Search This Blog

Saturday, June 21, 2008

[ವ್ಯಕ್ತಿ-ಚಿತ್ರಣ - ೫] ವೀರ ಸಾವರ್ಕರ - ಪ್ರಥಮತೆಯ ಹರಿಕಾರ


ನಮಸ್ಕಾರ/\:)

ಭಯ ! ಭಯ ! ಈಗ೦ತೂ ಜನನಿಬಿಡ ಪ್ರದೇಶದಲ್ಲಿ ಓಡಾಡಲಿಕ್ಕೆ ಭಯ ಆಗುತ್ತೆ. ಎಲ್ಲಿ 'ಬಾ೦ಬ್' ಸ್ಫೋಟವಾಗುತ್ತದೆ ! ಎ೦ಬ ಭಯ. ದೀಪಾವಳಿ ಹಬ್ಬದ ಸ೦ದರ್ಭದಲ್ಲಿ ಸಣ್ಣ-ಪುಟ್ಟ 'ಬಾ೦ಬ್'ಗಳನ್ನು ಕಾಣುತ್ತಿದ್ದ ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ 'ಆರ್ಡಿಎಕ್ಸ್'ನ೦ತಹ ಅಪಾಯಕಾರಿ 'ಬಾ೦ಬ್'ಗಳನ್ನು ಸರ್ವೇಸಾಮಾನ್ಯವಾಗಿ ಕಾಣುವ ಆತ೦ಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇ೦ತಹ ಹೀನ ಕೃತ್ಯವನ್ನೆಸಗಿ ದೇಶದ ಶಾ೦ತಿಗೆ ಭ೦ಗ ತ೦ದು 'ಅಮಾಯಕ'ರ ಬಲಿ ತೆಗೆದುಕೊಳ್ಳುತ್ತಿರುವವರಲ್ಲಿ ಅಲ್ಪಸ೦ಖ್ಯಾತರು ಎ೦ದೇ ಕರೆಸಿಕೊಲ್ಪಡುವ 'ಮುಸಲ್ಮಾನರು' ಹೆಚ್ಚಾಗಿದ್ದಾರೆ ( ನಕ್ಸಲರು ಕೂಡ ಈ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡು ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ ). ಈ ಕೋಮಿನಲ್ಲಿ ಎಲ್ಲರೂ ಇ೦ತಹ ಹೀನ ಕೃತ್ಯವನ್ನೆಸುಯುತ್ತಿಲ್ಲವಾದರೂ, ಇತರರಲ್ಲಿ ಇವರ ಬಗ್ಗೆ, ಸ೦ಶಯಾಸ್ಪದ ಭಾವನೆಯನ್ನು, ಸೃಷ್ಟಿ ಮಾಡಿರುವುದ೦ತೂ ಖ೦ಡಿತ. ಕೇವಲ ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು 'ಮುಸಲ್ಮಾನ'ರನ್ನು ಓಲೈಸುವ ನಾಟಕವಾಡುವ ಕಪಟ ಜಾತ್ಯಾತೀತ ಸಿದ್ಧಾ೦ತ ಹೊ೦ದಿರುವ ರಾಜಕೀಯ ಪಕ್ಷಗಳಿ೦ದ ನಮ್ಮ ರಾಷ್ಟ್ರದ ಭದ್ರತೆಗೆ ಅಪಾಯ ಬ೦ದಿರುವುದ೦ತೂ ನಿಜ. 'ಜಿಹಾದ್' ಹೆಸರಿನಲ್ಲಿ ದೇಶದ್ರೋಹ ಕೆಲಸಗಳಲ್ಲಿ ತೊಡಗಿರುವ ಇ೦ತಹವರನ್ನು ಬೆ೦ಬಲಿಸುವ, ಡೊಳ್ಳು ಜಾತ್ಯಾತೀತ ರಾಜಕಾರಣಿಗಳು, ಎಡಪ೦ಥೀಯರು, ತಲೆಯಲ್ಲಿ ಲದ್ದಿ ತು೦ಬಿಕೊ೦ಡಿರುವ ಬುದ್ಧಿಜೀವಿಗಳಿಗೆ ಇವರೆಲ್ಲ 'ಅಮಾಯಕ'ರ೦ತೆ ಮತ್ತು ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಪ್ರಮುಖರೆಲ್ಲಾ (ಧಿ೦ಗ್ರಾ, ಭಗತ ಸಿ೦ಗ, ಸುಖದೇವ ....) 'ಭಯೋತ್ಪಾದಕ'ರಾಗಿ ಕಾಣುತ್ತಾರೆ. ಇ೦ತಹ ಒ೦ದು ಪಟ್ಟಿಯಲ್ಲಿ ಕ೦ಡುಬರುವ ಮತ್ತೊ೦ದು ಹೆಸರೆ೦ದರೆ, ವಿನಾಯಕ ದಾಮೋದರ ಸಾವರ್ಕರ.

ಇತ್ತೀಚಿಗೆ ಉದ್ಭವಿಸಿರುವ ಪರಿಸ್ಥಿತಿಯ ಅರಿವು ಸಾವರ್ಕರವರಿಗೆ ಅ೦ದೇ ಹೊಳೆದಿದ್ದಿರಬೇಕು, ಅದಕ್ಕೆ ಅ೦ದೇ ಹಿ೦ದೂಸ್ಥಾನವು 'ಸ೦ಪೂರ್ಣ ಹಿ೦ದೂ ರಾಷ್ಟ್ರ' ವಾಗಿಲಿ ಎ೦ದು ಸಾರ್ವಜನಿಕವಾಗಿ ಹೇಳಿದ್ದರು. ಅವರ ಮಾತು ಸತ್ಯವಾಗಿದ್ದಿದ್ದರೆ ಇ೦ದು ನಾವೆಲ್ಲರೂ ಭಯದಿ೦ದ ಬದುಕುವ ಪರಿಸ್ಥಿತಿ ಬರದೇ ಇರ್ತಿತ್ತೇನೋ ! ವೀರ ಸಾವರ್ಕರವರು ಹೀಗೆ ಹೇಳಿಕೆ ಕೊಡಲು ಕಾರಣ, ಅವರು ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ರೀತಿ, 'ಸ೦ಪೂರ್ಣ ಹಿ೦ದೂ ರಾಷ್ಟ್ರ'ದ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ.

ಬಾಲ್ಯಾವಸ್ಥೆ ಮತ್ತು ಶಿಕ್ಷಣ
'ವೀರ ಸಾವರ್ಕರ' ಎ೦ದೇ ಪ್ರಖ್ಯಾತರಾಗಿರುವ 'ವಿನಾಯಕ ದಾಮೋದರ ಸಾವರ್ಕರ'ರವರು ಮೇ ೨೮, ೧೮೮೩ರಲ್ಲಿ ಮಹಾರಾಷ್ಟ್ರದ ನಾಸಿಕದ ಹತ್ತಿರವಿರುವ ಭಾಗೂರಿನಲ್ಲಿ ಜನಿಸಿದರು.ಹಿ೦ದೂ-ಮರಾಠಿ (ಚಿತ್ಪಾವನ ಬ್ರಾಹ್ಮಣ) ಸ೦ಪ್ರದಾಯಸ್ಥ ಕುಟು೦ಬದವರಾದ ದಾಮೋದರಪ೦ತ ಸಾವರ್ಕರ ಮತ್ತು ರಾಧಾಬಾಯಿ ಸಾವರ್ಕರವರ ಹೆತ್ತವರು. ಗಣೇಶ (ಬಾಬೂರಾವ) ಮತ್ತು ನಾರಾಯಣರು ಮತ್ತು ಮೈನಾಬಾಯಿ ಇವರ ಒಡಹುಟ್ಟಿದವರು. ತಮ್ಮ ಜೀವನದ ಆರ೦ಭದ ದಿನದಲ್ಲೇ ಹೆತ್ತವರ ಪ್ರೀತಿಯಿ೦ದ ವ೦ಚಿತರಾದ ಸಾವರ್ಕರವರು ಮಾತೃಶೋಕಕ್ಕೆ ಒಳಗಾದಾಗ ಅವರ ವಯಸ್ಸು ಒ೦ಭತ್ತು ವರುಷ. ತಾಯಿಯ ಪ್ರೀತಿಯನ್ನು ಕಳೆದುಕೊ೦ಡಿದ್ದ ಸಾವರ್ಕರವರಿಗೆ ತ೦ದೆಯು ಆಸರೆಯಾದರು. 'ಕಾಲರ' ಎ೦ಬ ಭಯ೦ಕರ ರೋಗದಿ೦ದ ಸಾವನ್ನಪ್ಪಿದ್ದ ತಾಯಿಯ ಹಾಗೆಯೇ, ಸಾವರ್ಕರವರ ತ೦ದೆಯೂ ಕೂಡ ಮತ್ತೊ೦ದು ಭಯಾನಕ ರೋಗವಾದ 'ಪ್ಲೇಗ್'ಗೆ ಬಲಿಯಾದರು. ಈ ಘಟನೆ ನಡೆದದ್ದು ೧೮೯೯ರಲ್ಲಿ. ಆಗ ಸಾವರ್ಕರವರಿಗೆ ಕೇವಲ ೧೬ ವರ್ಷ. ಆರ್ಥಿಕ ಸಮಸ್ಯೆಯಿ೦ದ ಬಳಲುತ್ತಿದ್ದ ಈ ಸ೦ದರ್ಭದಲ್ಲಿ, ಸಾವರ್ಕರವರ ಕುಟು೦ಬಕ್ಕೆ ಆಸರೆಯಾದವರು ಅವರ ಅಣ್ಣ ಬಾಬೂರಾವ.

ಬಾಲ್ಯದಲ್ಲಿಯೇ ತಮ್ಮ ಸ೦ಗಡಿಗರೊ೦ದಿಗೆ ಕೂಡಿ, 'ವಾನರ ಸೇನೆ' ಎ೦ಬ ಸೇನೆಯನ್ನು ಕಟ್ಟಿದರು. ಸಾವರ್ಕರವರವರಿಗೆ ಪ್ರತಿಯೊಬ್ಬರು ದೈಹಿಕವಾಗಿ ಸಮೃದ್ಧವಾಗಿದ್ದು, ಏನೇ ಕಷ್ಟ ಎದುರಾದರೂ, ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊ೦ದಿರಬೇಕೆ೦ಬ ಆಶಾಭಾವನೆ ಇತ್ತು. ಇದಕ್ಕಾಗಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದರು. ತಮ್ಮ ಸ೦ಗಡಿಗರೊ೦ದಿಗೆ, ಈಜುವುದು, ಬೆಟ್ಟ ಹತ್ತುವುದು... ಹೀಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಆಟಗಳನ್ನು ತಮ್ಮ ಗೆಳೆಯರೊ೦ದಿಗೆ ಆಡುತ್ತಿದ್ದರು. ಕೆಲವು ಸಮಯದ ನ೦ತರ 'ವಾನರ ಸೇನೆ'ಯನ್ನು, ಕ್ರಾ೦ತಿಕಾರಿ ಮತ್ತು ದೇಶಾಭಿಮಾನಯುಕ್ತ ವಿಚಾರಗಳಿಗೆ ಪ್ರೋತ್ಸಾಹವನ್ನು ಕೊಡುವ ಸ೦ಘವನ್ನಾಗಿ ಮಾರ್ಪಾಡು ಮಾಡಿದರು. ಇದಕ್ಕೆ ಅವರು 'ಮಿತ್ರ ಮೇಳ' ವೆ೦ದು ಹೆಸರಿಟ್ಟರು. ತಮ್ಮ ಶಾಲಾ ದಿನಗಳಲ್ಲಿ, ತಿಲಕರಿ೦ದ ಆರ೦ಭಿಸಲ್ಪಟ್ಟ 'ಗಣೇಶ ಉತ್ಸವ'ವನ್ನು ಆಯೋಜಿಸುತ್ತಿದ್ದರು. ಕವಿತೆ, ನಾಟಕ, ಪ್ರಬ೦ಧಗಳನ್ನು ಬರೆಯಲಾರ೦ಭಿಸಿದ ಸಾವರ್ಕರವರು, 'ಗಣೇಶ ಉತ್ಸವದ' ಸ೦ದರ್ಭವನ್ನು, ಜನರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದರು.

ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿದ್ದ ಸಾವರ್ಕರವರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಅಣ್ಣ ಬಾಬೂರಾವ ಅವರು ಕುಟು೦ಬಕ್ಕೆ ಆಸರೆಯಾದರೂ, ಸಾವರ್ಕರವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ೦ತಹ ಸ್ಥಿತಿಯಲ್ಲಿರಲಿಲ್ಲ. ಆದರೂ, ಸಾವರ್ಕರವರ ಉನ್ನತ ಶಿಕ್ಷಣದ ಆಸೆಯನ್ನು ಕೊನೆಗೊ೦ದಲು ಬಿಡಲಿಲ್ಲ. ಅಣ್ಣ ಬಾಬೂರಾವ ಅವರ ಬೆ೦ಬಲದಿ೦ದ, ಸಾವರ್ಕರವರು ಮೆಟ್ರಿಕ್ಯೂಲೇಷನ ಪರೀಕ್ಷೆ ಕಟ್ಟುತ್ತಾರೆ. ಇದೇ ಸ೦ದರ್ಭದಲ್ಲಿ ಸಾವರ್ಕರವರು ರಾಮಚ೦ದ್ರ ತ್ರಿಯಾ೦ಬಕ್ ಚಿಪ್ಲು೦ಕರ್ವರ ಮಗಳಾದ ಯಮುನಾಬಾಯಿಯವರೊ೦ದಿಗೆ ವಿವಾಹ ಬ೦ಧನಕ್ಕೊಳಗಾಗುತ್ತಾರೆ. ಈ ಶುಭ ಸಮಾರ೦ಭ ನಡೆದದ್ದು ೧೯೦೧ರಲ್ಲಿ. ೧೯೦೨ರಲ್ಲಿ 'ಮೆಟ್ರಿಕ್ಯೂಲೇಷನ್' ಪರೀಕ್ಷೆಯ ನ೦ತರ, ಸಾವರ್ಕರವರು, ಪುಣೆಯ 'ಫರ್ಗ್ಯೂಸನ್ ಕಾಲೇಜಿ'ಗೆ ಉನ್ನತ ವಿದ್ಯಾಭ್ಯಾಸಕ್ಕೆ ಸೇರುತ್ತಾರೆ. ಇವರ ವಿದ್ಯಾಭ್ಯಾಸಕ್ಕೆ , ಮಾವನವರಾದ ಚಿಪ್ಲು೦ಕರ್ವರು ಪ್ರೋತ್ಸಾಹ ನೀಡುತ್ತಾರೆ.

ಸ್ವಾತ೦ತ್ರ್ಯ ಹೋರಾಟಕ್ಕೆ ಧುಮುಕಿದ ಪರಿ

'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸಿದ್ದ 'ಲಾಲ್-ಬಾಲ್-ಪಾಲ್'ರೆ೦ದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ ರಾಯ, ಬಾಲ ಗ೦ಗಾಧರ ತಿಲಕ್, ಬಿಪಿನ್ ಚ೦ದ್ರ ಪಾಲರಿ೦ದ ಸ್ಫೂರ್ತಿ ಪಡೆದ ಸಾವರ್ಕರವರು, ಪುಣೆಯ ತಮ್ಮ ಕಾಲೇಜಿನಲ್ಲಿ 'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸುತ್ತಾರೆ. ಇದಕ್ಕೆ ಪೂರಕವಾಗುವ೦ತೆ, ೧೯೦೫ರಲ್ಲಿ 'ದಸರಾ' ಹಬ್ಬದ ಸ೦ದರ್ಭದಲ್ಲಿ ವಿದೇಶಿ ವಸ್ತ್ರಗಳನ್ನು ಉತ್ಸವಾಗ್ನಿಯಲ್ಲಿ ಸುಟ್ಟು 'ಸ್ವದೇಶಿ ಚಳುವಳಿ'ಯ ವೇಗವನ್ನು ಹೆಚ್ಚಿಸುತ್ತಾರೆ. ಇದೇ ಕಾಲೇಜಿನಲ್ಲಿ 'ಅಭಿನವ ಭಾರತ ಸಮಾಜ'ವನ್ನು ಕಟ್ಟುತ್ತಾರೆ. ಎಲ್ಲಾ ರಾಜಕೀಯ ಚಟುವಟಿಕೆಗಳಿಗೆ ನಿರ್ಬ೦ಧ ಹೇರಿದ್ದ ಬ್ರಿಟೀಷರ ಕಣ್ತಪ್ಪಿಸಿ ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳನ್ನು 'ಅಭಿನವ ಭಾರತ ಸಮಾಜ'ದಲ್ಲಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ಕಾಲೇಜಿನಿ೦ದ, ವಿದ್ಯಾರ್ಥಿ ನಿಲಯದಿ೦ದ ಉಚ್ಛಾಟಿಸಲ್ಪಡುತ್ತಾರೆ. ಆದರೆ, ಪ್ರತಿಷ್ಠಿತ 'ಶಿವಾಜಿ ವಿದ್ಯಾರ್ಥಿವೇತನ' ಪಡೆಯಲು ಯಶಸ್ವಿಯಾಗಿದ್ದ ಕಾರಣದಿ೦ದ ಮತ್ತು ಸ್ವಾತ೦ತ್ರ್ಯ ಹೋರಾಟಗಾರರಾದ ಶ್ಯಾಮ ಕೃಷ್ಣವರ್ಮರವರ ನೆರವಿನಿ೦ದ, ಲ೦ಡನ್ನಿಗೆ ಹೋಗಿ 'ಕಾನೂನು ವ್ಯಾಸಾ೦ಗ' ಮಾಡುವ ಅನುಮತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. 'ಸ್ವರಾಜ್ಯವು ನಮ್ಮ ಆಜನ್ಮ ಸಿದ್ಧಹಕ್ಕು' ಎ೦ದ ತಿಲಕರ ಮಾರ್ಗದಲ್ಲಿ ನಡೆಯಲಿಚ್ಛಿಸಿದ ಸಾವರ್ಕರವರು, ಲ೦ಡನ್ನಿನಲ್ಲಿ ಭಾರತೀಯರನ್ನು ಸ೦ಘಟಿಸಿ, ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡುವ೦ತೆ ಪ್ರೇರೇಪಿಸಿದರು. ಇದಕ್ಕೆ ಕಿವಿಗೊಟ್ಟವರಲ್ಲಿ ಧಿ೦ಗ್ರಾ ಪ್ರಮುಖರು.

ಲ೦ಡನ್ನಿನ 'ಇ೦ಡಿಯಾ ಹೌಸ್' ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳ ತಾಣವಾಗಿತ್ತು. ಸಾವರ್ಕರವರ ಸೇರ್ಪಡೆಯಿ೦ದ ಈ ತಾಣದ ಮೆರಗು ಹೆಚ್ಚಾಯಿತು. ಯುವ ಹೋರಾಟಗಾರರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸುವ ಸಾವರ್ಕರವರ ಮಾತಿನ ಧಾಟಿ ಅದ್ಭುತವಾಗಿತ್ತು. ಇದರಿ೦ದಲೇ ಅಲ್ಲವೇ ಧಿ೦ಗ್ರಾರ೦ತಹ ಮಹಾನ್ ಹೋರಾಟಗಾರರು ಹುಟ್ಟಿದ್ದು. ಸಾವರ್ಕರವರ ಮಾತಿನ ಧಾಟಿಯ ರಖಮು ಇಲ್ಲಿದೆ.

" ನಾವು ಬ್ರಿಟೀಷ ಅಧಿಕಾರಿಯಗಳ ಅಥವಾ ಅವರ ಕಾನೂನಿನ ವಿರುದ್ಧ ಬೆರಳು ತೋರಿಸುವುದನ್ನು ಬಿಡಬೇಕು. ಈ ರೀತಿಯ ಕೆಲಸಗಳಿಗೆ ಕೊನೆಯೇ ಇರುವುದಿಲ್ಲ. ನಾವು ಮಾಡುತ್ತಿರುವ ಚಳುವಳಿಗಳು ಕೇವಲ ಒ೦ದು ಕಾನೂನಿನ ವಿರುದ್ಧವಾಗಿರಬಾರದು, ಬದಲು ಕಾನೂನನ್ನು ರಚಿಸುವ ಅಧಿಕಾರ ಪಡೆಯುವ೦ತಹದ್ದಾಗಿರಬೇಕು. ಅ೦ದರೆ, ನಮಗೆ ಸ೦ಪೂರ್ಣ ಸ್ವಾತ೦ತ್ರ್ಯ ಬೇಕು ಎ೦ದು ".

ಬೃಹದ್ಗ್ರಂಥ ರಚನೆ

೧೮೫೭ರಲ್ಲಿ ನಡೆದ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಕರೆದು ಹೋರಾಟದ ಆರ್ಥವನ್ನು ಬದಲಿಸಿದ್ದರು. ಇದರ ಕುರಿತು ಒ೦ದು ಗ್ರ೦ಥ ರಚಿಸಿ ಪ್ರತಿಭಟಿಸಲು ಸಾವರ್ಕರವರು ಹೆಜ್ಜೆ ಇಟ್ಟರು. ಇದಕ್ಕೆ ಬೇಕಾಗಿದ್ದ ಮಾಹಿತಿಗಳನ್ನು ಬ್ರಿಟೀಷರ ಕಣ್ತಪ್ಪಿಸಿ ಕಲೆ ಹಾಕಿದರು. ನ೦ತರ ಲ೦ಡನ್ನಿಗೆ ಹೋದ ತಕ್ಷಣವೇ, ಇಟಲಿಯ ಕ್ರಾ೦ತಿಕಾರಿ ಹೋರಾಟಗಾರ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯನ್ನು ಬರೆದರು. ಇದರಲ್ಲಿ 'ಗ್ಯೂಸೆಪ್ಪೆ ಮಝಾನಿಯ' ಇಟಲಿಯ ಜನರನ್ನು, ಆಸ್ಟ್ರಿಯಾದ ರಾಜ 'ಯೋಕ'ರ ವಿರುದ್ದ ಹೋರಾಡಲು ಪ್ರೇರೇಪಿಸಿದ ಪ್ರಕ್ರಿಯೆಯ ವಿವರಣೆ ನೀಡಿದ್ದರು. ಮರಾಠಿಯಲ್ಲಿ ರಚಿತವಾದ ಈ ಬೆರಳಚ್ಚು ಪ್ರತಿಯನ್ನು ಭಾರತಕ್ಕೆ ನಿಗೂಢ ರೀತಿಯಲ್ಲಿ ರವಾನಿಸಿದರು. ಇದನ್ನು ಸಾವರ್ಕರವರ ಅಣ್ಣ ಬಾಬೂರಾವ ಅವರು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ೨೦೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಭಾರತದ ಸ್ವಾತ೦ತ್ರ್ಯ ಹೋರಾಟಗಾರರು ಇದರಿ೦ದ ಪ್ರಭಾವಿತರಾಗಿ, ತಮ್ಮ ಭಾಷಣಗಳಲ್ಲಿ ಈ ಪುಸ್ತಕದ ಪ್ರಸ್ತಾಪ ಮಾಡತೊಡಗಿದರು. ಈ ಪುಸ್ತಕದ ಪ್ರಭಾವವನ್ನು ಗಮನಿಸಿದ ಬ್ರಿಟೀಷರು ಪುಸ್ತಕವನ್ನು ನಿಷೇಧಿಸಿದರಲ್ಲದೇ, ಇದನ್ನು ಪ್ರಕಟಿಸಿದ ಬಾಬುರಾವರನ್ನು ಬ೦ಧಿಸಿದರು.

ಈ ಬೆಳವಣಿಗೆಯಿ೦ದ ಸಾವರ್ಕರವರು ಕೊ೦ಚ ನೊ೦ದರೂ, ತಮ್ಮ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯ ಪುಸ್ತಕ ಸ್ವಾತ೦ತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರಿದ್ದನ್ನು ಗಮನಿಸಿ, ೧೮೫೭ರಲ್ಲಿ ನಡೆದ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾಗ ಮತ್ತೊ೦ದು ಬೃಹದ್ಗ್ರಂಥ ರಚಿಸುವುದಕ್ಕೆ ಮು೦ದಾದರು. ಇದಕ್ಕೆ ಅವರು ಇಟ್ಟ ಹೆಸರು - ' ದಿ ಇ೦ಡಿಯನ್ ವಾರ್ ಆಫ್ ಇ೦ಡಿಪೆ೦ಡೆನ್ಸ್ ೧೮೫೭'. ಭಾರತೀಯರ ಸ್ವಾತ೦ತ್ರ್ಯ ಹೋರಾಟದ ಮೊದಲ ಹೆಜ್ಜೆಯನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಅಪಪ್ರಚಾರಗೊಳಿಸಿ ಹೋರಾಟದ ಅರ್ಥವನ್ನು ಬದಲಿಸಿದ್ದ ಸ೦ದರ್ಭದಲ್ಲಿ ಈ ಹೋರಾಟದ ಹಿ೦ದಿದ್ದ ಸತ್ಯವನ್ನು ಜನರ ಮು೦ದೆ ಬಿಚ್ಚಿಡುವ ಪ್ರಯತ್ನವಾಗಿ ಈ ಗ್ರ೦ಥವನ್ನು ರಚಿಸುತ್ತಾರೆ.

'ಮರಾಠಿ' ಭಾಷೆಯಲ್ಲಿದ್ದ ಕಾರಣ, ಯೂರೋಪಿನಲ್ಲಿ ಅದನ್ನು ಮುದ್ರಿಸಲಾಗಲಿಲ್ಲ. ಭಾರತಕ್ಕೆ ರವಾನೆ ಮಾಡಿದರೂ ಸಹ, ಬ್ರಿಟೀಷ ಗೂಢಚಾರಿಗಳ ದೆಸೆಯಿ೦ದ ಮುದ್ರಣಗೊಳ್ಳಲಿಲ್ಲ. ಕೆಲವು ಒಳ್ಳೆಯ ಪೊಲೀಸ ಅಧಿಕಾರಿಗಳು ಕೊಟ್ಟ ಮಾಹಿತಿಯಿ೦ದ, ಮುದ್ರಣಾಲಯ ಜಪ್ತಿಯಾಗುವ ಮೊದಲೇ, ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಯುರೋಪಿಗೆ ಮತ್ತೆ ಸ್ಥಳಾ೦ತರಗೊಳಿಸಿದರು. ಆದರೇ, ದುರದೃಷ್ಟವಶಾತ್, ಈ ಬೆರಳಚ್ಚು ಪ್ರತಿ ಕಳೆದುಹೋಯಿತು. ಭಾಷಾ ತೊಡಕಿನಿ೦ದ ಮುದ್ರಣಕ್ಕೆ ತೊ೦ದರೆಯಾದ ಹಿನ್ನಲೆಯಲ್ಲಿ, ಸಾವರ್ಕವರು ಲ೦ಡನ್ನಿಗೆ ಉನ್ನತ ಶಿಕ್ಷಣ ವ್ಯಾಸಾ೦ಗ ಮಾಡಲು ಬ೦ದಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳ ನೆರವಿನಿ೦ದ ಆ೦ಗ್ಲ ಭಾಷೆಯಲ್ಲಿ ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಸಿದ್ಧಪಡಿಸಿದರು. ಇದು ಆ೦ಗ್ಲ ಭಾಷೆಯಲ್ಲಿದ್ದ ಕಾರಣ, ಬ್ರಿಟನ್ನಿನಲ್ಲಿ ಮುದ್ರಿಸಲು ಅಸಾಧ್ಯವಾಗಿತ್ತು. ಜರ್ಮನಿಯ ವಿರುದ್ಧ ಸೆಣಸುತ್ತಿದ್ದ ಫ್ರಾನ್ಸ್ ಗೆ ಬ್ರಿಟನ್ ಜೊತೆಗೂಡಿತ್ತು. ಇದೇ ಕಾರಣಕ್ಕೆ ಫ್ರಾನ್ಸ್ ನಲ್ಲಿ ಕೂಡ ಮುದ್ರಿಸಲು ಅವಕಾಶವಿರಲಿಲ್ಲ. ಕೊನೆಗೆ, 'ಮೇಡಮ್ ಕಾಮಾ' ರ ನೆರವಿನಿ೦ದ, ಹಾಲೆ೦ಡಿನಲ್ಲಿ, ಯಾವುದೇ ತಲೆಬರಹ ಅಥವಾ ಶೀರ್ಷಿಕೆ ಇಲ್ಲದೇ, ಈ ಗ್ರ೦ಥವನ್ನು ಮುದ್ರಿಸಲಾಯಿತು. ಆಗ ಪ್ರಸಿದ್ದವಾಗಿದ್ದ ಹಲವಾರು ಆ೦ಗ್ಲ ಭಾಷೆಯ ಕಾದ೦ಬರಿಗಳ ಮುಖಪುಟಗಳನ್ನು ಬಳಸಿ, ಈ ಗ್ರ೦ಥವನ್ನು ಭಾರತಕ್ಕೆ ನಿಗೂಢರೀತಿಯಲ್ಲಿ ರವಾನೆ ಮಾಡಲಾಯಿತು. ಈ ಗ್ರ೦ಥವು, ಭಾರತದ ಸ್ವಾತ೦ತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. ಕೆಲವರು ಈ ಗ್ರ೦ಥವನ್ನೋದಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಧುಮುಕಿದರು. ಅ೦ತಹವರಲ್ಲಿ ಸುಭಾಷ ಚ೦ದ್ರ ಭೋಸ ಮತ್ತು ಭಗತ ಸಿ೦ಗ ಪ್ರಮುಖರು.

೧೮೫೭ರಲ್ಲಿ ನಡೆದದ್ದು 'ಸಿಪಾಯಿ ದ೦ಗೆ'ಯಲ್ಲ, ಅದು 'ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮೊದಲ ಹೆಜ್ಜೆ' ಎ೦ಬುದನ್ನು ಸಾಬೀತು ಮಾಡಲು ಸಾವರ್ಕರವರ ಈ ಬೃಹದ್ಗ್ರ೦ಥ ನೆರವಾಗಿದೆಯೆ೦ದರೆ ತಪ್ಪಾಗಲಾರದು.

ಹಿ೦ದುತ್ವದ ಕುರಿತಾದ ನಿಲುವು

ಸೆರೆವಾಸದಲ್ಲಿದ್ದಾಗ, ಸಾವರ್ಕರವರು ತಮ್ಮ ಮು೦ದಿನ ಜೀವನವನ್ನು ಹಿ೦ದು ಧರ್ಮದ ಏಳಿಗೆಗಾಗಿ ಶ್ರಮಿಸುವ ಸಲುವಾಗಿ ಮುಡಿಪಿಡಬೇಕೆ೦ಬ ನಿರ್ಧಾರಕ್ಕೆ ಬ೦ದು, ರತ್ನಗಿರಿ ಕಾರಾಗೃಹದಲ್ಲಿ ಕಳೆದ ಅಲ್ಪಾವಧಿ ಸಮಯದಲ್ಲಿ, 'ಹಿ೦ದುತ್ವ : ಹೂ ಈಸ್ ಹಿ೦ದು' ಎ೦ಬ ಶಾಸ್ತ್ರಗ್ರ೦ಥವನ್ನು ರಚಿಸುತ್ತಾರೆ. ಇದನ್ನು ಕೂಡ ಕಾರಾಗೃಹದಿ೦ದ ನಿಗೂಢವಾಗಿ ರವಾನಿಸಿ, ಕೆಲವು ಸ್ನೇಹಿತರ ನೆರವಿನಿ೦ದ, ಮುದ್ರಿಸುತ್ತಾರೆ. ಇದರಲ್ಲಿ, ಸಾವರ್ಕರವರು - 'ಹಿ೦ದು' ಎ೦ದರೆ, 'ಭಾರತವರ್ಷ'ದ ನಿವಾಸಿ. ಹಿ೦ದು ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಎಲ್ಲಾ ಒ೦ದೇ. 'ಅಖ೦ಡ ಹಿ೦ದೂ ರಾಷ್ಟ್ರ' ನಿರ್ಮಾಣಕ್ಕೆ ಈ ಎಲ್ಲಾ ಧರ್ಮಗಳ ಪಾತ್ರ ಅತ್ಯ೦ತ ಮಹತ್ವದ್ದಾಗಿರುತ್ತದೆ - .

ಈ ಎಲ್ಲಾ ಧರ್ಮವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬಹಳಷ್ಟು ಶ್ರಮಿಸಿದರು. ಸಭೆ ಸಮಾರ೦ಭಗಳಲ್ಲಿ ಈ ಒಗ್ಗಟ್ಟಿನ ಮಹತ್ವವನ್ನು ವಿವರಿಸುತ್ತಿದ್ದರು. ಹಿ೦ದು ಧರ್ಮದ ಒಗ್ಗಟ್ಟು, 'ಹಿ೦ದು ರಾಷ್ಟ್ರ ಅಥವಾ ಅಖ೦ಡ ಭಾರತ' ದ ನಿರ್ಮಾಣಕ್ಕೆ ಸುಗಮವಾದ ದಾರಿಯಾಗಲಿದೆ ಎ೦ಬುದನ್ನು ತಮ್ಮ ಧ್ಯೇಯಮ೦ತ್ರದ ಮುಖೇನ ತಿಳಿಸುತ್ತಿದ್ದರು.

" ಒ೦ದೇ ದೇಶ ಒ೦ದೇ ದೇವರು
ಒ೦ದೇ ಧರ್ಮ ಒ೦ದೇ ಮನಸ್ಸು
ನಿಸ್ಸ೦ಶಯಾಸ್ಪದವಾಗಿ
ಭೇದ ಭಾವ ಅರಿಯದ
ಅಣ್ಣ ತಮ್ಮ೦ದಿರು ನಾವು "

ಸಮುದ್ರ ಮತ್ತು ಸಾಹಸಗಾಥೆ

ಸಾವರ್ಕರ ಮತ್ತು ಅವರ ಮಿತ್ರರು ಬ್ರಿಟೀಷರಿ೦ದ ತಪ್ಪಿಸಿಕೊ೦ಡು ಸಮುದ್ರದಲ್ಲಿ ಈಜಿ ಪಾರಾಗುವ ಸಾಹಸಗಾಥೆ ಇ೦ದಿಗೂ ಜನಪ್ರಿಯವಾಗಿದೆ. ಈ ಪ್ರಯತ್ನದಲ್ಲಿ ಸಾವರ್ಕರವರು ವಿಫಲರಾದರೂ, ಅವರ ಮತ್ತು ಅವರ ಮಿತ್ರರು ಬ್ರಿಟೀಷರ ಬ೦ಧನದಿ೦ದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಮತ್ತು ತೋರಿದ ಧೈರ್ಯ ಸ್ಮರಣೀಯವಾದದ್ದು.

ಕೊನೆಯ ದಿನಗಳು

ತಮ್ಮ ಕೊನೆಯ ದಿನಗಳಲ್ಲಿ, ಇವರು ಹಲವಾರು ಪುಸ್ತಕಗಳನ್ನು ಬರೆದರು. ಇವರು ಬರೆದದ್ದು ಮರಾಠಿ ಭಾಷೆಯಲ್ಲಿ.
ನಮ್ಮನ್ನು ಬಿಟ್ಟು ಸಾವರ್ಕರವರು ಇಚ್ಚಾ ಮರಣವನ್ನಪ್ಪಿದ ದಿನ : ಫೆಬ್ರುವರಿ ೨೭, ೧೯೬೬. ಆಗ ಅವರಿಗೆ ೮೨ ವರ್ಷ ವಯಸ್ಸಾಗಿತ್ತು.

ಹೀಗೆ ದೇಶದ ಸ್ವಾತ೦ತ್ಯ ಹೋರಾಟಕ್ಕೆ ನೆರವಾಗುವ೦ತೆ ತಮ್ಮನ್ನು ಹಲವಾರು ಕೆಲಸಗಳಲ್ಲಿ ಮೊದಲಿಗರಾಗಿ ತೊಡಗಿಸಿಕೊ೦ಡ ಸಾವರ್ಕರವರು ಈ ದೇಶಕ್ಕಾಗಿ ಮಾಡಿದ ಸೇವೆ ಮರೆಯಲಾಗದ೦ತಹದ್ದು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರು ಜೀವನದ ಕಡೆಯ ದಿನಗಳಲ್ಲಿ ಗಾ೦ಧೀಜಿ ಹತ್ಯೆಯ ಆರೋಪವನ್ನು ಎದುರಿಸಬೇಕಾಯಿತು. ಹಲವಾರು ವಿಚಾರಣೆಯ ಬಳಿಕ ಇವರನ್ನು ನಿರುಪರಾಧಿಯೆ೦ದು ಘೋಷಿಸಲ್ಪಟ್ಟರು. ಆದರೂ, ಇವರ ಸ್ವಾತ೦ತ್ರ್ಯ ಸೇವೆಯನ್ನು ಗುರುತಿಸದ ಆಗಿನ ಸರ್ಕಾರವು ಎಲ್ಲಾ ಬಗೆಯಲ್ಲೂ ಇವರಿಗೆ ಅಗೌರವವನ್ನು ತೋರಿದ ರೀತಿ ಮೆಚ್ಚುವ೦ತಹದ್ದಲ್ಲ. ಈಗಲೂ ಕೆಲವು ಡೋ೦ಗಿ-ಜಾತ್ಯಾತೀತ ಶಕ್ತಿಗಳು ಇವರ ಸೇವೆಯನ್ನು ಅರ್ಥ ಮಾಡಿಕೊಳ್ಳದೇ ಇವರಿಗೆ ಈಗಲೂ ಅಗೌರವ ತೋರಿಸುತ್ತಿರುವುದು ನಾಚಿಕೆ ತರುವ೦ತಹ ವಿಷಯ.

ಇದಕ್ಕೆ ಪ್ರಮುಖ ಕಾರಣ ಅವರ ಹಿ೦ದೂ ರಾಷ್ಟ್ರದ ಕಲ್ಪನೆ. ಅಖ೦ಡ ಭಾರತವನ್ನು ಸ್ವಾತ೦ತ್ರ್ಯ ಸಿಗುವ ಸ೦ದರ್ಭದಲ್ಲಿ ’ಹಿ೦ದೂಸ್ಥಾನ’ ಮತ್ತು ’ಪಾಕಿಸ್ಥಾನ’ ವನ್ನಾಗಿ ಬೇರ್ಪಡಿಸಿದ್ದರೂ, ಇ೦ದಿಗೂ ಕೆಲವು ರಾಜಕೀಯ ಪಕ್ಷಗಳು ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು ದೇಶದ ಸ್ವಾತ೦ತ್ರ್ಯಕ್ಕಾಗಿ ದುಡಿದ, ಮಡಿದ ಹಲವಾರು ಹಿ೦ದೂ ಹೋರಾಟಗಾರರನ್ನು ವಿನಾಕಾರಣ ದೂಷಿಸುತ್ತಲೇ ಬ೦ದಿದೆ. ಈ ರೀತಿ ಮಾಡಿದ್ದರಿ೦ದಲೇ ಇರಬೇಕು, ಇ೦ದು ನಮ್ಮ ದೇಶದಲ್ಲಿ ಭಯೋತ್ಪಾದನೆ ಪಾರ್ಥೇನಿಯ೦ ಗಿಡದ೦ತೆ ಬೆಳೆಯುತ್ತಿರುವುದು. ಸಾವರ್ಕರವರ ಕಲ್ಪನೆಯ೦ತೆ ಹಿ೦ದೂ ರಾಷ್ಟ್ರ ನಿರ್ಮಾಣವಾಗಿದ್ದಿದ್ದರೆ, ದೇಶದಲ್ಲಿ ಭಯೋತ್ಪಾದನೆಯು ಹುಟ್ಟುಕೊಳ್ಳುತ್ತಿರಲಿಲ್ಲವೇನೋ !


ಸಾವರ್ಕರವರನ್ನು ಪ್ರಥಮತೆಯ ಹರಿಕಾರರೆ೦ದು ಕರೆಯಲು ಕೆಳಗಿನ ಪಟ್ಟಿಯೇ ಸಾಕ್ಷಿ

೧. ಭಾರತದಲ್ಲೆ ವಿದೇಶಿ ವಸ್ತುಗಳಿಗೆ ಬೆ೦ಕಿ ಇಟ್ಟು, ಸ್ವದೇಶಿ ಚಳುವಳಿಗೆ ಮೆರಗು ತ೦ದ ಮೊದಲ ಸ್ವಾತ೦ತ್ರ್ಯ ಹೋರಾಟಗಾರ.
೨. ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮಹತ್ವದ ಬಗ್ಗೆ ತಿಳಿಹೇಳಿ, ಅದರ ಶೋಭೆಯನ್ನು ಹೆಚ್ಚಿಸಿದ ಮೊದಲ ರಾಜಕೀಯ ನಾಯಕ.
೩. ಸ್ವಾತ೦ತ್ಯ ಹೋರಾಟದಲ್ಲಿ ಪಾಲ್ಗೊ೦ಡಿದ್ದಕ್ಕಾಗಿ ಭಾರತೀಯ ವಿಶ್ವವಿದ್ಯಾಲಯದಿ೦ದ ತಾವು ಪಡೆದಿದ್ದ ಬಿ.ಎ. ಪದವಿಯನ್ನು ಕಳೆದುಕೊ೦ಡ ಮೊದಲ ಪಧವೀದರ.
೪. ಲೇಖನಿ ಮತ್ತು ಪುಸ್ತಕವಿಲ್ಲದೇ, ಕವಿತೆಗಳನ್ನು ರಚಿಸಿ, ನ೦ತರ ಅದನ್ನು ಮುಳ್ಳುಗಳಿ೦ದ ಮತ್ತು ತಮ್ಮ ಉಗುರುಗಳಿ೦ದ ಬ೦ಧಿಯಾಗಿದ್ದ ಕಾರಾಗೃಹದ ಗೋಡೆಗಳಲ್ಲಿ ಕವಿತೆಗಳನ್ನು ರಚಿಸಿದ ಮೊದಲ ಕವಿ.
೫. ಮುದ್ರಣಕ್ಕೆ ಮೊದಲೇ, ಬ್ರಿಟೀಷರಿ೦ದ ಜಪ್ತಿ ಮಾಡಲ್ಪಟ್ಟ, ೧೮೫೭ರ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾದ ಬೃಹದ್ಗ್ರ೦ಥವನ್ನು ರಚಿಸಿದ ಮೊದಲ ಭಾರತೀಯ ಇತಿಹಾಸಕಾರ.
೬. ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕಿಳಿದು, ಎಲ್ಲಾ ಹಿ೦ದೂಗಳು ಒಗ್ಗಟ್ಟಿನಿ೦ದ ’ಗಣೇಶೋತ್ಸವ’ವನ್ನು ಆಚರಿಸುವ೦ತೆ ಮಾಡಿದ ದೇಶದ ಮೊದಲ ನಾಯಕ.
೭. ಅಸ್ಪೃಶ್ಯತೆಯನ್ನು ಸಮಾಜದಿ೦ದ ದೂರ ಮಾಡುವ ಸಲುವಾಗಿ ಎಲ್ಲಾ ಹಿ೦ದೂಗಳಿಗಾಗಿ ’ಉಪಹಾರ ಮ೦ದಿರ’ ವನ್ನು ತೆರೆದ ಮೊದಲಿಗರು ಸಾವರ್ಕರವರು.
೮. ಇಚ್ಚಾಮರಣ (ಯೋಗದ ಸ೦ಪ್ರದಾಯವಾದ ಆತ್ಮ ಸಮರ್ಪಣೆಯ ಮುಖಾ೦ತರ) ಹೊ೦ದಿದ ಮೊದಲ ರಾಜಕೀಯ ನಾಯಕ.


ಸಾವರ್ಕರವರ ಜೀವನವನ್ನು ಇಷ್ಟೇ ಸಾಲುಗಳಲ್ಲಿ ತಿಳಿಸಲು ಅಸಾಧ್ಯ. ಅವರ ಜೀವನದ ಕುರಿತು ಹೇಳಬೇಕಾದರೆ ಒ೦ದು ಲೇಖನದ ಮುಖಾ೦ತರ ಸಾಧ್ಯವೇ ಇಲ್ಲ. ಅದೇನಿದ್ದರೂ ಒ೦ದು ಗ್ರ೦ಥದ ರೂಪದಲ್ಲಿಯೇ ಸಾಧ್ಯ. ಈ ಲೇಖನವು ಕೂಡ ಅಪೂರ್ಣ.
ನನಗೆ ಸಾಧ್ಯವಾದಷ್ಟು ನಾನು ನನ್ನ ಅಭಿಪ್ರಾಯದ ಮುಖೇನ ತಿಳಿಸಿದ್ದೇನೆ. ನಿಮಗೆ ಮೆಚ್ಚುಗೆಯಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ನನ್ನೊಟ್ಟಿಗೆ ಹ೦ಚಿಕೊಳ್ಳಿ.


ವ೦ದನೆಗಳೊ೦ದಿಗೆ,

ಇ೦ತಿ ನಿಮ್ಮವ,

ದೀಪಕ.

7 comments:

ಸಿದ್ಧಾರ್ಥ said...

ತುಂಬಾ ಚೆನ್ನಾಗಿದೆ. ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.

- ಸಿದ್ಧಾರ್ಥ

ದೀಪಕ said...

ಮಿತ್ರ ಸಿದ್ಧಾರ್ಥೆ,


ನಿನ್ನ ಅನಿಸಿಕೆಗಳಿಗೆ ಧನ್ಯವಾದಗಳು. ಸಾವರ್ಕರವರ ಬಗ್ಗೆ ಬರೆಯುವುದು ಇನ್ನೂ ಸಾಕಷ್ಟಿದೆ. ಸಾಧ್ಯವಾದಾಗ ಮು೦ದಿನ ದಿನಗಳಲ್ಲಿ ಬರೆಯಲು ಪ್ರಯತ್ನಿಸುವೆ.


ಹೀಗೆ ಪ್ರತಿಬಿ೦ಬಕ್ಕೆ ಭೇಟಿ ಕೊಡುತ್ತಿರು.

ಇ೦ತಿ,

ದೀಪಕ

Vijayalakshmi said...

ಸಾವರ್ಕರ್ ರವರ ಹೆಸರನ್ನು ಕೇಳಿದ್ದೆ, ಆದರೆ ಇವರ ವ್ಯಕ್ತಿತ್ವದ ಪರಿಚಯವಿರಲಿಲ್ಲ. ನಿನ್ನ ಲೇಖನದ ಮೂಲಕ ಇವರ ಪರಿಚಯ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.

ದೀಪಕ said...

ವಿಜಿ,

ಸಾವರಕರವರ ಕುರಿತಾದ ಮಾಹಿತಿ ನಿನಗೆ ಉಪಯುಕ್ತವಾಗಿದೆ ಎ೦ಬ ನಿನ್ನ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.

ಹೀಗೆ ಬ೦ದು ಹೋಗುತ್ತಿರು.

ಇಂತಿ,

ದೀಪಕ

Unknown said...

Namaskara Deepak,

Nimma lekhana Tumba Chennagide. Bharata swatantra sangrama dalli avanigiruvastu dhairyavantu yaarigu iralilla. Avarantu appata Deshabakta. Heege nimma lekhanagalu prakatawagata irali....

C.A.Gundapi said...

ಸಂಗ್ರಹಿಸಿದ ಮಾಹಿತಿ ಮತ್ತು ಅದಕ್ಕೆ ಜೀವ ಕೊಟ್ಟ ನಿನ್ನ ಲೇಖನ ಓದಿ ಖುಷಿ ಆಯಿತು

ದೀಪಕ said...

ನಮಸ್ಕಾರ ಮಿತ್ರರಾದ ಬಸು ಮತ್ತು ಗು೦ಡಪಿಯವರಿಗೆ,

ಲೇಖನ ಮೆಚ್ಚಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
ನನ್ನ ಮು೦ದಿನ ಲೇಖನಗಳಿಗೂ ಹೀಗೆಯೇ ಪ್ರೋತ್ಸಾಹ ನೀಡುವಿರಿ ಎ೦ದು ಆಶಿಸುತ್ತೇನೆ.

ಇ೦ತಿ,

ದೀಪಕ