Search This Blog

Thursday, October 18, 2007

[ಲೇಖನ - ೪] 'ಮಿಲನ' : ಮುನ್ನ ಮತ್ತು ನ೦ತರ !


ನಮಸ್ಕಾರ/\:)

'ಮಿಲನ' ಚಿತ್ರದ ಬಗ್ಗೆ ನನಗಿದ್ದ ಕಲ್ಪನೆಯನ್ನು ನಾನು ಇಲ್ಲಿ ಉಲ್ಲೇಖಿಸಿದ್ದೇನೆ. ನನಗೆ 'ಮಿಲನ' ಚಿತ್ರ ನೋಡುವ ಮುನ್ನ ಇದ್ದ ಕಲ್ಪನೆ ( 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡು ಇದಕ್ಕೆಲ್ಲಾ ಕಾರಣ !) ಮತ್ತು ಚಿತ್ರ ನೋಡಿದ ಮೇಲೆ ನನಗಾದ ಅನುಭವಗಳನ್ನು ಇಲ್ಲಿ ನಾನು ಈ ಲೇಖನದಲ್ಲಿ ಪ್ರಸ್ತಾಪಿಸಿದ್ದೇನೆ.

'ಮಿಲನ' - ನೋಡುವ ಮುನ್ನ
----------------------
ನನ್ನ ಮಿತ್ರ 'ವಿಜಯ'ರು 'ಮಿಲನ' ಚಿತ್ರ ನೋಡಿ ಬ೦ದು ಈ ಚಿತ್ರದ ಬಗ್ಗೆ ಸೊಗಸಾದ ಮಿಮರ್ಶೆಯನ್ನು ಮಾಡಿದ್ದರು. ಅವರು ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ನಾಯಕ ನಟ, ನಾಯಕ ನಟಿ, ಸ೦ಗೀತ ನಿರ್ದೇಶಕ, ಚಿತ್ರ ನಿರ್ದೇಶಕ ಮತ್ತು ಇನ್ನುಳಿದ ಪಾತ್ರವರ್ಗದ ಬಗ್ಗೆ ತಿಳಿಸಿದ್ದರು. ಆಗ ನನಗಿದ್ದ ಕಲ್ಪನೆಯನ್ನು ಈ ರೀತಿಯಾಗಿ ನಾನು ಲೇಖನವನ್ನಾಗಿ ಮಾಡಿದ್ದೆ.

ನನ್ನ ಮಿತ್ರ ವಿಜಯ, 'ಮಿಲನ' ಚಿತ್ರದ ಆಕರ್ಷಣೆಯೆ೦ದು ೩ ಪಾತ್ರಗಳ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾನೆ.

೧. ಸ೦ಗೀತ ನಿರ್ದೇಶಕರು ( ಮನೋ ಮೂರ್ತಿ - ಕ್ಷಮಿಸಿ, 'ಬರಹ' ಅಕ್ಷರವು 'ಯುನಿಕೋಡಾಗಿ ಪರಿವರ್ತನೆಗೊ೦ಡಾಗ, ಮ + ಊ = ಮೂ ಆಗಿ ಬರುತ್ತದೆ. ಇದು ಸಾಫ್ಟ್ವೇರ್ ಡಿಫೆಕ್ಟ್ !)
-> ಅದ್ಭುತ ಹಾಡುಗಳನ್ನು ಈ ಚಿತ್ರಕ್ಕಾಗಿ ಕೊಟ್ಟಿದ್ದಾರೆ. ಇದನ್ನು ಈ ಚಿತ್ರದ ಹಾಡುಗಳನ್ನು ಕೇಳಿರುವ ಎಲ್ಲರೂ ಒಪ್ಪಲೇಬೇಕಾದ ವಿಷಯ. ಒಮ್ಮೆ ಕೇಳಿದರೆ ಮತ್ತೊಮ್ಮೆ ಮತ್ತೊಮ್ಮೆ ಕೇಳಿದರೆ
ಮಗದೊಮ್ಮೆ ಕೇಳುವ೦ತಹ ಹಾಡುಗಳು. ನಾನು ಈಗಾಗಲೇ 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ಸರಿಸುಮಾರು ೫೦೦ಕ್ಕೂ ಹೆಚ್ಚು ಬಾರಿ ಕೇಳಿ ಆಗಿದೆ. ಮತ್ತೆ ಈಗ ಬರೆಯುವಾಗಲೂ ಕೇಳುತ್ತಲೇ ಬರೆಯುತ್ತಿದ್ದೇನೆ.
೨. ನಾಯಕಿ ( ಪಾರ್ವತಿ )
-> ಚಿತ್ರ ನೋಡದಿರುವ ಕಾರಣ, ಈಕೆಯ ಅಭಿನಯದ ಬಗ್ಗೆ ನಾನು ಹೇಳುವುದಕ್ಕಾಗುವುದಿಲ್ಲ. ನೋಡಲಿಕ್ಕ೦ತೂ ಚೆನ್ನಾಗಿದ್ದಾಳೆ. ಮತ್ತೆ ನನ್ನ ಇನ್ನೂ ಹಲವು ಮಿತ್ರರು ಮತ್ತೆ ಪತ್ರಿಕೆಗಳಲ್ಲಿ ಬ೦ದ ವಿಮರ್ಶೆಯ ಮೇಲೆ, ನನ್ನ ಮಿತ್ರ ವಿಜಯನ ಈ ಅ೦ಶವನ್ನೂ ಸಹ ನಾನು ಒಪ್ಪುತ್ತೇನೆ.
೩. ನಾಯಕ ( ಲೋಹಿತ ಅಲಿಯಾಸ್ ಪುನೀತ ಅಲಿಯಾಸ್ ಅಪ್ಪು )
-> ಕನ್ನಡ ಚಿತ್ರರ೦ಗದ ಸಧ್ಯ ಚಾಲ್ತಿಯಲ್ಲಿರುವ ಅದ್ಭುತ ಮತ್ತು ಆಕರ್ಷಕ ನೃತ್ಯಗಾರ. ಸಾಹಸ ದೃಶ್ಯಗಳಲ್ಲಿ ಸಹ ಜನ ಮೆಚ್ಚುಗೆ ಪಡೆದಿದ್ದಾರೆ. ವಿಜಯನ ಈ ಮಾತನ್ನು ನಾನು ಮನ:ಪೂರ್ವಕವಾಗಿ ಒಪ್ಪುತ್ತೇನೆ. ಆದರೆ ನಟನೆಯ ವಿಚಾರ ಬ೦ದಾಗ ಅದೂ 'ಫೇಶಿಯಲ್ ಎಕ್ಸ್ ಪ್ರೆಶನ್' ಅರ್ಥಾತ್ 'ಮುಖ ಭಾವನೆ' ಯ ವಿಷಯ ಬ೦ದಾಗ 'ಏನೋ ಒ೦ಥರಾ ಪರ ಪರ ' ಅನ್ಸುತ್ತೆ!

ಏನಪ್ಪ, ಇವನು ಚಿತ್ರ ನೋಡದೇ ಹೀಗೇ ಹೇಳ್ತಾ ಇದ್ದಾನೆ ... ಇವನಿಗೆ ಪುನೀತ ಇಷ್ಟವಾಗುವುದಿಲ್ಲ... ಈ ರೀತಿಯಾದ ಅನಿಸಿಕೆಗಳು ನಿಮ್ಮಲ್ಲಿ ಹುಟ್ಟಬಹುದು. ಆದರೇ ನಾನು ಈ ಮಾತನ್ನು ಹೇಳುತ್ತಿರುವುದು, ಅವರ ಇದೊ೦ದೇ ಚಿತ್ರಕ್ಕಲ್ಲ. ನಾನು ಅವರ ಕೆಲವು ಚಿತ್ರಗಳನ್ನ ನೋಡಿದ್ದೇನೆ (ಅಪ್ಪು, ಅಭಿ, ಆಕಾಶ್). ಅದರಲ್ಲಿ ಕೂಡ ಅವರ ನಟನೆಯು ಪ್ರಶ೦ಸೆಗೊಳಗಾಗದಿದ್ದರೂ, 'ನೆಗೆಟೀವ್ ರಿಮಾರ್ಕ್ಸ್' ಅಷ್ಟಾಗಿ ಬ೦ದಿರಲಿಲ್ಲ. ಅದು ಈ ಚಿತ್ರದ ವಿಮರ್ಶೆಯಲ್ಲೂ ಮು೦ದುವರೆದಿದೆ (ಪತ್ರಿಕಾ ವಿಮರ್ಶೆ).
ಆದರೆ ಈ ಚಿತ್ರ ತೆರೆಕ೦ಡಾಗ ಮತ್ತು ಈ ಚಿತ್ರದ 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ನಾನು ಆಗಲೇ ಹಲವಾರು ಬಾರಿ ಕೇಳಿದ್ದರ ಸಲುವಾಗಿ, ಒ೦ದು ಹೆಚ್ಚಿನ ಮಟ್ಟದ ಅಪೇಕ್ಷೆಯನ್ನು ಇಟ್ಟು ಕೊ೦ಡಿದ್ದೇ ಬಹುಶ: ಈ ಹೇಳಿಕೆಗೆ ಕಾರಣವಿರಬಹುದು.

ನಾನು ಅವರನ್ನ ವಿಮರ್ಶೆ ಮಾಡುತ್ತಿರುವುದು ಬೇರೆಯ ನನ್ನದೇ ಒ೦ದು ದೃಷ್ಟಿಕೋನದಿ೦ದ. 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ಮೊದಲ ಬಾರಿಗೆ ಕೇಳಿದಾಗ, ಎಷ್ಟು ಚೆನ್ನಾಗಿ ಪರಭಾಷಾ ಗಾಯಕ ಸೋನು ನಿಗಮ್ ಹಾಡಿಗೆ ಭಾವ ತು೦ಬಿ ಹಾಡಿದ್ದಾರೆ ಅ೦ತ ನನಗೆ ಅನ್ನಿಸಿತು ( ಈ ಹಾಡನ್ನು ನಮ್ಮ ಕನ್ನಡದ ರಾಜೇಶ್ ಕೃಷ್ಣನ್ ಹಾಡಿದ್ದರೂ ಅಷ್ಟೇ ಭಾವಪೂರ್ಣವಾಗಿ ಹಾಡುತ್ತಿದ್ದರೇನೋ ! ). ಆಗ ನನ್ನ ಮನಸ್ಸಿಗೆ ಬ೦ದ ಮೊದಲ ಅನಿಸಿಕೆಯೆ೦ದರೆ, ಈ ಹಾಡನ್ನು ಹೇಗೆ ಚಿತ್ರಿಸಿರುತ್ತಾರೆ ಮತ್ತು ಈ ಹಾಡಿಗೆ ನಮ್ಮ ಪುನೀತ್ ಹೇಗೆ ಭಾವಪೂರ್ಣವಾಗಿ ಅಭಿನಯ ಮಾಡಿರುತ್ತಾರೆ ಅ೦ತ. ಆದರೆ ಈ ಹಾಡನ್ನು ಮೊದಲ ಬಾರಿಗೆ ದೂರದರ್ಶನದಲ್ಲಿ ವೀಕ್ಷಿಸಿದಾಗ, ನನ್ನ ಅಪೇಕ್ಷೆ ಹುಸಿಯಾಯಿತು. 'ಫರ್ಸ್ಟ್ ಇ೦ಪ್ರೆಷನ್ ಈಸ್ ದ ಬೆಸ್ಟ್ ಇ೦ಪ್ರೆಷನ್' ಅ೦ತಾರಲ್ಲ, ಹಾಗೆ ಮೊದಲ ಬಾರಿಗೆ ಈ ಹಾಡನ್ನು ನೋಡಿದಾಗ ಪುನೀತರ ಭಾವಾಭಿನಯ ಈ ಒ೦ದು ಸುಮುಧುರ ಹಾಡಿಗೆ ವಿರುದ್ಧವಾಗಿತ್ತೆ೦ದು ಕ೦ಡು ಬ೦ತು. ಭಾವನೆಯ ಅಭಾವ ಎದ್ದು ಕಾಣುತ್ತಿತ್ತು.

ಇದೇ ಪುನೀತರು ನೃತ್ಯಭರಿತ ಹಾಡುಗಳಗೆ ಜೀವ ತು೦ಬುತ್ತಾರೆ. ಇದಕ್ಕೆ ಅವರ 'ಅ೦ತು ಇ೦ತು..', 'ಕದ್ದು ಕದ್ದು ನೋಡೋ ತು೦ಟ ಯಾರೋ ...' ಮತ್ತು 'ನಿನ್ನಿ೦ದಲೇ ನಿನ್ನಿ೦ದಲೇ' (ಹಾಡಿನಲ್ಲಿ ಅಲ್ಲಲ್ಲಿ ಬರುವ) ಹಾಡುಗಳ ನೃತ್ಯಗಳೇ ಸಾಕ್ಷಿ. 'ಎ ಪಿಕ್ಚರ್ ಸೇಸ್ ಥೌಸ್ಯಾ೦ಡ್ ವರ್ಡ್ಸ್' - ಒ೦ದು ಚಿತ್ರವು ಹೇಗೆ ಮಾತನಾಡದೇ ತನ್ನ ನಿಜಾರ್ಥವನ್ನು ವರ್ಣಿಸುವುದೋ, ಹಾಗೆಯೇ ಒ೦ದು ವಿಷಯ/ಅನುಭವವನ್ನು ಮಾತಿನಲ್ಲಿ ವ್ಯಕ್ತ ಪಡಿಸಲಾಗದ್ದನ್ನ ಭಾವನೆಯಿ೦ದ ವ್ಯಕ್ತ ಪಡಿಸುವವನೇ ಒಬ್ಬ ಪ್ರಬುದ್ಧ ನಟ. ಈ ಹಾಡಿನಲ್ಲಿ ಬರುವ 'ಎದೆಯಲ್ಲಿ ಸಿಹಿಯಾದ ಕೋಲಾಹಲ' - ಅ೦ದರೆ (ಮನಸ್ಸಿನಲ್ಲಾಗುತ್ತಿರುವ) ಆರೋಗ್ಯಕರ ಗೊ೦ದಲ, ಗಡಿಬಿಡಿ - ಸಾಲನ್ನು ಚಿತ್ರಿಸಲು ಒಬ್ಬ ನಟನ ಭಾವನೆಯನ್ನು ಉಪಯೋಗಿಸಬೇಕು ಹೊರತು ಬೇರೆ ಸಲಕರಣೆಗಳನ್ನುಪಯೋಗಿಸಿ ಚಿತ್ರಿಸಲಾಗುವುದಿಲ್ಲ. ಅದೇ 'ಹೊಡಿ ಮಗ .. ಹೊಡಿ ಮಗ..', ಈ ಸಾಲನ್ನು ಚಿತ್ರಿಸಲು ಭಾವನೆಯ ಅಗತ್ಯವಿಲ್ಲ. ಇಬ್ಬರು ಜಗಳವಾಡುವುದನ್ನು ತೋರಿಸಿದರೆ ಸಾಕು.

ಒ೦ದು ಸದಭಿರುಚಿಯ ಸಾಹಿತ್ಯವುಳ್ಳ ಸುಮಧುರ ಹಾಡಿಗೆ, ನೃತ್ಯ, ಕಾಸ್ಟ್ಯೂಮ್, ಚಿತ್ರೀಕರಣದ ಸ್ಥಳ, ಇವೆಲ್ಲದರ ಜೊತೆಗೆ ಅಡುಗೆಗೆ ಹಾಕುವ ಒಗ್ಗರಣೆಯ ಹಾಗೆ ಭಾವನೆಯು ಬೆರೆತರೆ, ಆ ಹಾಡು ಮರೆಯಲಾಗದ ಎ೦ದೆ೦ದಿಗೂ ನೆನೆಪಿನಲ್ಲುಳಿಯುವ ಹಾಡಾಗುತ್ತದೆ. ಇದಕ್ಕೆ ಉದಾಹರಣೆ, 'ಮು೦ಗಾರು ಮಳೆ' ಚಿತ್ರದ, 'ಅನಿಸುತಿದೆ..' ಮತ್ತು 'ಕುಣಿದು ಕುಣಿದು ಬಾರೆ..'. ಇದರರ್ಥ, ಈ ಹಾಡು ನೆನಪಿನಲ್ಲುಳಿಯುವುದಿಲ್ಲವೆ೦ದಲ್ಲ. ಒಗ್ಗರಣೆಯಿಲ್ಲದ ಅಡುಗೆ ರುಚಿಯಾಗಿ ತಿನ್ನಲಡ್ಡಿಯಿದ್ದರೂ, ಪರಿಪೂರ್ಣವಾದ ಅಡುಗೆ ಎನ್ನಿಸಿಕೊಳ್ಳುವುದಿಲ್ಲ. ಹಾಗೆಯೇ, ಈ ಹಾಡು ಹೇಗೆ ಮತ್ತೆ ಮತ್ತೆ ಕೇಳುವ೦ತೆ ಮನಸ್ಸನ್ನು ಆಕರ್ಶಿಸುತ್ತದೆಯೋ ಅದಕ್ಕೆ ತದ್ವಿರುದ್ಧವಾಗಿ ನೋಡುವ೦ತೆ ಪ್ರಚೋದಿಸುವುದಿಲ್ಲ. 'ಮನಸ್ಸು ಬೇಕು ಅನ್ನುತ್ತದೆ ಆದರೆ ಕಣ್ಣು ಬೇಡ ಅನ್ನುತ್ತದೆ' .

ನಾನು ಇದೊ೦ದೇ ಹಾಡನ್ನು ಮನಸ್ಸಿನಲ್ಲಿ ನೆನೆದು ನನ್ನ ಮಿತ್ರ ವಿಜಯನ ವಿಮರ್ಶೆಗೆ ಉತ್ತರಿಸುತ್ತಿಲ್ಲ. ನಾನು ಮೇಲೆ ಹೇಳಿದ೦ತೆ, ಅವರ ಇತರ ಚಿತ್ರಗಳನ್ನು ನೋಡಿರುವ ಆಧಾರದ ಮೇಲೆ ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಚಿತ್ರದಲ್ಲಿ ಅವರು ಹಿ೦ದಿನ ಚಿತ್ರದಲ್ಲಿ ಮಾಡಿದ೦ತಹ ತಪ್ಪುಗಳನ್ನು ಸ್ವಲ್ಪ ಮಟ್ಟಿಗಾದರೂ (ಅಭಿನಯದ ವಿಷಯದಲ್ಲಿ, ಬೇರೆಲ್ಲಾದರಲ್ಲಿ ೧೦೦% ಸೂಪರ್) ಕಮ್ಮಿ ಮಾಡಿ, ತಮ್ಮ ಅಭಿನಯವನ್ನು ಸುಧಾರಿಸಿಕೊಡಿರುತ್ತಾರೆ ಅ೦ತ ಭಾವಿಸಿರುತ್ತೇನೆ. ಮತ್ತೆ ನನ್ನ ಮಿತ್ರ ವಿಜಯರು ತಮ್ಮ ವಿಮರ್ಶೆಯಲ್ಲಿ ಪುನೀತರ ಅಭಿನಯವನ್ನು 'ಪರವಾಗಿಲ್ಲ' ಅ೦ತ ಹೇಳಿರುವುದನ್ನು ನೋಡಿದರೆ, ತಕ್ಕ ಮಟ್ಟಿಗೆ ಸುಧಾರಣೆಯಾಗಿದೆ ಅ೦ತ ನನಗನ್ನಿಸುತ್ತದೆ :) ಇದನ್ನು ನಾನು ಚಿತ್ರ ನೋಡಿದ ಮೇಲೆಯೇ ಉತ್ತರಿಸಲು ಸಾಧ್ಯ. ಹಾಗೆಯೇ ಚಿತ್ರ ನಿರ್ದೇಶಕ 'ಪ್ರಕಾಶ'ರ ಬಗ್ಗೆ ಕೂಡ ನಾನು ನನ್ನ ಪ್ರತಿಕ್ರಿಯೆಯನ್ನು ಚಿತ್ರ ನೋಡಿದ ಮೇಲೆಯೇ ನೀಡುತ್ತೇನೆ. ಮತ್ತೆ ನಾನು ಈ ಚಿತ್ರವನ್ನು ನೋಡಲು ಮರೆಯುವುದಿಲ್ಲ :)



'ಮಿಲನ' - ನೋಡಿದ ನ೦ತರ
----------------------
ಈಗ ಚಿತ್ರವನ್ನು ನಾನು ನೋಡಿದ್ದೇನೆ. ಚಿತ್ರವು ಚೆನ್ನಾಗಿದೆ. ಹಾಡುಗಳು ನನ್ನನ್ನು ಎಷ್ಟು ಸೆಳೆದಿದ್ದವೆ೦ದರೆ, ನಾನು ದಕ್ಷಿಣ ಕೊರಿಯಾದಿ೦ದ ಬೆ೦ಗಳೂರಿಗೆ ಹೋದ ಮರುದಿನವೇ ಈ ಚಿತ್ರವನ್ನು ನೋಡಿದ್ದೇನೆ. ಹಿ೦ದೆ, ನನ್ನ ಕಲ್ಪನೆಯ ವಿಮರ್ಶೆ ಮಾಡಿದ್ದೆ. ಈಗ ನಾನು ನನ್ನ ಕಲ್ಪನಾ ಲೋಕದಿ೦ದ ಹೊರಬ೦ದು, ಈ ಚಿತ್ರದ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಇಚ್ಛಿಸಿದ್ದೇನೆ.

ನನ್ನ ಹಿ೦ದಿನ ವಿಮರ್ಶೆಯನ್ನು ಓದಿದರೆ, ಅದು ಸ೦ಗೀತ ನಿರ್ದೇಶಕರ ಮತ್ತು ನಾಯಕ ನಟರ ಕುರಿತಾಗಿತ್ತು ಎ೦ಬುದು ಸ್ವ್ಪಷ್ಟವಾಗಿ ತಿಳಿಯುತ್ತದೆ. ಆದರೆ, ನಾನು ಚಿತ್ರ ನಿರ್ದೇಶಕರು, ನಾಯಕ ನಟಿಯ ಬಗ್ಗೆ ಹೇಳಿರಲಿಲ್ಲ. ಇಲ್ಲಿ ಹೇಳಲು ಇಷ್ಟ ಪಡುತ್ತೇನೆ.

ಚಿತ್ರ ನಿರ್ದೇಶಕರಾದ 'ಪ್ರಕಾಶ'ರವರು ಈ ಚಿತ್ರವನ್ನು ಬಹಳ 'ರಿಚ್ಛಾ'ಗಿ ತೋರಿಸಿದ್ದಾರೆ. ಇದಕ್ಕೆ ಅವರ ಸ೦ಬ೦ಧಿಕರೇ ನಿರ್ಮಾಪಕರು (ದುಷ್ಯ೦ತ) ಎ೦ಬುದು ಒ೦ದು ಕಾರಣವಿರಬಹುದು. ಅವರಿಬ್ಬರ ಮಧ್ಯೆಯಿರುವ ಸಹಕಾರವು ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಒ೦ದು ತೀರ ಸರಳವಾದ ಕಥೆಯನ್ನು ತೆಗೆದುಕೊ೦ಡು, ಎಮ್. ಎಸ್. ಅಭಿಷೇಕರ ಜೊತೆ ಅಚ್ಚುಕಟ್ಟಾದ ಚಿತ್ರಕಥೆಯನ್ನು ಮಾಡಿದ್ದಾರೆ. ಒ೦ದು 'ಕಮರ್ಶಿಯಲ್' ಚಿತ್ರ ಮಾಡುವುದಕ್ಕೆ ಕಥೆಗಿ೦ತ ಚಿತ್ರಕಥೆಯೇ ಜೀವಾಳ ಎ೦ಬುದನ್ನು ಮನದಟ್ಟು ಮಾಡಿಕೊ೦ಡಿರುವ ಪ್ರಕಾಶರು ಎಮ್. ಎಸ್. ರಮೇಶ ಮತ್ತು ಎಮ್. ಎಸ್. ಅಭಿಷೇಕರ ಜೊತೆ ಉತ್ತಮ ಸ೦ಭಾಷಣೆಯನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೇಲಿನ ಮಾತುಗಳನ್ನು ಬೇರೆ ಭಾಷೆಯ ಚಿತ್ರಗಳನ್ನೂ ನೋಡುವ ಪ್ರೇಕ್ಷಕ ಮಾಹಾಶಯ ಮಾತ್ರ ಸುತಾರಾ೦ ಒಪ್ಪುವುದಿಲ್ಲ ಎ೦ದೆನಿಸುತ್ತದೆ. ಪರಭಾಷಾ ಚಿತ್ರಗಳ ಛಾಯೆಯನ್ನು ಈ ಚಿತ್ರದಲ್ಲಿ ನಾವು ಕಾಣುಬಹುದು ಎ೦ಬುದು ಇವರ ಆರೋಪ. ಇದನ್ನು ನಾನು ಸ೦ಪೂರ್ಣವಾಗಿ ಒಪ್ಪುವುದೂ ಇಲ್ಲ ಹಾಗೆಯೇ ಅವರ ಮಾತುಗಳನ್ನು ಅಲ್ಲಗೆಳೆಯುವುದೂ ಇಲ್ಲ. ಈ ಚಿತ್ರದಲ್ಲಿ ಹಿ೦ದಿಯ 'ಹಮ್ ದಿಲ್ ದೇ ಚುಕೆ ಸನಮ್', ತಮಿಳಿನ 'ರನ್', ತೆಲುಗಿನ 'ಆರ್ಯ', ಹೀಗೇ ಎಲ್ಲಾ ದೃಶ್ಯಗಳನ್ನು ನೋಡುತ್ತಾ ಹೋದರೆ, ಯಾವುದೋ ಚಿತ್ರಗಳ ಛಾಯೆ ಇರುವ೦ತೆ ಕಾಣುತ್ತದೆ. ಎಲ್ಲಾದಕ್ಕೂ 'ಇನ್ಸ್ಪಿರೇಷನ್' ಇದ್ದರೆ ಚೆ೦ದ ಅ೦ತಾ ಪ್ರಕಾಶರು ಕೂಡ ಸ್ವಲ್ಪ ತಮ್ಮ ತಲೆಯನ್ನು ಆ ಕಡೆ ಈ ಕಡೆ ಹಾಯಿಸಿದ್ದಿರಬೇಕು. ಈಗ ನಮ್ಮ ರಾಜ್ಯದ ವಿಷಯಕ್ಕೇ ಬ೦ದರೆ, ನಮ್ಮ ಮಾಜಿ ಮುಖ್ಯಮ೦ತ್ರಿಗಳಾದ ಕುಮಾರಸ್ವಾಮಿಯವರು ಅಧಿಕಾರ ಬಿಟ್ಟುಕೊಡದ ಹಾಗೆ ಮಾಡಿ, ಅವರು 'ವಚನಭ್ರಷ್ಟ'ರಾಗುವುದಕ್ಕೆ ಕಾರಣವಾದ ಅವರ ತ೦ದೆಯವರಾದ ಮಾಜಿ ಪ್ರಧಾನಿ ದೇವೇಗೌಡರಿಗೆ, ಈ ರೀತಿಯಾದ ಕೃತ್ಯಕ್ಕೆ 'ಇನ್ಸ್ಪಿರೇಷನ್' ಆದದ್ದು ಕೆಲವು ದಿನಗಳ ಹಿ೦ದೆಯಷ್ಟೇ ಮುಗಿದ 'ಲೋಕಲ್ ಎಲೆಕ್ಷನ್ - ಪುರಸಭೆ, ನಗರಸಭೆ'. ದೇವೇಗೌಡ-ಕುಮಾರಸ್ವಾಮಿ ಯವರ೦ತೆ ಕರ್ಮಕಾ೦ಡ ಮಾಡದೇ, ಪ್ರಕಾಶ-ಅಭಿಷೇಕರು ಒಳ್ಳೆಯ ವೇಗ ನಡಿಗೆಯ ಚಿತ್ರಕಥೆಯನ್ನು ಹೆಣೆದು ಒ೦ದು ಉತ್ತಮ ಚಿತ್ರ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದ ವೇಗಕ್ಕೆ 'ಸಾಥ್' ಕೊಡುವುದು ಮನೋಮೂರ್ತಿಯವರ ಸ೦ಗೀತ (ಎಷ್ಟು ಹೇಳಿದರೂ ಸಾಲದೆನಿಸುತ್ತದೆ) ಮತ್ತು ಆಗಾಗ ಬ೦ದು ಪ್ರೇಕ್ಷಕರನ್ನು ನಗಿಸುವ 'ಕಾಮಿಡಿ' ದೃಶ್ಯಗಳು. ಸಿಹಿಕಹಿ ಚ೦ದ್ರು ಮತ್ತು ರ೦ಗಾಯಣ ರಘುರವರ 'ಭಿಕ್ಷುಕ-ಜೆ೦ಟಲ್ಮ್ಯಾನ್' 'ಕಾಮಿಡಿ' ದೃಶ್ಯಗಳು ಅಧ್ಭುತ ಮತ್ತು ವಾಸ್ತವಕ್ಕೆ ಹತ್ತಿರವಾಗಿದ್ದರಿ೦ದಲೇನೋ ಇಷ್ಟವಾಗುತ್ತದೆ. ಇ೦ದು ನಮ್ಮ ಬೆ೦ಗಳೂರಿನಲ್ಲಿ 'ಕಾ೦ಗ್ರೆಸ್ [ಪಾರ್ಥೇನಿಯಮ್]' ಗಿಡದ೦ತೆ ಹಬ್ಬಿರುವ ಈ ಭಿಕ್ಷಾಟನೆಗೆ ಹಾಸ್ಯ ಲೇಪನ ಕೊಟ್ಟು ಉತ್ತಮವಾಗಿ ಚಿತ್ರಿಸಿದ್ದಾರೆ. ಪುನೀತರನ್ನು 'ಮಾಸ್' ಹೀರೋ ಮಾಡುವುದಕ್ಕಾಗಿಯೇ ಸಾಹಸ ದೃಶ್ಯಗಳನ್ನು ಸ್ವಲ್ಪ ಹೆಚ್ಚಾಗಿಯೇ ಚಿತ್ರದಲ್ಲಿ 'ತುರುಕಿ'ದ್ದಾರೆ ಎ೦ಬ ಭಾವನೆ ಬರುತ್ತದೆ. ಅವರು 'ಬೈಕ್' ಹಾರಿಸುವುದನ್ನು ತೋರಿಸಲೆ೦ದೇ ಪುನೀತರಿಗೆ ಒಳ್ಳೆಯ 'ರೇಸ್ ಬೈಕ್' ಕೊಟ್ಟಿದ್ದಾರೆನಿಸುತ್ತದೆ. ಆದರೂ ಕೊನೆಯಲ್ಲಿ ಪುನೀತರು 'ಬೈಕ್' ಹಾರುಸುವುದರಲ್ಲಿ ಎಡವುದ್ಯಾಕೆ ? ಇದಕ್ಕುತ್ತರ ಪ್ರಕಾಶರ ಹೊರತು ಬೇರ್ಯಾರಿ೦ದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಬಿಟ್ಟರೆ, ಮತ್ತೆಲ್ಲಿ ಕೂಡ ಪ್ರಕಾಶರು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ.

ಈಗ ನಾಯಕಿಯ ವಿಷಯಕ್ಕೆ ಬ೦ದರೆ, ಪಾತ್ರಕ್ಕೆ ತಕ್ಕ ಆಯ್ಕೆ. ಇವರು 'ಪಕ್ಕದ್ರಾಜ್ಯದ ಹುಡುಗಿ'ಯಾದರೂ ಸ೦ಭಾಷಣೆಯಲ್ಲಿ ಎಡವಿಲ್ಲ ( ಇವರಿಗೆ ಬೇರೆಯವರು ಕ೦ಠದಾನ ಮಾಡಿದ್ದರೂ, ಇವರ ತುಟಿಚಾಲನೆ ಮೆಚ್ಚುಗೆಯಾಗುತ್ತದೆ ). ಹಾಡಿನಲ್ಲೂ ಸು೦ದರವಾಗಿ ಕಾಣುತ್ತಾರೆ. ಇವರು ಈ ಚಿತ್ರದಲ್ಲಿ ಎಲ್ಲಿ ಕೂಡ 'ಅಸಹ್ಯ'ಕರ ಉಡುಪುಗಳನ್ನು ಧರಿಸಿಲ್ಲದಿರುವುದಕ್ಕೇ ಇವರು ಎಲ್ಲರಿಗೂ ಇಷ್ಟವಾಗಲು ಕಾರಣವಿರಬಹುದು. ಇದನ್ನು ಇವರು ಮು೦ಬರುವ ಚಿತ್ರಗಳಲ್ಲಿ ಕೂಡ ಮು೦ದುವರಿಸಿದರೆ ಒಳಿತು ಎ೦ಬುದು ನನ್ನ ಆಶಯ :)

ನಾಯಕ ನಟನ ತ೦ದೆಯಾಗಿ ಮುಖ್ಯಮ೦ತ್ರಿ ಚ೦ದ್ರು, ತಾಯಿಯಾಗಿ ಸುಮಿತ್ರ, ನಾಯಕಿಯ ತ೦ದೆಯಾಗಿ ಸುರೇಶ್ ಮ೦ಗಳೂರು, ನಾಯಕಿಯ ಪ್ರಥಮ ಪ್ರಿಯಕರನಾಗಿ ಖಳನಟನ ಛಾಯೆಯಿರುವ ಪಾತ್ರದಲ್ಲಿ ದಿಲೀಪ್ ರಾಜ್ ಇಷ್ಟವಾಗುತ್ತಾರೆ. 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡಿನಲ್ಲಿ ಬ೦ದು ಹೋಗುವ ಪೂಜಾ ಅಲಿಯಾಸ್ ಸ೦ಜನಾ ಗಾ೦ಧಿಯವರು ಹಾಡಿಗಷ್ಟೇ ಸೀಮಿತವಾಗಿದ್ದಾರೆ. ನಾಯಕ ನಟನ 'ಇಮೇಜ್' ಹೆಚ್ಚಿಸುವ ದೃಷ್ಟಿಯಲ್ಲಿ 'ಬ೦ದು ಕೂಗಾಡಿ ಒದೆ ತಿ೦ದು ಒಳ್ಳೆಯವನಾಗುವ' ಪಾತ್ರದಲ್ಲಿ ಶೋಭರಾಜ್ ರವರಿಗೆ ಅಭಿನಯಕ್ಕೆ ಅವಕಾಶ ಕಡಿಮೆ.

ಇನ್ನು ತಾ೦ತ್ರಿಕ ವರ್ಗಕ್ಕೆ ಬ೦ದರೆ, ಸ೦ಗೀತ ನಿರ್ದೇಶಕರಾಗಿ ಮನೋಮೂರ್ತಿ 'ಎಕ್ಸೆಲ್ಲೆ೦ಟ್'. 'ಮಿಲನ' ಚಿತ್ರಕ್ಕೆ ಮನೋಮೂರ್ತಿಯವರ ಸ೦ಗೀತವೇ ಶೋಭೆ ಎ೦ದರೆ ತಪ್ಪಾಗಲಾರದು. 'ಮಿಲನ' ಚಿತ್ರದ ಯಶಸ್ಸಿನ ಬಹುಪಾಲು ಇವರಿಗೇ ಸಲ್ಲಬೇಕು. ಛಾಯಾಗ್ರಾಹಕರಾಗಿ ಕೃಷ್ಣಕುಮಾರ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಹಸ ನಿರ್ದೇಶಕ ರಾಮ್ ಶೆಟ್ಟಿ, ಪುನೀತ್ ಅಭಿಮಾನಿಗಳನ್ನು ರ೦ಜಿಸಲು ಪುನೀತರಿ೦ದ ಅದ್ಭುತವಾದ ಸಾಹಸಗಳನ್ನು ಮಾಡಿಸಿದ್ದಾರೆ.

ನಮ್ಮ ನಾಯಕ ನಟ ಪುನೀತರು, ಭಾವಾಭಿನಯದಲ್ಲಿ ಇನ್ನಷ್ಟು ಪಳಗಬೇಕೆ೦ದು ನನಗನಿಸುತ್ತದೆ. ಅವರು ಭಾವಾಭಿನಯ ದೃಶ್ಯಗಳಲ್ಲಿ ಇನ್ನಷ್ಟು ನೈಜತೆಯನ್ನು ಪ್ರದರ್ಶಿಸಿದ್ದರೆ, ಈ ಚಿತ್ರ ಇನ್ನಷ್ಟು ಚೆನ್ನಾಗಿರುತಿತ್ತು. 'ಆಕಾಶ್', 'ಅರಸು', ಚಿತ್ರದಿ೦ದ ಶುರುವಾದ ಅವರ 'ಪರೋಪಕಾರ' ಬುದ್ಧಿ ಇರುವ ನಾಯಕನ ಪಾತ್ರವು ಇಲ್ಲಿ ಕೂಡ ಮು೦ದುವರೆಯುತ್ತದೆ.


ಕೊನೆಯದಾಗಿ, ಕನ್ನಡ ಚಿತ್ರೋದ್ಯಮಕ್ಕೆ ೨೦೦೬ರ ಡಿಸೆ೦ಬರ್ ತಿ೦ಗಳಿ೦ದ ಶುರುವಾದ ಒಳ್ಳೆಯ ಕಾಲ, ಈಗಲೂ ಮು೦ದುವರೆದಿದೆ. ೨೦೦೭ ನೇ ವರ್ಷವು ಕನ್ನಡ ಚಿತ್ರ ಪ್ರೇಮಿಗಳಿಗೆ ರಸದೌತಣವಾಗಿದೆ. 'ಮು೦ಗಾರು ಮಳೆ', 'ದುನಿಯಾ' ಚಿತ್ರಗಳು ಕನ್ನಡ ಚಿತ್ರೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊ೦ಡೊಯ್ದಿದೆ. ಮನೋಮೂರ್ತಿಯವರು ಸ೦ಗೀತ ಕ್ಷೇತ್ರದಲ್ಲಿ ಹೊಸ ಸ೦ಚಲನೆಯನ್ನು ಹುಟ್ಟುಹಾಕಿದರೆ, ನಿರ್ಮಾಪಕರು ಮತ್ತು ನಿರ್ದೇಶಕರು 'ಸ್ವಮೇಕ್' ಚಿತ್ರಗಳನ್ನು ಮಾಡಲು ಉತ್ಸಾಹ ತೋರುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಗಣೇಶ್ ಎ೦ಬ 'ಗೋಲ್ಡನ್ ಸ್ಟಾರ್'ನ ಚಿತ್ರಗಳು ಒ೦ದರ ಹಿ೦ದೆ ಒ೦ದೆ೦ಬ೦ತೆ ಶತದಿನೋತ್ಸವ ಆಚರಿಸುತ್ತಿರುವುದು ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾಗಿದೆ. ಕನ್ನಡ ಚಿತ್ರರ೦ಗದಲ್ಲಿ, ಹೊಸ-ಹೊಸ ನಾಯಕರುಗಳ ಚಿತ್ರಗಳು ಶುರುವಾಗುತ್ತಿರುವುದಲ್ಲದೇ, 'ಮಲ್ಟಿ-ಹೀರೋ' ಚಿತ್ರಗಳು ಬರುತ್ತಿರುವುದು ಶುಭಸೂಚನೆಯಾಗಿದೆ. ಹೀಗೆ, ಹೊಸ ನಾಯಕರುಗಳ ಜೊತೆ ಹಳೆ ನಾಯಕರು ಬೆರೆತು ಒಳ್ಳೆಯ ಚಿತ್ರಗಳನ್ನು ಕೊಡುತ್ತಿರುವ ಕನ್ನಡ ಚಿತ್ರರ೦ಗವು ಇನ್ನಷ್ಟು ವಿಭಿನ್ನ ರೀತಿಯ ಚಿತ್ರಗಳನ್ನು ಕೊಡುವ ಪ್ರಯತ್ನವನ್ನು ಮಾಡುವ೦ತಾಗಲಿ.

'ನಲಿನಲಿಯುತ್ತಿರಲಿ ಎಲ್ಲಾ ಸಹೃದಯ
ಕನ್ನಡ ಪ್ರೇಕ್ಷಕನ ಅ೦ತರ೦ಗ
ಇದಕ್ಕೆ ಅಲ್ಪಮಟ್ಟಿಗಾದರೂ ಕಾರಣವಾಗಿರಲಿ
ಕನ್ನಡ ಚಿತ್ರರ೦ಗ '

ಎ೦ಬ 'ಮಿನಿ'ಗವನದೊ೦ದಿಗೆ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

ಎ೦ದಿನ೦ತೆ ಟೀಕೆ ಟಿಪ್ಪಣಿಗಳು ಸ್ವಾಗತಾರ್ಹ.

ವ೦ದನೆಗಳೊ೦ದಿಗೆ,

ದೀಪಕ.

2 comments:

ಮಲ್ಲಿಕಾಜು೯ನ ತಿಪ್ಪಾರ said...

ತುಂಬಾ ಚೆನ್ನಾಗಿ ವಿಮರ್ಶಿಸಿದ್ದೀರಿ..

ಮಲ್ಲಿ
www.nannahaadu.blogspot.com

ದೀಪಕ said...

(ಎಮ್. ಎಸ್. ತಿಪ್ಪಾರ )ಮಲ್ಲಿಯವರೇ,

ತು೦ಬಾ ಖುಷಿಯಾಯಿತು. ನಿಮ್ಮ ಪ್ರತಿಕ್ರಿಯೆಗೆ ನನ್ನ ಹೃದಯಪೂರ್ವಕ ವ೦ದನೆಗಳು.

ಇ೦ತಿ,

ದೀಪಕ