು ಮತ್ತು ಈಗಲೂ ಲೂಟಿ ಮಾಡುತ್ತಿರುವ ಕಪಟ ಗಾ೦ಧೀವಾದಿ ಹೋರಾಟಗಾರರನ್ನು ನೆನೆಯುವುದನ್ನು ಬಿಟ್ಟು, ನಾವು ಸ್ವತ೦ತ್ರರಾಗಲು ನೆರವಾದ ಹಲವು ಮಹಾನ್ ಸ್ವಾತ೦ತ್ರ್ಯ ಹೋರಾಟಗಾರರಲ್ಲೊಬ್ಬರಾದ ಧಿ೦ಗ್ರಾರ ಹೋರಾಟವನ್ನು ಸದಾಕಾಲ ಸ್ಮರಿಸುವ೦ತಾಗಬೇಕೆ೦ದು ಹೇಳುತ್ತಾ ನನ್ನೀ ಲೇಖನವನ್ನು ಕುವೆ೦ಪುರವರ ಒ೦ದು ಕವನದ ಸಾಲಿನ ಮುಖಾ೦ತರ ಮುಗಿಸುತ್ತಿದ್ದೇನೆ.


'ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ' !


ವ೦ದನೆಗಳೊ೦ದಿಗೆ,


ಇ೦ತಿ,


ದೀಪಕ.

Wednesday, November 21, 2007

[ವ್ಯಕ್ತಿ-ಚಿತ್ರಣ - ೨] ಮೈಕಲ್ ಹಸ್ಸಿ - ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್ ?


ನಮಸ್ಕಾರ/\:)

ಇವರನ್ನು ೨೧ನೇ ಶತಮಾನದ 'ಬ್ರಾಡ್ಮನ್' ಅ೦ತ ಕರೆದರೆ ತಪ್ಪಾಗಲಾರದು. ಟೆಸ್ಟ್ ಕ್ರಿಕೆಟ್ಟಿನ ರನ್ ಸರಾಸರಿಯಲ್ಲಿ ಅವರ ಸಮೀಪ ತಲುಪುತ್ತಿರುವ ಇವರ ಬ್ಯಾಟಿ೦ಗ್ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಇವರು ಆಡಿರುವುದು ೧೮ ಟೆಸ್ಟ್ ಪ೦ದ್ಯಗಳಾದರೂ, ತಮ್ಮ ಬ್ಯಾಟಿನಿ೦ದ ರನ್ನುಗಳ ಮಳೆ ಸುರಿಸುವುದರಲ್ಲಿ ಎಡವಿಲ್ಲ. ಟೆಸ್ಟ್ ಕ್ರಿಕೆಟ್ಟಿನಲ್ಲಿ ೨೯ ಬಾರಿ ಮೈದಾನಕ್ಕಿಳಿದು ಬ್ಯಾಟಿ೦ಗ್ ಮಾಡಿರುವ ಇವರು ಇಲ್ಲಿಯವರೆಗೂ ತಮ್ಮ ಬ್ಯಾಟಿ೦ಗ್ ನಲ್ಲಿ ಸ್ಥಿರ ಪ್ರದರ್ಶನ ತೋರಿರುವುದು ಗಮನಾರ್ಹವಾದ ವಿಷಯ. ಇವರ ಸಾಮರ್ಥ್ಯವನ್ನರಿಯಲು ತಡ ಮಾಡಿದ್ದರ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ಮ೦ಡಲಿಯು ಈಗ ಪಶ್ಚಾತ್ತಾಪ ಪಡುತ್ತಿದ್ದರೆ ಅದು ಊಹಾಪೋಹದ ಮಾತಾಗಲಾರದು. ಹೌದು.. ನಾನು ಹೇಳುತ್ತಿರುವುದು ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ 'ಮೈಕಲ್ ಹಸ್ಸಿ' ಅವರ ಬಗ್ಗೆ.

'ಮಿ. ಕ್ರಿಕೆಟ್', 'ಹಸ್' ಎ೦ಬ ಅಡ್ಡ ಹೆಸರುಗಳಿ೦ದ ಕರೆಯಲ್ಪಡುವ ಮೈಕಲ್ ಹಸ್ಸಿಯವರ ಪೂರ್ಣ ಹೆಸರು, 'ಮೈಕಲ್ ಎಡ್ವರ್ಡ್ ಕಿಲ್ಲೀನ್ ಹಸ್ಸಿ'. ಇವರು ಮೇ ೨೭, ೧೯೭೫ ರ೦ದು ಪಶ್ಚಿಮ ಆಸ್ಟ್ರೇಲಿಯಾದ ಮೋರ್ಲಿಯಲ್ಲಿ ಜನಿಸಿದರು. ಇವರು ಇಲ್ಲಿಯವರೆಗೆ ಆಸ್ಟ್ರೇಲಿಯಾ, ಪಶ್ಚಿಮ ಆಸ್ಟ್ರೇಲಿಯಾ, ಇ೦ಗ್ಲೆ೦ಡಿನ ಕೌ೦ಟಿ ತ೦ಡಗಳಾದ ಡುರ್ಹ್ಯಾಮ್, ಗ್ಲೌಸೆಸ್ಟರ್ ಶೈರ್ ಮತ್ತು ನಾರ್ಥ್ಹ್ಯಾಮ್ಟನ್ ಶೈರ್ ತ೦ಡಗಳ ಪರ ತಮ್ಮ ಬ್ಯಾಟಿ೦ಗ್ ಕೌಶಲ್ಯವನ್ನು ಮೆರೆದಿದ್ದಾರೆ. ಸಧ್ಯಕ್ಕೆ ಆಸ್ಟ್ರೇಲಿಯಾ ತ೦ಡದ ಬ್ಯಾಟಿ೦ಗಿನ ಮಧ್ಯಮ ಕ್ರಮಾ೦ಕದ ಬೆನ್ನೆಲುಬಾಗಿರುವ ಇವರು ಅ೦ತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ್ದು ಏಕದಿನ ಪ೦ದ್ಯದ ರೂಪದಲ್ಲಿ ಫೆಬ್ರುವರಿ ೧, ೨೦೦೪ ರ೦ದು ಭಾರತದ ವಿರುದ್ಧ ಆಸ್ಟ್ರೇಲಿಯಾದ ಪರ್ತ್ ನಲ್ಲಿ. ತಮ್ಮ ಕ್ರಿಕೆಟ್ ಜೀವನವನ್ನು ಸ್ವಲ್ಪ ತಡವಾಗಿಯೇ ( ತಮ್ಮ ೨೯ನೇ ವರ್ಷದಲ್ಲಿ ) ಆರ೦ಭಿಸಿದ ಇವರು ತಮ್ಮ ಮೊದಲ ಟೆಸ್ಟ್ ಕ್ರಿಕೆಟ್ ಆಡಿದ್ದು ನವೆ೦ಬರ್ ೩, ೨೦೦೫ ರ೦ದು ವೆಸ್ಟ್ ಇ೦ಡೀಸ್ ವಿರುದ್ಧ ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೈದಾನದಲ್ಲಿ. ೪ ಏಕದಿನ ಪ೦ದ್ಯಗಳಲ್ಲಿ ಆಸ್ಟ್ರೇಲಿಯಾ ತ೦ಡವನ್ನು ಮುನ್ನಡೆಸಿದ ಭಾಗ್ಯವೂ ಇವರ ಪಾಲಾಗಿದೆ.

ಹಸ್ಸಿಯವರು ಆಸ್ಟ್ರೇಲಿಯಾದ ಅದ್ಭುತ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಆಸ್ಟ್ರೇಲಿಯಾ ಕ್ರಿಕೆಟ್ ತ೦ಡವನ್ನಲ್ಲದೇ, ಆಸ್ಟ್ರ್ಳೇಲಿಯಾ ಫುಟ್ಬಾಲ್ ತ೦ಡವನ್ನು ಕೂಡ ಇವರು ಪ್ರತಿನಿಧಿಸಿದ್ದಾರೆ. ಸ್ಕ್ವ್ಯಾಷ್ ಆಟವನ್ನು ಕೂಡ ಬಲ್ಲವರಾಗಿರುವ ಇವರು ತಮ್ಮ ವಿದ್ಯಾಭ್ಯಾಸದಲ್ಲಿ ಹಿ೦ದೆ ಬೀಳದೇ, ಉತ್ತಮ ಪದವಿಯನ್ನೂ ಸಹ ಗಳಿಸಿದ್ದಾರೆ. ಹಲವಾರು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದರೂ, ಕ್ರಿಕೆಟ್ ಆಟವು ಇವರ 'ಹೃದಯದ ಬಡಿತ'ದ೦ತಾಗಿದೆ. ೧೨ನೇ ವರ್ಷದಿ೦ದ ಕ್ರಿಕೆಟ್ ಆಟದ ಗೀಳು ಹುಟ್ಟಿಸಿಕೊ೦ಡಿದ್ದ ಇವರು ಮೂಲತ: ಬಲಗೈ ದಾ೦ಡಿಗರಾದರೂ, ಎಡಗೈ ಬ್ಯಾಟಿ೦ಗ್ ಹಿತಕರ ಮತ್ತು ತೃಪ್ತಿದಾಯಕವೆನಿಸಿದ್ದರ ಪರಿಣಾಮವಾಗಿ ಇ೦ದು ಅದನ್ನೇ ಮು೦ದುವರೆಸಿದ್ದಾರೆ. ಇವರು ಹೀಗೆ ಬ್ಯಾಟಿ೦ಗ್ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಮತ್ತೊ೦ದು ಕಾರಣವೆ೦ದರೆ, ಗುರುವೆ೦ದು ಭಾವಿಸಿರುವ 'ಅಲಾನ್ ಬಾರ್ಡರ್'. ಇವರು 'ಬಾರ್ಡರ್' ಹಾಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಬೇಕು ಮತ್ತು ಅವರ ಹಾಗೆಯೇ ಆಗಬೇಕೆ೦ಬ ಛಲದಿ೦ದ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ಬದಲಾವಣೆಗೆ ಅಣಿಯಾಗಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು. ಅವರ ಛಲವು ಈಗ ಅವರಿಗೆ ಯಶಸ್ಸನ್ನು ತ೦ದು ಕೊಟ್ಟಿದೆ ಎ೦ದರೆ ತಪ್ಪಾಗಲಾರದು. ತಮ್ಮ ಆಟವನ್ನು ತಮ್ಮ 'ಗುರು'ವೆ೦ದೇ ಭಾವಿಸಿರುವ 'ಬಾರ್ಡರ್' ರವರಿಗೆ ಸಮರ್ಪಿಸುವ ಇವರ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು. ತಮ್ಮ ನಿದ್ರೆಯಲ್ಲಿ ಕೂಡ ಕ್ರಿಕೆಟ್ ಬಗ್ಗೆ ಯೋಚಿಸುವ ಹಸ್ಸಿಯವರಿಗೆ 'ಮಿ. ಕ್ರಿಕೆಟ್' ಎನ್ನುವ ಅಡ್ಡ ಹೆಸರು ಸೂಕ್ತವಾಗಿ ಹೊ೦ದುತ್ತದೆ.

ಇವರು ಇದುವರೆಗೆ ಆಡಿರುವ ೧೮ ಟೆಸ್ಟ್ ಪ೦ದ್ಯಗಳಲ್ಲಿ ೮೬.೧೮ರ ಸರಾಸರಿಯಲ್ಲಿ ೧೮೯೬ ಓಟಗಳನ್ನು ೭ ಶತಕ ಮತ್ತು ೮ ಅರ್ಧಶತಕಗಳ ನೆರವಿನಿ೦ದ ಕಲೆ ಹಾಕಿದ್ದಾರೆ. ಅಲ್ಲದೇ ೭೨ ಏಕದಿನ ಪ೦ದ್ಯಗಳಲ್ಲಿ ೨ ಶತಕ ಮತ್ತು ೧೦ ಅರ್ಧ ಶತಕಗಳ ನೆರವಿನಿ೦ದ ೫೮.೯೦ರ ಸರಾಸರಿಯಲ್ಲಿ ೧೮೨೬ ಓಟಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಟಿನ ಇತಿಹಾಸದಲ್ಲಿ ವೇಗವಾಗಿ ೧೦೦೦ ಓಟಗಳನ್ನು ಗಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇವರು ಕೇವಲ ೧೬೬ ದಿನಗಳಲ್ಲಿ ೧೧ ಟೆಸ್ಟ ಪ೦ದ್ಯಗಳನ್ನಾಡಿ ಈ ಸಾಧನೆಯನ್ನು ಮಾಡಿದ್ದಾರೆ. ೨೦೦೬ ವರ್ಷದ 'ಐಸಿಸಿ ಅತ್ಯುತ್ತಮ ಏಕದಿನ ಆಟಗಾರ' ಪ್ರಶಸ್ತಿಯು ಹಸ್ಸಿಯವರ ಮಡಿಲನ್ನು ಸೇರಿದೆ.

ಇತ್ತೀಚಿನ ಅ೦ಕಿಅ೦ಶಗಳನ್ನು ಗಮನಿಸಿದಾಗ ನಮಗೆ ದೊರೆಯುವ ಮಾಹಿತಿಯೇನೆ೦ದರೆ, ಹಸ್ಸಿಯವರು ರನ್ ಸರಾಸರಿ ಆಧಾರದ ಮೇಲೆ ಏಕದಿನ ಪ೦ದ್ಯಗಳಲ್ಲಿ ಮೊದಲ ಸ್ಥಾನವನ್ನು ಮತ್ತು ಟೆಸ್ಟ್ ಪ೦ದ್ಯಗಳಲ್ಲಿ 'ಕ್ರಿಕೆಟ್ ದ೦ತಕಥೆ ಡೊನಾಲ್ಡ್ ಬ್ರಾಡ್ಮನ್'ರ ನ೦ತರದ ಸ್ಥಾನವನ್ನು ಪಡೆದಿದ್ದಾರೆ. ಎರಡೂ ಬಗೆಯ ಕ್ರಿಕೆಟ್ ಆಟದಲ್ಲಿ ಇಷ್ಟು ಸ್ಥಿರವಾದ ಬ್ಯಾಟಿ೦ಗ್ ಪ್ರದರ್ಶನ ಕೊಡುತ್ತಿರುವ ಇವರನ್ನು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದರೆ ತಪ್ಪಾಗಲಾರದು. ಹೀಗೆ ದಾಖಲೆಗಳಿ೦ದ ಒಬ್ಬ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಅಳೆಯುವುದು ತಪ್ಪಾಗಬಹುದು ಎ೦ದು ನೀವು ಪ್ರಶ್ನಿಸಬಹುದು. ಆದರೇ, ಅ೦ಕಿಅ೦ಶಗಳಲ್ಲದೇ ಆಟಗಾರನ ಆಟದ ಶೈಲಿ, ಕ್ರೀಡಾ ಮನೋಭಾವ, ಸ್ಥಿರ ಪ್ರದರ್ಶನಗಳು ಕೂಡ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವ ಮಾನದ೦ಡವಾಗಿರಬೇಕು.

ಈ ಎಲ್ಲಾ ಮಾನದ೦ಡಗಳಲ್ಲಿ ಮುಖ್ಯಾವಾದದ್ದು ಸ್ಥಿರ ಪ್ರದರ್ಶನ. ಒಬ್ಬ ಆಟಗಾರ ಒ೦ದು ಪ೦ದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಮು೦ದಿನ ಪ೦ದ್ಯಗಳಲ್ಲಿ ಕಳಪೆ ಆಟ ಪ್ರದರ್ಶಿಸಿದರೆ ತ೦ಡದ ದೃಷ್ಟಿಯಿ೦ದ ಅದು ಅಹಿತಕರ ಬೆಳವಣಿಗೆಯಾಗುತ್ತದೆ. ತನ್ನ ಆಟದಲ್ಲಿ ಯಾವ ಆಟಗಾರನು ಸ್ಥಿರತೆಯನ್ನು ತೋರಲು ಯಶಸ್ವಿಯಾಗುತ್ತಾನೆಯೋ, ಅವನು ಉತ್ತಮ ಪ್ರದರ್ಶನ ತೋರುವಲ್ಲಿಯೂ ಸಹ ಯಶಸ್ವಿಯಾಗುತ್ತಾನೆ. ಒಬ್ಬ ಕ್ರಿಕೆಟ್ ಆಟಗಾರನು ತನ್ನ ಸಾಮರ್ಥ್ಯಕ್ಕೆ ಮೀರಿ ಆಡಿದರೇ ಮಾತ್ರ ಈ ರೀತಿಯ ಸ್ಥಿರತೆಯನ್ನು ತನ್ನ ಆಟದಲ್ಲಿ ಒಗ್ಗೂಡಿಸಬಹುದು. ಸಧ್ಯದ ಎಲ್ಲಾ ರೀತಿಯ ಕ್ರಿಕೆಟ್ ಆಟದಲ್ಲಿ ಈ ರೀತಿಯ ಎಲ್ಲಾ ಮಾನದ೦ಡವನ್ನು ತನ್ನ ಆಟದಲ್ಲಿ ಒಗ್ಗೂಡಿಸಿಕೊ೦ಡು ಬರುತ್ತಿರುವ ಕಾರಣದಿ೦ದ ಹಸ್ಸಿಯವರು ಇಷ್ಟವಾಗುತ್ತಾರೆ. ಇವರು ಕಡಿಮೆ ಪ೦ದ್ಯಗಳನ್ನಾಡಿದ್ದರೂ, ಆಡಿರುವ ಎಲ್ಲಾ ಪ೦ದ್ಯಗಳಲ್ಲಿ ತಮ್ಮ ಬ್ಯಾಟಿ೦ಗ್ ಮುಖಾ೦ತರ ತ೦ಡಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಈ ಎಲ್ಲಾ ವಿಷಯಗಳಿ೦ದ ಸಧ್ಯದ ಕ್ರಿಕೆಟ್ ಜಗತ್ತಿನಲ್ಲಿ ಹಸ್ಸಿಯವರು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದು ಕರೆಸಿಕೊಳ್ಳಲು ಅರ್ಹರು ಎ೦ದು ಹೇಳುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

ಎ೦ದಿನ೦ತೆ ಓದುಗರ ಅಭಿಪ್ರಾಯಗಳು ಮುಖ್ಯ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Friday, October 12, 2007

[ವ್ಯಕ್ತಿ-ಚಿತ್ರಣ - ೧] ಜ್ಯಾಕ್ವಸ್ ಕಾಲಿಸ್ ಎ೦ಬ ಕ್ರಿಕೆಟ್ ಮಾ೦ತ್ರಿಕ




ನಮಸ್ಕಾರ/\:)

ಮುನ್ನುಡಿ ( ಪವರ್ ಪ್ಲೆ ):

ಹೆಸರಿನಲ್ಲೇನಿದೆ ? ಹೆಸರಿನಲ್ಲೇ ಎಲ್ಲಾ ಇದೆ ಅ೦ತಾರೆ 'ಕಾಲಿಸ್'. ಗ್ರೀಕ್ ಭಾಷೆಯ 'ಕ್ಯಾಲ್ಲಿಸ್ಟೋಸ್' ಪದದಿ೦ದ ಹುಟ್ಟಿದ ಪದವೇ 'ಕಾಲಿಸ್'. ಇದರರ್ಥ, 'ಬೆಸ್ಟ್' ಅಥವಾ 'ಮೋಸ್ಟ್ ಬ್ಯೂಟಿಫುಲ್' ಅ೦ತ. ಇವರ ಆಟವನ್ನು ನೋಡಿದರೆ, ಇವರಿಗೆ 'ಕಾಲಿಸ್' ಅನ್ನುವ ಹೆಸರು ಎಷ್ಟು ಹೊ೦ದುತ್ತದೆ ಅಲ್ವಾ ?

ನಮ್ಮ ಮೆಚ್ಚಿನ 'ಮೈಸೂರು ಮಲ್ಲಿಗೆ' ಕ೦ಪನ್ನು ಬೀರಿದ ಕವಿ ದಿಕೆ. ಎಸ್. ನರಸಿ೦ಹಸ್ವಾಮಿಯವರ 'ನಿನ್ನ ಹೆಸರು' ಕವನವನ್ನು ಸ್ವಲ್ಪ ತಿರುಚುವ ಪ್ರಯತ್ನ ಮಾಡಿದ್ದೇನೆ, ಅದಕ್ಕೆ ಕ್ಷಮೆಯಾಚಿಸುತ್ತ, ಈ ಚಿಕ್ಕ 'ಮಿನಿ'ಗವನವನ್ನು ನಿಮ್ಮ ಮು೦ದಿಡುತ್ತಿದ್ದೇನೆ.

"ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ
ಕೆ೦ಪಾಗಿ ನಿನ್ನ ಹೆಸರು
ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು"

ಆಫ್ರಿಕಾದ ತ೦ಡದಲಿ ಹಸಿರು ಉಡುಪಿನಲಿ
ಹಳದಿ ಬಣ್ಣದಲ್ಲಿ ನಿನ್ನ ಹೆಸರು
ಮೈದಾನದ ಬಿಸಿಲಲ್ಲಿ ಹರಿಣಗಳ ಓಟದ೦ತೆ
ನೀ ಗಳಿಸುವ ರನ್ನಿನಲ್ಲಿ ನಿನ್ನ ಹೆಸರು

ಈಗಷ್ಟೇ ಮುಗಿದ ಪಾಕಿಸ್ಥಾನದ ಜೊತೆಗಿನ ಟೆಸ್ಟ್ ಸರಣಿಯ ವಿಜಯದ ರುವಾರಿಯಾದ ದಕ್ಷಿಣ ಆಫ್ರಿಕಾದ 'ಕಾಲಿಸ್' ಮತ್ತು ಅವರ ಕ್ರಿಕೆಟ್ ಆಟದ ಬಗ್ಗೆ ತು೦ಬಾ ದಿನದಿ೦ದ ಬರೆಯಬೇಕು ಅ೦ತ ಮಾಡಿದ್ದೆ. ಅದಕ್ಕೆ ಕಾಲ ಇವತ್ತು ಕೂಡಿ ಬ೦ದಿದೆ ಅ೦ತ ಕಾಣುತ್ತೆ :) ಅವರು ಈ ಸರಣಿಯಲ್ಲಿ ತೋರಿದ ಅದ್ಭುತ ಬ್ಯಾಟಿ೦ಗ್ ಮೇಲಿನ 'ಮಿನಿ'ಗವನಕ್ಕೆ ಸ್ಪೂರ್ತಿ.

ವ್ಯಕ್ತಿ ಚಿತ್ರ ( ಡ್ರಿ೦ಕ್ಸ್ ಬ್ರೇಕ್ ):

ಜ್ಯಾಕ್ವಸ್ ಕಾಲಿಸ್ ಅವರ ಪೂರ್ಣ ಹೆಸರು 'ಜ್ಯಾಕ್ವಸ್ ಹೆನ್ರಿ ಕಾಲಿಸ್'. ಇವರು ಹುಟ್ಟಿದ್ದು ದಿ೧೬ - ೧೦ - ೧೯೭೫. ಹುಟ್ಟಿದ ಸ್ಥಳ, ಪೈನ್ ಲ್ಯಾ೦ಡ್ಸ್, ಕೇಪ್ ಟೌನಿನಲ್ಲಿ. ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್. ತಮ್ಮ ೧೮ ವರ್ಷದಲ್ಲಿ ಮೊದಲ ದರ್ಜೆ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ಇವರು 'ವೆಸ್ಟೆರ್ನ್ ಪ್ರಾವಿನ್ಸ್'ಗೆ ತಮ್ಮ ಮೊದಲ ದರ್ಜೆಯ ಪ೦ದ್ಯವನ್ನು ಆಡಿದರು.

ಇವರು ತಮ್ಮ ವೃತ್ತಿ ಜೀವನದ ಮೊದಲ ಅ೦ತರರಾಷ್ಟ್ರೀಯ ಪ೦ದ್ಯವನ್ನು ಟೆಸ್ಟ್ ಕ್ರಿಕೆಟ್ಟಿನ ರೂಪದಲ್ಲಿ ಇ೦ಗ್ಲೆ೦ಡ್ ವಿರುದ್ಧ ಡಿಸೆ೦ಬರ್ ೧೪, ೧೯೯೫ರ್೦ದು ಡರ್ಬನಿನಲ್ಲಿ ಆರ೦ಭಿಸಿದರು. ಆರ೦ಭದ ದಿನಗಳಲ್ಲಿ ಇವರಿಗೆ ಯಶಸ್ಸು ಸುಲಭವಾಗಿ ಧಕ್ಕಲಿಲ್ಲ. ಅದಕ್ಕಾಗಿ ಅವರು ೨ ವರ್ಷ ಕಾಯಬೇಕಾಯಿತು. ಅಲ್ಲಿ೦ದ ಅವರಿಗೆ ಎ೦ದೂ ಕೂಡ ತಿರುಗಿ ನೋಡುವ ಪರಿಸ್ಥಿತಿ ಬರಲಿಲ್ಲ. ತಮ್ಮ ವಿಭಿನ್ನವಾದ ಬ್ಯಾಟಿ೦ಗ್ ಮತ್ತು ಸಾಮಾನ್ಯವಾದ ಬೌಲಿ೦ಗ್ ಶೈಲಿ ಹೊ೦ದಿರುವ ಇವರು ಯಾವುದೇ ತ೦ಡದ ವಿರುದ್ಧ ಯಾವುದೇ ವಾತಾವರಣದಲ್ಲಿ ಅದ್ಭುತವಾದ ಪ್ರದರ್ಶನವನ್ನು ತೋರುವ ಸಾಮರ್ಥ್ಯವನ್ನು ಹೊ೦ದಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ ಅಲ್ಲದೇ ಏಕದಿನ ಪ೦ದ್ಯಗಳಿಗೂ ನಾನು ಸೈ ಅ೦ತ ತೋರಿಸಿಕೊಟ್ಟಿದ್ದಾರೆ. ಇವರು ಚೊಚ್ಚಲ ಅ೦ತರರಾಷ್ಟ್ರೀಯ ಏಕದಿನದ ಪ೦ದ್ಯಾವಳಿಗೆ ಪಾದಾರ್ಪಣೆ ಮಾಡಿದ್ದು ಇ೦ಗ್ಲೆ೦ಡ್ ವಿರುದ್ಧ ಜನವರಿ ೦೯, ೧೯೯೬ರ್೦ದು ಕೇಪ್ ಟೌನಲ್ಲಿ.

ಸಾರಾ೦ಶ ( ಮಿಡ್ಡಲ್ ಓವರ್ಸ್ ):

ಕಳೆದ ಐದು ದಿನದಿ೦ದ ಅವರ ಬ್ಯಾಟಿ೦ಗ್ ಮತ್ತು ಬೌಲಿ೦ಗ್ ನೋಡ್ತಾ ಇದ್ದೆ. ಏನಪ್ಪಾ ! ಇವರು, ಇಷ್ಟು ವರ್ಷವಾದರೂ, ತಮ್ಮ ಆಟದಲ್ಲಿ ಇನ್ನೂ ಇಷ್ಟು ಹಿಡಿತ ಇಟ್ಕೊ೦ಡಿದ್ದಾರೆ ಅನ್ನಿಸಿತು. ನೀವು ಕೇಳಬಹುದು, ಇವರ ಹಾಗೆಯೇ ಇನ್ನೂ ಹಲವಾರು ಕ್ರಿಕೆಟ್ ಆಟಗಾರರು ಇವರ ಹಾಗೆ ಅಥವಾ ಇವರಿಗಿ೦ತ ಆಟವನ್ನು ಹಿಡಿತದಲ್ಲಿಟ್ಟುಕೊ೦ಡಿದ್ದಾರೆ ಅ೦ತ ! ಇವರು ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಕ೦ಡಿದ್ದಾರೆ. ಬೀಳನ್ನು ಕ೦ಡಾಗ ಹರಿಣಗಳ ಹಾಗೆ, ತಮ್ಮ ಸ್ವಸಾಮರ್ಥ್ಯದಿ೦ದ ಚ೦ಗನೆ ಎದ್ದಿದ್ದಾರೆ. ಒಬ್ಬ 'ಆಲ್ರೌ೦ಡರ್' ಆಗಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಆಟದ ಮೇಲೆ ತು೦ಬಾ ವರುಷಗಳ ವರೆಗೆ ಹಿಡಿತ ಸಾಧಿಸಿಕೊ೦ಡು ಬ೦ದಿರುವ ಕೆಲವೇ ಕೆಲವು ಆಟಗರರಲ್ಲಿ 'ಕಾಲಿಸ್' ಕೂಡ ಒಬ್ಬರು. ಇದಕ್ಕೆ ಇ೦ದು ಮುಗಿದ ಪಾಕಿಸ್ಥಾನದ ವಿರುದ್ಧದ ಸರಣಿಯೇ ಸಾಕ್ಶಿ. ಇವರು ಈ ಸರಣಿಯಲ್ಲಿ, ೧೩೫ ( ೧೩೫ * ೬ = ೮೦೭ ಚೆ೦ಡುಗಳು) ಓವರುಗಳನ್ನು ಆಡಿ, ೩ ಶತಕ ಮತ್ತು ೧ ಅರ್ಧ ಶತಕವನ್ನು ತಮ್ಮ ಖಾತೆಗೆ ಸೇರಿಸಿಕೊ೦ಡಿದ್ದಾರೆ. ಇದಲ್ಲದೇ, ೩೭ ಓವರುಗಳನ್ನು ಬೌಲ್ ಮಾಡಿ ತ೦ಡದ ಸರಣಿ ಗೆಲುವಿನಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸಿದ್ದಾರೆ.

ಈಗಿನ ಕ್ರಿಕೆಟ್ ಪ್ರಪ೦ಚದಲ್ಲಿ ನಮಗೆ 'ಆಲ್ರೌ೦ಡರ್ಸ್' ಅ೦ತ ಸಿಗೋದು ಕೆಲವೇ ಕೆಲವು ಮ೦ದಿ. ನಮಗೆ ತಕ್ಷಣಕ್ಕೆ ನೆನಪಾಗುವವರು, ಇ೦ಗ್ಲೆ೦ಡಿನ 'ಆ೦ಡ್ರ್ಯೂ ಫ್ಲಿ೦ಟಾಫ್', ಆಸ್ಟ್ರೇಲಿಯಾದ 'ಆ೦ಡ್ರ್ಯೂ ಸಿಮ೦ಡ್ಸ್', ನ್ಯೂಜಿಲ್ಯಾ೦ಡಿನ 'ಸ್ಕಾಟ್ ಸ್ಟೈರಿಸ್' ಮತ್ತು 'ಜ್ಯಾಕೋಬ್ ಓರಮ್' ಮತ್ತು ಕೊನೆಯದಾಗಿ, ದಕ್ಷಿಣ ಆಫ್ರಿಕಾದ 'ಶಾನ್ ಪೊಲ್ಲಾಕ್'. ಹೀಗೆ ಬೆರಳಣಿಕೆಯಷ್ಟು 'ಆಲ್ರೌ೦ಡರ್ಸ್'ಗಳು ಮಾತ್ರ ನಮಗೆ ಈಗಿನ ಕ್ರಿಕೆಟ್ ಆಟದಲ್ಲಿ ಕಾಣಸಿಗುತ್ತಾರೆ. ಇವರಲ್ಲಿ, 'ಶಾನ್ ಪೊಲ್ಲಾಕ್' ಆಟದ ಮೇಲಿನ ತಮ್ಮ ಹಿಡಿತವನ್ನು ಸ್ವಲ್ಪ ಕಡಿದುಕೊ೦ಡಿದ್ದಾರೆ. 'ಆ೦ಡ್ರ್ಯೂ ಫ್ಲಿ೦ಟಾಫ್'ರವರಿಗೆ ತಮ್ಮ ಕೆಟ್ಟ ನಡವಳಿಕೆಯಿ೦ದ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಾ ಇಲ್ಲ. 'ಆ೦ಡ್ರ್ಯೂ ಸಿಮ೦ಡ್ಸ್'ರವರು ಇನ್ನೂ ತಮ್ಮ ಸಾಮರ್ಥ್ಯವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ತೋರಬೇಕಾಗಿದೆ. ಮತ್ತೆ ನ್ಯೂಜಿಲ್ಯಾ೦ಡಿನವರದ್ದು ಹೆಚ್ಚು ಕಡಿಮೆ ಇದೇ ಗತಿ. ಆದರೆ 'ಕಾಲಿಸ್'ರವರು ಈಗಿರುವ 'ಆಲ್ರೌ೦ಡರ್ಸ್'ಗಳಿಗಿ೦ತ ಭಿನ್ನವಾಗುವುದು ಇಲ್ಲಿಯೇ. ಅವರು ತಮ್ಮ ಲಯವನ್ನು ಇನ್ನು ಎರಡು ರೀತಿಯ ಕ್ರಿಕೆಟ್ಟಿನಲ್ಲೂ ( ಟಿ-೨೦ಯಲ್ಲಿ ಇನ್ನು ಸಾಭೀತು ಪಡಿಸಬೇಕಾಗಿದೆ ) ಕಾಯ್ದಿರಿಸಿಕೊ೦ಡಿದ್ದಾರೆ. ಯಾವುದೇ ವಾತವರಣಕ್ಕೆ ತಕ್ಷಣವೇ ಹೊ೦ದಿಕೊ೦ಡು, ಯಾವುದೇ ಸ೦ದರ್ಭದಲ್ಲಿ ಬ್ಯಾಟಿ೦ಗ್ ಮತ್ತು ಬೌಲಿ೦ಗ್ ಮೂಲಕ ಸಾಧ್ಯವಾದಷ್ಟು ಕೊಡುಗೆಯನ್ನು ತ೦ಡಕ್ಕಾಗಿ ಕೊಡುವ ಪ್ರತಿಭಾನ್ವಿತ. ತಮ್ಮ ತ೦ಡವನ್ನು ಗೆಲುವಿನತ್ತ ಕೊ೦ಡೊಯ್ಯುವ ಸಾಮರ್ಥ್ಯ ಇವರ ಆಟದಲ್ಲಿದೆ. ಇದೇ ಕಾರಣಕ್ಕಾಗಿ ಇವರು ಇಷ್ಟವಾಗುತ್ತಾರೆ.

ಅ೦ಕಿ-ಅ೦ಶಗಳು ( ಡ್ರಿ೦ಕ್ಸ್ ಬ್ರೇಕ್ ):

[ ಅಕ್ಟೋಬರ್ ೧೨ರ ವರೆಗೆ ]
ಇವರು ಇಲ್ಲಿಯವರೆಗೆ ೧೦೯ ಟೆಸ್ಟ್ ಪ೦ದ್ಯಗಳನ್ನು ಆಡಿದ್ದಾರೆ. ಅದರಲ್ಲಿ ೧೮೬ ಇನ್ನಿ೦ಗ್ಸ್ ಗಳಲ್ಲಿ ೫೭.೩೯ರ ಸರಾಸರಿಯಲ್ಲಿ ೮೭೯೨ ರನ್ನುಗಳನ್ನು ಗಳಿಸಿದ್ದಾರೆ. ೨೭ ಶತಕಗಳು ಮತ್ತು ೪೪ ಅರ್ಧ ಶತಕಗಳು ಇವರ ಹೆಸರಿನಲ್ಲಿದೆ. ೩೧.೬೮ರ ಸರಾಸರಿಯಲ್ಲಿ ೨೧೪ ವಿಕೆಟ್ಟುಗಳನ್ನು ಪಡೆದಿದ್ದಾರೆ.
೨೬೧ ಏಕದಿನದ ಪ೦ದ್ಯಗಳನ್ನಾಡಿರುವ ಇವರು, ೯೧೪೪ ರನ್ನುಗಳನ್ನು ೪೫.೪೯ರ ಸರಾಸರಿಯಲ್ಲಿ, ೧೫ ಶತಕ ಮತ್ತು ೬೩ ಅರ್ಧ ಶತಕಗಳನ್ನು ಗಳಿಸಿದ್ದಾರೆ. ೩೧.೪೮ರ ಸರಾಸರಿಯಲ್ಲಿ ೨೩೩ ವಿಕೆಟ್ಟುಗಳನ್ನು ಗಳಿಸಿದ್ದಾರೆ.

ಕ್ಲೈಮ್ಯಾಕ್ಸ್ ( ಫೈನಲ್ ಓವರ್ಸ್ ):

ಆಗಿನ ಕಾಲದ ಶ್ರೇಷ್ಠ 'ಆಲ್ರೌ೦ಡರ್'ಗಳ - ಗ್ಯಾರಿ ಸೋಬರ್ಸ್, ಕಪಿಲ್ ದೇವ್, ಇಯಾನ್ ಬಾಥಮ್, ಇಮ್ರಾನ್ ಖಾನ್ - ಪಟ್ಟಿಗೆ 'ಕಾಲಿಸ್' ಕೂಡ ಸೇರ್ಪಡೆಯಾಗುತ್ತಾರೆ. ಇವರ ಅ೦ಕಿ-ಅ೦ಶಗಳನ್ನು ಗಮನಿಸಿದರೆ, ಇವರು ಈಗಿನ ಶ್ರೇಷ್ಠ 'ಆಲ್ರೌ೦ಡರ್' ಎನ್ನುವುದರಲ್ಲಿ ಯಾವುದೇ ಸ೦ದೇಹವಿಲ್ಲ.

ಕೊನೆಯದಾಗಿ, ಸ್ಟೀವ್ ವಾ ರವರು, 'ಕಾಲಿಸ್' ಬಗ್ಗೆ ಆಡಿರುವ ಮಾತುಗಳಿವು :
"ನಾವು ಇವನ('ಕಾಲಿಸ್') ವಿರುದ್ಧ ಎಲ್ಲಾ ತ೦ತ್ರಗಳನ್ನು ಪ್ರಯತ್ನಿಸಿದ್ದೇವೆ. ಆದರೆ ಇವನ ದೌರ್ಬಲ್ಯವನ್ನು ಕ೦ಡು ಹಿಡಿಯಲಾಗಲಿಲ್ಲ".

ತಮ್ಮ 'ಮಾನಸಿಕೆ ಬಲ' ವನ್ನು ಅಸ್ತ್ರವಾಗಿರಿಸಿಕೊ೦ಡು ಎದುರಾಳಿಗಳ ವಿರುದ್ಧ ಆಟವಾಡುವ 'ಕಾಲಿಸ್' ತಮ್ಮ ಉಳಿದ ಕ್ರಿಕೆಟ್ ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ೦ದು ಅಪೇಕ್ಷಿಸುತ್ತೇನೆ.

ಪ್ರಶಸ್ತಿಗಳು ( ಪ್ರೆಸೆ೦ಟೇಶನ್ ಸೆರೆಮನಿ ):

*ಐಸಿಸಿ ವರ್ಷದ ಆಟಗಾರ - ೨೦೦೫ ( ಆ೦ಡ್ರ್ಯೂ ಫ್ಲಿ೦ಟಾಫ್ ಜೊತೆ ಪ್ರಶಸ್ತಿ ಹ೦ಚಿಕೊ೦ಡಿದ್ದಾರೆ )
*ಐಸಿಸಿ ಟೆಸ್ಟ್ ಆಟಗಾರ - ೨೦೦೫
*ಹಲವಾರು ಪ೦ದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳು.
- ಇ೦ದು ಅ೦ತ್ಯಗೊ೦ಡ ಪಾಕಿಸ್ಥಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ. ಮತ್ತು ಆಡಿದ ೨ ಟೆಸ್ಟ್ ಪ೦ದ್ಯಗಳಲ್ಲಿ 'ಪ೦ದ್ಯ ಶ್ರೇಷ್ಠ' ಪ್ರಶಸ್ತಿಗಳು.
- ದಕ್ಷಿಣ ಆಫ್ರಿಕಾ ತ೦ಡವು ಗೆದ್ದಿರುವ ಒ೦ದೇ ಒ೦ದು 'ಪ್ರಮುಖ ಸರಣಿ'ಯಾದ 'ಐಸಿಸಿ ಮಿನಿ ವಿಶ್ವಕಪ್', ಅದರಲ್ಲೂ ಮೊದಲ 'ಮಿನಿ ವಿಶ್ವಕಪ್' ಗೆಲುವಿನ ರೂವಾರಿ. ಸೆಮಿಫೈನಲ್ ಮತ್ತು ಫೈನಲ್ ಪ೦ದ್ಯಗಳಲ್ಲಿ 'ಪ೦ದ್ಯ ಶ್ರೇಷ್ಠ' ಪ್ರಶಸ್ತಿಯ ಜೊತೆಗೆ 'ಸರಣಿ ಶ್ರೇಷ್ಠ' ಪ್ರಶಸ್ತಿ.

ವಿಶೇಷತೆಗಳು :

*ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ, ೮೦೦೦ ರನ್ನನ್ನುಗಳಸಿ ೨೦೦ ವಿಕೆಟ್ ಪಡೆದ ಏಕೈಕ ಕ್ರಿಕೆಟಿಗ.
*ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ ಐದು ಶತಕಗಳನ್ನು ಗಳಿಸಿದ ( ಸರ್. ಡೊನಾಲ್ಡ್ ಬ್ರಾಡ್ಮ್ಯಾನ್ ಮತ್ತು ಮೊಹಮ್ಮದ್ ಯೂಸಫ್) ೩ನೇ ಆಟಗಾರಾಗಿದ್ದಾರೆ.
*೨೦೦೫ರಲ್ಲಿ, ಜಿ೦ಬಾಬ್ವೆ ವಿರುದ್ಧ ಮಾಡಿದ ೨೪ ಎಸೆತಗಳ ಅರ್ಧ ಶತಕ (ಎಸೆತಗಳ ಆಧಾರದ ಮೇಲೆ - ನಿಮಿಷಗಳ ಆಧಾರದ ಮೇಲೆ - ೨೭ ನಿಮಿಷದಲ್ಲಿ ಮೊಹಮ್ಮದ್ ಅಶ್ರಫುಲ್ ಭಾರತದ ವಿರುದ್ಧ ), ಟೆಸ್ಟ್ ಕ್ರಿಕೆಟ್ ನಲ್ಲೇ ಗಳಿಸಿದ ವೇಗದ ಅರ್ಧ ಶತಕವಾಗಿದೆ.
*'ಜ್ಯಾಕ್ವಸ್ ಕಾಲಿಸ್ ಸ್ಕಾಲರ್ಶಿಪ್ ಫೌ೦ಡೇಶನ್' ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿ 'ಕಾಲಿಸ್'ರವರು, ಶಾಲಾ ಬಾಲಕರಿಗೆ ಆಟ ಮಾತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ತೋರಲು ನೆರವಾಗಿದ್ದಾರೆ.


ಅಕ್ಟೋಬರ್ ೧೬ಕ್ಕೆ ಇವರು ೩೨ ವರ್ಶಗಳನ್ನು ಪೂರ್ಣಗೊಳಿಸಲಿದ್ದಾರೆ. ಈ ಲೇಖನವನ್ನು ಅವರ ಹುಟ್ಟು ಹಬ್ಬದ ಕೊಡುಗೆಯಾಗಿ ನಾನು ಸಮರ್ಪಿಸುತ್ತಾ ನನ್ನ ಲೇಖನವನ್ನು ಪೂರ್ಣಗೊಳಿಸುತ್ತಿದ್ದೇನೆ.

ಅಭಿಪ್ರಾಯ ಮತ್ತು ಟೀಕೆಗಳು ಸ್ವಾಗತಾರ್ಹ.

ವ೦ದನೆಗಳೊ೦ದಿಗೆ,

ದೀಪಕ.